Home> Entertainment
Advertisement

ಕಿರುತೆರೆಯಲ್ಲಿ ಮತ್ತೆ ಮಿಂಚಲಿದ್ದಾರೆ ರಾಜಾ ರಾಣಿ...!

ಕಿರುತೆರೆಯಲ್ಲಿ ಮತ್ತೆ ಮಿಂಚಲಿದ್ದಾರೆ ರಾಜಾ ರಾಣಿ...!

ರಾಜ ರಾಣಿ ಕಿರುತೆರೆಯಲ್ಲಿ ಹೊಸ ಇತಿಹಾಸ ಸೃಷ್ಟಿ ಮಾಡಿರೋ ವಿಭಿನ್ನ ಶೋ ಎಂದು ಹೇಳಬಹುದು. ರಿಯಲ್ ಜೋಡಿಗಳ ರಿಯಾಲಿಟಿ ಶೋ ಈಗ ಬರೊಬ್ಬರಿ 12 ಜೋಡಿಗಳ ನೋವು-ನಲಿವುಗಳನ್ನ ಜನರ ಮುಂದೆ ಪ್ರಸ್ತುತಪಡಿಸಿದೆ. ಅದು ಸೆಲೆಬ್ರಿಟಿ ಕಪಲ್ ಆಗಿರಲಿ, ಅಥವಾ ಸಾಮಾನ್ಯ ಜೋಡಿಯೇ ಆಗಿರಲಿ ಎಲ್ಲ ಸಂಸಾರದ ಸಾರ ಹೊಂದಾಣಿಕೆ ಎಂಬ ಸೂಕ್ಷ್ಮತೆಯನ್ನು ಮನರಂಜನೆಯ ಮೂಲಕ ಜನರಿಗೆ ತಿಳಿಸಿದ ಕಾರ್ಯಕ್ರಮವೇ ರಾಜ ರಾಣಿ.

ಟಾಕಿಂಗ್​ ಸ್ಟಾರ್​ ಸೃಜನ್​ ಹಾಗೂ ಹಿರಿಯ ನಟಿ ತಾರಮ್ಮ ಈ ದೊಡ್ಡ ಶೋನ ಜಡ್ಜ್​ಗಳಾಗಿ ಕಾರ್ಯ ನಿರ್ವಹಿಸಿದ್ದರು.ಹಾಗೂ ತಮಗೆ ನೀಡಿದ ಆ ದೊಡ್ಡ ಜವಾಬ್ದಾರಿಗೆ ಅಚ್ಚು ಕಟ್ಟಾಗಿ ನಿರ್ವಹಿಸುವ ಮೂಲಕ ನ್ಯಾಯವನ್ನು ಒದಗಿಸಿದ್ದರು.ಜೋಡಿಯ ಸರಿ ತಪ್ಪುಗಳನ್ನ ತಿದ್ದುವುದು ಮಾತ್ರವಲ್ಲದೆ.ಅವರನ್ನು ನಗಿಸುತ್ತಾ, ಅವ್ರು ಕಷ್ಟಗಳನ್ನು ಕೇಳಿ ಭಾವುಕರಾಗಿದ್ದಾರೆ.ಕೆಲವೊಂದು ಸಂದರ್ಭಗಳಲ್ಲಿ ಜೋಡಿಗಳಿಗೆ ಬುದ್ದಿವಾದವನ್ನು ಕೂಡಾ ಹೇಳಿದ್ದಾರೆ. ಇನ್ನೊಂದೆಡೆಗೆ ಈ ಕಾರ್ಯಕ್ರಮವನ್ನು ನಟಿ ನಿರೂಪಕಿ ಅನುಪಮ ಗೌಡ ಅದ್ಬುತವಾಗಿ ಹೋಸ್ಟ್‌ ಮಾಡಿ ಪಟ ಪಟ ಮಾತುಗಳನ್ನಾಡುತ್ತಾ ಕಾರ್ಯಕ್ರಮದ ಕಳೆಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.

fallbacks

ಇದನ್ನೂ ಓದಿ: 'ಕೆಜಿಎಫ್ 3 ನಲ್ಲಿ ಮಾರ್ವೆಲ್ ರೀತಿಯ ಜಗತ್ತು ಸೃಷ್ಟಿಯಾಗಲಿದೆ'

ಇನ್ನೂ ರಾಜ ರಾಣಿ ಶೋ ಪ್ರೇಕ್ಷಕರಿಗೆ ಮನೊರಂಜನೆ ನೀಡುವುದು ಮಾತ್ರವಲ್ಲದೆ, ಈ ಶೋ ನೋಡಿ ಅದೆಷ್ಟೊ ಮನೆಯಲ್ಲಿ ಗಂಡ ಹೆಂಡತಿಯ ನಡುವಿನ ಬಾಂಧವ್ಯ ಕೂಡಾ ಜಾಸ್ತಿಯಾಗಿದೆ ಅಂತೆ..!  ಪ್ರತಿವಾರವೂ ಕೂಡಾ ಈ ಶೋನ ಪ್ರೇಕ್ಷಕರು ಜಾಚು ತಪ್ಪದೆ ವೀಕ್ಷಿಸುತ್ತಾ ಇದ್ದರೂ.. ಜೋಡಿಗಳಿಗೇ ನೀಡುವ ಟಾಸ್ಕ್‌ ಅಬ್ಬಬ್ಬಾ...! ಸೂಪರೋ ಸೂಪರ್‌..ಪ್ರತಿ ಟಾಸ್ಕ್‌ ಹಿಂದೆಯೂ ಫನ್‌ ಜೊತೆಗೆ ಒಂದೊಳ್ಳೆ ಮೆಸೇಜ್‌ ಕೂಡಾ ಗಂಡನ ಕಷ್ಟಗಳು ಹಾಗೂ ಅವ್ರ ಕೆಲಸಗಳು ಹೇರುತ್ತವೆ ಎಂಬುದರ ಮೇಲೆ ಹೆಂಡತಿಗೆ ಟಾಸ್ಕ್‌ ನೀಡುತ್ತಾ ಇದ್ದರು.

ಅದೇ ರೀತಿ ಹೆಂಡತಿ ಮನೆಯಲ್ಲಿ ಮಾಡುವ ಕೆಲಸಗಳು ಎಷ್ಟು ಕಷ್ಟ ಎಂಬುವುದನ್ನು ಗಂಡಂದಿರಿಗೆ ಟಾಸ್ಕ್‌ ಮೂಲಕ ತಿಳಿಸುವ ಪ್ರಯತ್ನವನ್ನು ರಾಜ ರಾಣಿ ಟೀಮ್‌ ಮಾಡ್ತಾ ಇತ್ತು.ಅದರಲ್ಲೂ ರಾಜ ರಾಣಿ ಶೋನ ಮೊದಲ ಎಪಿಸೋಡ್‌ ನ್ನು ಇಂದಿಗೂ ಕೂಡ ಪ್ರತಿಯೊಬ್ಬರು ನೆನಪಿನಲ್ಲಿಟ್ಟುಕೊಂಡಿದ್ದಾರೆ, ಹೌದು, ಮೊದಲ ಎಪಿಸೋಡ್​ ಮನಸ್ಸುಗಳ ಮಾತು ಮಧುರ ಕುರಿತು ಇರುವಂತದ್ದು.. ಈ ಸುತ್ತಿನಲ್ಲಿ ನಮ್ಮ ಜೋಡಿಗಳು.. ಮನಸ್ಸು ಬಿಚ್ಚಿ ಮಾತನಾಡುತ್ತಾರೆ.fallbacks

ಪ್ರತಿ ಜೋಡಿಯು ತಮ್ಮ ಜೀವನದಲ್ಲಿ ಹೇಳಿಕೊಳ್ಳಲಾಗದ ಸಂಗತಿಗಳ ಬಗ್ಗೆ  ಮುಕ್ತವಾಗಿ ಹಂಚಿಕೊಳ್ಳುತ್ತಾರೆ. ಈಗ ಅದರಲ್ಲಿ ಗಮನ ಸೆಳೆದ ಜೋಡಿ ಅಂದ್ರೆ ನೆಹಾ ಚಂದನ್ ಎಂದು ಹೇಳಬಹುದು. ನೇಹಾ ತಾನು ಒಂದು ಮಗುವನ್ನು ದತ್ತು ಪಡೆಯಬೇಕು ಎಂಬ ಎಷ್ಟೊ ವರ್ಷದ ಕನಸನ್ನು ಗಂಡ ಚಂದನ್​ಗೆ ವ್ಯಕ್ತಪಡಿಸಿದರು.ಇದಕ್ಕೆ ಚಂದನ್​ ಕೂಡಾ ಒಪ್ಪಿಗೆ ನೀಡಿದರು.. ಅವ್ರ ಮಾತು ಕಥೆ ಒಂದು ರೀತಿ ನೋಡುಗರಿಗೆ ಕಣ್ಣಲ್ಲಿ ನೀರು ತರಿಸಿತ್ತು ಎಂದು ಹೇಳಬಹುದು.. ಹೀಗೇ ಮನಸ್ಸುಗಳ ಮಾತು ಮಧುರ ಸುತ್ತಿನಲ್ಲಿ ಚಂದನ್​ ನಿವೇದಿತಾ ಹಾಗೂ ಅನು ಅಯ್ಯಪ್ಪಾ ಅವ್ರ ಮನದಾಳದ ಮಾತುಗಳು ಕೂಡಾ ಪ್ರೇಕ್ಷರಿಗೆ ದುಃಖ ತರಿಸಿತ್ತು.. ಇದೇ ತರ ರಾಜ ರಾಣಿ ಶೋನ ಟಾಸ್ಕ್​ಗಳು ಸಾಕಷ್ಟಿವೆ, ಒಂದೊಂದು ಎಪಿಸೋಡ್​ ಬಗ್ಗೆ ಹೇಳೊಕೆ ಹೊರಟರೆ ಅದಕ್ಕೆ ಒಂದು ದಿನ ಕೂಡಾ ಸಾಲದು.. ಅಷ್ಟರ ಮಟ್ಟಿಗೆ ಈ ಶೋ ಎಂಟರ್​ಟೈನ್​ ಮಾಡಿದೆ ಎಂದರೆ ತಪ್ಪಾಗಲಾರದು.

ಇದನ್ನೂ ಓದಿ:"ಓರಿಯೋ" ಇದು ಬಿಸ್ಕೆಟ್‌ ಅಲ್ಲ... ಅಬ್ದುಲ್‌ ಕಲಾಂ ಮಾತುಗಳಿಂದ ಸ್ಫೂರ್ತಿ ಪಡೆದ ಚಿತ್ರ..!

ಸದ್ಯ ಮುಗಿದು ಹೋಗಿರುವ ಈ ಶೋ ಬಗ್ಗೆ ಮತ್ತೆ ಯಾಕೆ ಇಷ್ಟೆಲ್ಲಾ ಮಾತು ಎಂಬ ಕುತೂಹಲ ನಿಮ್ಮಲ್ಲಿ ಮೂಡೋದು ಸಹಜ.. ಆದ್ರೆ ಅದಕ್ಕೆ ಒಂದು ಮುಖ್ಯ ಕಾರಣಯಿದೆ, ಅದೇನಪ್ಪಾ ಅಂದ್ರೆ ರಾಜಾ ರಾಣಿ ಸೀಸನ್‌ 2 ಸದ್ಯದಲ್ಲೆ ನಿಮ್ಮ ಮುಂದೆ ಬರಲಿದೆ.. ಹೌದು ಈಗಾಗಲೇ ರಾಜ ರಾಣಿ ಸೀಸನ್‌ 2 ಗೆ ಎಲ್ಲಾ ರೀತಿಯ ತಯಾರಿಗಳು ನಡಿತಾಯಿದೆ ಎಂಬ ಮಾಹಿತಿ ಕೂಡಾ ದೊರಕಿದೆ.ಮತ್ತೊಂದು ವಿಚಾರ ಏನಪ್ಪಾ ಅಂದ್ರೆ, ಕಳೆದ ಬಾರಿಗಿಂತ ಈ ಬಾರಿ ಇನ್ನೂ ವಿಭಿನ್ನವಾಗಿ ಶೋ ಮೂಡಿ ಬರಲಿದೆಯಂತೆ.ಇನ್ನೂ ಕಂಟೆಸ್ಟೆಂಟ್‌ಗಳ ವಿಚಾರಕ್ಕೆ ಬರೋದಾದ್ರೆ ಕುತೂಹಲವಂತೂ ಹೆಚ್ಚಿದೆ.. ಈ ಜೋಡಿ ಬರಬಹುದು, ಆ ಜೋಡಿ ಬರಬಹುದು ಎಂಬ ಉಹಾಪೋಹಗಳು ಈಗಾಗಲೇ  ಎಲ್ಲಡೆ ಸದ್ದು ಮಾಡ್ತಾಯಿವೆ.

fallbacks

ಕಳೆದ ರಾಜ ರಾಣಿ ಶೋನಲ್ಲಿ ಆ್ಯಕ್ಟಿಂಗ್​ ಮಾತ್ರವಲ್ಲದೆ ವಿಭಿನ್ನ ಫೀಲ್ಡ್​ಗಳಿಂದ ಬಂದವರು ಕೂಡಾ ಇದ್ದರು.ಇದಕ್ಕೆ ಉದಾಹರಣೆ ಎಂದರೆ ಪವನ್​-ಸುಮನ್​ ಜೋಡಿ ಎಂದು ಹೇಳಬಹುದು.ಪವನ್​ ಒಬ್ಬ ಸ್ಟಾಂಡಪ್​ ಕಾಮಿಡಿಯನ್​ ಹಾಗೂ ಸುಮನ್​ ಹೋಮ್​ಮೇಕರ್​.ಸುಮನ್​ ಅರೆ ಬರೆ ಕನ್ನಡವನ್ನು ಮಾತನಾಡುತ್ತಾ.ತಮ್ಮ ಮುದ್ದು ಕನ್ನಡದಲ್ಲಿಯೆ ಪಂಚಿಂಗ್​ ಡೈಲಾಗ್​ ಹೊಡೆದು ರಂಜಿಸಿದ್ದರು..ಹೀಗೇ ಈ ಬಾರಿ ಕೂಡಾ ಎಲ್ಲಾ ಫೀಲ್ಡ್‌ಗಳಿಂದ ಜೋಡಿಗಳ ಆಯ್ಕೆಯಾಗಬಹುದು ಎಂಬ ಪ್ರಶ್ನೆ ಪ್ರೇಕ್ಷಕರಲ್ಲಿ ಮನೆ ಮಾಡಿದೆ.

ಇದನ್ನೂ ಓದಿ: ಪೃಥ್ವಿ ಅಂಬಾರ್ ಹೊಸ ಸಿನಿಮಾದ ಶೂಟಿಂಗ್ ಕಂಪ್ಲೀಟ್ : ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಚಿತ್ರತಂಡ ಬ್ಯುಸಿ

ರಾಜರಾಣಿ ಶೋನ ಕಳೆದ ಸೀಸನ್‌ನಲ್ಲಿ ನಟಿ ನೇಹ ಗೌಡ ಹಾಗೂ ಚಂದನ್‌ ರಾಜ ರಾಣಿ ಪಟ್ಟವನ್ನು ಮುಡಿಗೇರಿಸಿಕೊಂಡಿದ್ದರು.. ಹಾಗೂ ಇಶಿತಾ ಮುರುಗ ಫಸ್ಟ್‌ ರನ್ನರ್‌ ಆಗಿ ಮಿಂಚಿದ್ದರು. ಶೋ ಮುಗಿದ ಬಳಿಕಾ ಪ್ರೇಕ್ಷಕರು ರಾಜ ರಾಣಿ ಕಾರ್ಯಕ್ರಮವನ್ನು ಮಿಸ್‌ ಮಾಡಿಕೊಳ್ತಾಯಿದ್ರೂ. ಇದೀಗ ರಾಜ ರಾಣಿ ಶೋ ಮತ್ತೆ ಬರ್ತಾಯಿರುವ ಸುದ್ದಿ ಪ್ರೇಕ್ಷಕರಿಗೆ ಖುಷಿ ನೀಡಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Read More