Home> Entertainment
Advertisement

ಪವಿತ್ರಾ ನರೇಶ್‌ ʼಮತ್ತೆ ಮದುವೆʼಗೆ ವಿಘ್ನ : ಕೋರ್ಟ್‌ ಮೆಟ್ಟಿಲೇರಿದ ರಮ್ಯಾ ರಘುಪತಿ

Matte Maduve : ಟಾಲಿವುಡ್‌ ನಟ ನರೇಶ್ ಮತ್ತು ನಟಿ ಪವಿತ್ರಾ ಲೋಕೇಶ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ ಎಂ.ಎಸ್. ರಾಜು ನಿರ್ದೇಶನದ ʼಮತ್ತೆ ಮದುವೆʼ ಚಿತ್ರಕ್ಕೆ ವಿಘ್ನ ಎದುರಾಗಿದೆ. ನರೇಶ್ ಅವರ ಪತ್ನಿ ರಮ್ಯಾ ರಘುಪತಿ ಈ ಚಿತ್ರ ಬಿಡುಗಡೆ ಮಾಡದಂತೆ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

ಪವಿತ್ರಾ ನರೇಶ್‌ ʼಮತ್ತೆ ಮದುವೆʼಗೆ ವಿಘ್ನ : ಕೋರ್ಟ್‌ ಮೆಟ್ಟಿಲೇರಿದ ರಮ್ಯಾ ರಘುಪತಿ

Pavithra lokesh- Naresh : ಮೇ 26ರಂದು ಬಿಡುಗಡೆಯಾಗಲಿರುವ ʼಮತ್ತೆ ಮದುವೆʼ ಸಿನಿಮಾ ಬಿಡುಗಡೆಗೆ ತಡೆ ನೀಡುವಂತೆ ನರೇಶ್‌ ಪತ್ನಿ ರಮ್ಯಾ ರಘುಪತಿ ಕೋರ್ಟ್‌ ಮೆಟ್ಟಿಲೇರಿದ್ದರು. ಈ ನಿಟ್ಟಿನಲ್ಲಿ ಹೈದರಾಬಾದ್‌ನ ಕುಕಟ್‌ಪಲ್ಲಿಯಲ್ಲಿರುವ ಕೌಟುಂಬಿಕ ನ್ಯಾಯಾಲಕ್ಕೆ ಮೊರೆ ಹೋಗಿದ್ದಾರೆ. ಅಲ್ಲದೆ ಈ ಚಿತ್ರದಲ್ಲಿನ ಕೆಲವು ದೃಶ್ಯಗಳಲ್ಲಿ ತಮ್ಮನ್ನು ಕೀಳಾಗಿ ತೋರಿಸಲಾಗಿದೆ ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ. ಚಿತ್ರ ಬಿಡುಗಡೆಗೆ ಕೆಲವೇ ಗಂಟೆಗಳು ಬಾಕಿ ಉಳಿದಿದ್ದು, ಕೋರ್ಟ್ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ.

ಮತ್ತೊಂದೆಡೆ, ನರೇಶ್ ಮತ್ತು ಪವಿತ್ರಾ ಲೋಕೇಶ್ ಟಿವಿ ವೇದಿಕೆಯೊಂದರಲ್ಲಿ ತಮ್ಮ ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು. ನಾವು ಸಂಬಂಧದಲ್ಲಿದ್ದೇವೆ. ಕೆಲವು ಊಹಾಪೋಹಗಳಿದ್ದವು. ನಾವು ನಮ್ಮ ಜೀವನಕ್ಕಾಗಿ ಹೋರಾಡುತ್ತಿದ್ದೇವೆ. ಈ ಜಗತ್ತಿನಲ್ಲಿ ಲಕ್ಷಾಂತರ ದಂಪತಿಗಳು ಈ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಅವರಲ್ಲಿ ನಾವೂ ಇದ್ದೇವೆ. ಸಮಾಜಕ್ಕೆ ಹೆದರಿ ಬದುಕುವುದು ಸರಿಯಲ್ಲ. ಅದಕ್ಕಾಗಿಯೇ ನಾವು ಈ ಚಿತ್ರವನ್ನು ನಿರ್ಮಿಸಲು ಬಯಸಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ: Divya Suresh : ರೆಡ್‌ ಫ್ಲೋರಲ್‌ ಡ್ರೆಸ್‌ನಲ್ಲಿ ನಟಿ ದಿವ್ಯಾ ಸುರೇಶ್ ಹಾಟ್‌ ಲುಕ್‌

ಅಲ್ಲದೆ, ಇದೊಂದು ಪ್ರಯೋಗಾತ್ಮಕ ಚಿತ್ರ. ಅನೇಕ ದೃಶ್ಯಗಳು ನಮ್ಮ ಜೀವನಕ್ಕೆ ಹತ್ತಿರವಾಗಿವೆ. ಸೆಲೆಬ್ರಿಟಿ ಜೋಡಿಯ ಮೂಲಕ ಹೇಳಿದರೆ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ ಎಂಬುದು ನಿರ್ದೇಶಕ ಎಂ.ಎಸ್.ರಾಜು ಅವರ ನಂಬಿಕೆ. ಅದಕ್ಕೆ ನಾವೂ ಒಪ್ಪಿಕೊಂಡೆವು. ಅಂದುಕೊಂಡಿದ್ದರೆ ನಮ್ಮ ಜೀವನದ ಕುರಿತು ಮಾಧ್ಯಮಗಳ ಮುಂದೆ ಬಂದು ಹೇಳುತ್ತಿದ್ದೇವು. ಸಿನಿಮಾ ಮಾಡುವ ಅಗತ್ಯವಿರಲಿಲ್ಲ. ಇದು ಕೇವಲ ಮನರಂಜನೆಗಾಗಿ ಎಂದು ನರೇಶ್ ಮತ್ತು ಪವಿತ್ರಾ ಲೋಕೇಶ್ ಸ್ಪಷ್ಟ ಪಡಿಸಿದರು.

ನರೇಶ್ ಮತ್ತು ಪವಿತ್ರಾ ಲೋಕೇಶ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಚಿತ್ರವನ್ನು ಎಂ.ಎಸ್. ರಾಜು ನಿರ್ದೇಶಿಸಿದ್ದಾರೆ. ಜಯಸುಧಾ, ಶರತ್ ಬಾಬು, ಅನ್ನಪೂರ್ಣ ಮುಂತಾದವರು ಈ ಚಿತ್ರದಲ್ಲಿದ್ದಾರೆ. ನರೇಶ್ ಮತ್ತು ರಮ್ಯಾ ರಘುಪತಿಗೆ ಡೈವೋರ್ಸ್‌ ಆಗಿಲ್ಲ. ಇದೆ ವೇಳೆ ಪವಿತ್ರ ಜೊತೆ ನರೇಶ್ ಅಫೇರ್ ಇಟ್ಟುಕೊಂಡಿದ್ದರು ಎಂಬ ವಿಚಾರ ಹಾಟ್ ಟಾಪಿಕ್ ಆಯಿತು. ಇಬ್ಬರು ಮದುವೆ ಆಗ್ತಾರೆ ಅಂತ ಹೇಳಲಾಗುತ್ತಿತ್ತು. ಅಲ್ಲದೆ, ರಮ್ಯಾ ರಘುಪತಿ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಸದ್ಯ ಸಿನಿಮಾ ಬಿಡುಗಡೆ ಮಾಡದಂತೆ ಕೋರ್ಟ್‌ ಮೊರೆ ಹೋಗಿದ್ದಾರೆ.

 ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Read More