Home> Entertainment
Advertisement

RRR ತಂಡದಲ್ಲಿ ಜೋರಾಗಿದೆ ಒಳಜಗಳ.. ಆಸ್ಕರ್‌ ಬಳಿಕ ಹೊರಬಿತ್ತು ಅಸಲಿ ವಿಷ್ಯ!

Natu Natu Oscar 2023 : ಇಡೀ ವಿಶ್ವವೇ ಇಷ್ಟೊಂದು ಬಿಗ್ ಬಜೆಟ್ ಸಿನಿಮಾವನ್ನು ಕುತೂಹಲದಿಂದ ನೋಡುತ್ತಿರುವ ಹೊತ್ತಿನಲ್ಲಿ ದಾನಯ್ಯ ಮಾತ್ರ ಎಲ್ಲೂ ತಂಡದ ಜೊತೆ ಕಾಣಿಸಿಕೊಂಡಿಲ್ಲ. ಈ ಸಮಾರಂಭದಲ್ಲಿ ರಾಜಮೌಳಿ ಅವರ ಕುಟುಂಬ, ಚಿತ್ರತಂಡ ಮತ್ತು ನಾಯಕರು ಭಾಗವಹಿಸಿದ್ದರು. ಆದರೆ ದಾನಯ್ಯ ಮಾತ್ರ ದೂರ ಉಳಿದಿದ್ದಾರೆ.  

RRR ತಂಡದಲ್ಲಿ ಜೋರಾಗಿದೆ ಒಳಜಗಳ.. ಆಸ್ಕರ್‌ ಬಳಿಕ ಹೊರಬಿತ್ತು ಅಸಲಿ ವಿಷ್ಯ!

RRR Producer Danayya : ಮೊನ್ನೆ ನಡೆದ ಆಸ್ಕರ್‌ 2023 ಅಲ್ಲಿ RRR ಚಿತ್ರದ ನಾಟು ನಾಟು ಹಾಡು ಈ ವರ್ಷ ಅತ್ಯುತ್ತಮ ಮೂಲ ಗೀತೆಯನ್ನು ಗೆದ್ದಿದೆ. ಇದರ ಜೊತೆಗೆ, ಸಾಕ್ಷ್ಯಚಿತ್ರ ಕಿರುಚಿತ್ರ ವಿಭಾಗದಲ್ಲಿ ಎಲಿಫೆಂಟ್ ವಿಸ್ಪರರ್ಸ್ ಪ್ರಶಸ್ತಿ ಬಾಚಿಕೊಂಡಿದೆ. ಸದ್ಯ RRR ತಂಡ ಆಸ್ಕರ್‌ ಗೆದ್ದ ಖುಷಿಯನ್ನು ಸಂಭ್ರಮಿಸುತ್ತಿದೆ. ಆದರೆ ನಿರ್ಮಾಪಕ ದಾನಯ್ಯ ಮಾತ್ರ ಈ ಸಂತಸದ ಭಾಗವಾಗದಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. 

ಇಡೀ ವಿಶ್ವವೇ ಇಷ್ಟೊಂದು ಬಿಗ್ ಬಜೆಟ್ ಸಿನಿಮಾವನ್ನು ಕುತೂಹಲದಿಂದ ನೋಡುತ್ತಿರುವ ಹೊತ್ತಿನಲ್ಲಿ ದಾನಯ್ಯ ಮಾತ್ರ ಎಲ್ಲೂ ತಂಡದ ಜೊತೆ ಕಾಣಿಸಿಕೊಂಡಿಲ್ಲ. ಈ ಸಮಾರಂಭದಲ್ಲಿ ರಾಜಮೌಳಿ ಅವರ ಕುಟುಂಬ, ಚಿತ್ರತಂಡ ಮತ್ತು ನಾಯಕರು ಭಾಗವಹಿಸಿದ್ದರು. ಆದರೆ ದಾನಯ್ಯ ಮಾತ್ರ ದೂರ ಉಳಿದಿದ್ದಾರೆ. ಅಸಲಿಗೆ ಏನಾಯ್ತು.. ದಾನಯ್ಯ ಯಾಕೆ ದೂರವಾದರು ಅನ್ನೋದು ಚಿತ್ರರಂಗದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಮಾಧ್ಯಮಗಳ ಒಂದು ವಿಭಾಗವೂ ಇದನ್ನು ಹೈಲೈಟ್ ಮಾಡುತ್ತಿದೆ.

ಇದನ್ನೂ ಓದಿ : Naatu Naatu Oscars 2023: ನಾಟು ನಾಟು ಹಾಡಿಗೆ ಆಸ್ಕರ್ ಖರೀದಿ ಮಾಡಿತಾ RRR ತಂಡ?

ರಾಜಮೌಳಿಗೆ ಏನಾದರೂ ಸಮಸ್ಯೆ ಇದೆಯಾ ಅಥವಾ ಆಸ್ಕರ್ ವಿಚಾರಕ್ಕೆ ಸಂಬಂಧಿಸಿದಂತೆ ಹಣ ಖರ್ಚು ಮಾಡುತ್ತಿಲ್ಲವೇ?ಬಾಹುಬಲಿ ನಿರ್ಮಾಪಕ ಶೋಭು ಅವರ ಜೊತೆಗಿದ್ದಾರೆ. ಅವರು ಅದನ್ನು ಇಷ್ಟಪಡುವುದಿಲ್ಲವೇ? ಹೀಗೆ ಹತ್ತು ಹಲವು ಪ್ರಶ್ನೆಗಳು ಹುಟ್ಟುಕೊಂಡಿವೆ. ಅವರು ದೂರ ಉಳಿಯಲು ನಿಜವಾದ ಕಾರಣವೇನು? ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡುತ್ತಿದೆ. 

RRR ಸಿನಿಮಾ ಆಸ್ಕರ್​ ಪ್ರಶಸ್ತಿ ಗೆಲ್ಲಲು ನಡೆಸಿದ ಪ್ರಯತ್ನಗಳ ಬಗ್ಗೆ ಹಲವು ಮಾತುಗಳು ಶುರುವಾಗಿವೆ. ಈ ಚಿತ್ರವನ್ನು ಸ್ವತಂತ್ರವಾಗಿ ಆಸ್ಕರ್​ ಸ್ಪರ್ಧೆಗೆ ಕಳಿಸಲು ನಿರ್ದೇಶಕ ರಾಜಮೌಳಿ ಸಾಕಷ್ಟು ಹಣ ವ್ಯಯಿಸಿದ ವಿಚಾರವೂ ಹರಿದಾಡುತ್ತಿದೆ. ಇತ್ತೀಚಿನ ದಿನಗಳಲ್ಲಿ ನಿರ್ಮಾಪಕ ಡಿವಿವಿ ದಾನಯ್ಯ ಚಿತ್ರತಂಡ ಸಂಪರ್ಕದಲ್ಲೇ ಇಲ್ಲ ಎಂಬ ಸತ್ಯ ಇದೀಗ ಬಟಾ ಬಯಲಾಗಿದೆ.

ಇದೀಗ ಎಎನ್​ಐ ಸುದ್ದಿ ಸಂಸ್ಥೆಗೆ ನಿರ್ಮಾಪಕ ಡಿವಿವಿ ದಾನಯ್ಯ ಪ್ರತಿಕ್ರಿಯೆ ನೀಡಿದ್ದಾರೆ. "ಪ್ರಶಸ್ತಿ ಬಂದಿದ್ದಕ್ಕೆ ಸಂತಸವಾಗಿದೆ. ಆದರೆ ನಾನು ಯಾರ ಜೊತೆಯೂ ಸಂಪರ್ಕದಲ್ಲಿಲ್ಲ" ಎಂದು ಹೇಳಿದ್ದಾರೆ. 

ಇದನ್ನೂ ಓದಿ : ಹಾಲಿವುಡ್ ಮಾಧ್ಯಮದ ಮೇಲೆ ದೀಪಿಕಾ ಪಡುಕೋಣೆ ಅಭಿಮಾನಿಗಳು ಗರಂ ಆಗಿದ್ದೇಕೆ ?

ಈ ಎಲ್ಲಾ ಘಟನೆಗಳ ನಡುವೆ, ನಿರ್ಮಾಪಕ ದಾನಯ್ಯ ಚಿತ್ರ ಬಿಡುಗಡೆಯಾಗಿ ಬ್ಲಾಕ್ ಬಸ್ಟರ್ ಆದ ನಂತರ ಬಹುತೇಕ ದೂರ ಉಳಿದಿರುವುದಕ್ಕೆ ಮತ್ತೊಂದು ಕಾರಣವಿದೆಯಂತೆ. ಆಸ್ಕರ್ ಪ್ರಚಾರಕ್ಕಾಗಿ ಯಾವುದೇ ಮೊತ್ತವನ್ನು ಖರ್ಚು ಮಾಡಲು ದಾನಯ್ಯ ಆಸಕ್ತಿ ತೋರಲಿಲ್ಲ ಎಂಬುದು ಉದ್ಯಮದ ಸುದ್ದಿ. ವಿಶಿಷ್ಟವಾದ ಆಸ್ಕರ್ ಅಭಿಯಾನಕ್ಕೆ ಭಾರೀ ಮಾರ್ಕೆಟಿಂಗ್, ಟೂರಿಂಗ್ ಮತ್ತು ಔಟ್‌ರೀಚ್ ಚಟುವಟಿಕೆಗಳ ಅಗತ್ಯವಿರುತ್ತದೆ, ಅದರಲ್ಲಿ ದಾನಯ್ಯ ಹೆಚ್ಚು ಆಸಕ್ತಿ ತೋರಿಸಲಿಲ್ಲ ಎಂಬ ಆರೋಪವೂ ಇದೆ.

ದಾನಯ್ಯ ಎಲ್ಲಿಯೂ ಹಾಜರಾಗದೇ ಇರುವುದಕ್ಕೆ ಇದೂ ಕೂಡ ಮುಖ್ಯ ಕಾರಣವಾಗಿತ್ತು ಎನ್ನಲಾಗ್ತಿದೆ. ಇತ್ತೀಚಿನ ಸಂದರ್ಶನವೊಂದರಲ್ಲಿ ನಿರ್ಮಾಪಕರು ಆರ್‌ಆರ್‌ಆರ್ ತಂಡದ ಬಗ್ಗೆ ಹೆಮ್ಮೆಪಡುತ್ತೇನೆ ಮತ್ತು ಅವರ ಚಿತ್ರಕ್ಕೆ ಆಸ್ಕರ್ ಸಿಗುತ್ತಿದೆ ಎಂದು ಹೇಳಿದ್ದರು (ಆಸ್ಕರ್‌ಗೂ ಮೊದಲು ನಡೆದ ಸಂದರ್ಶನದಲ್ಲಿ). ಆಸ್ಕರ್ ವೇದಿಕೆಗೆ ಹೋಗುವ ಮೊದಲು ರಾಜಮೌಳಿ, ಎನ್‌ಟಿಆರ್ ಅಥವಾ ರಾಮ್ ಚರಣ್ ಮೂವರಲ್ಲಿ ಯಾರೂ ಅವರನ್ನು ಸಂಪರ್ಕಿಸಿಲ್ಲ ಎಂದು ದಾನಯ್ಯ ಹೇಳಿದ್ದಾರೆ ಎನ್ನಲಾಗಿದೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More