Home> Entertainment
Advertisement

Prashant Sambargi : ಬಿಗ್‌ ಬಾಸ್‌ ಖ್ಯಾತಿಯ ಪ್ರಶಾಂತ್‌ ಸಂಬರ್ಗಿ ಕಿರುತೆರೆಗೆ ಎಂಟ್ರಿ 

Prashant Sambargi: ಪ್ರಶಾಂತ್‌ ಸಂಬರ್ಗಿ ಎಂದರೆ  ಪ್ರತಿ ಬಾರಿ  ವಾದ ವಿವಾದ, ವಾಕ್‌ ಸಮರಗಳಲ್ಲೇ ಸುದ್ದಿಯಲ್ಲಿರುತ್ತಾರೆ. ಯಾವುದೇ ವಿಷಯವಾದರೂ ಪ್ರತಿಕ್ರಿಯೆಯಲ್ಲಿ ಮುಂದು ಇರುತ್ತಾರೆ.  ಆದರೆ ಇದೀಗ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆಂದು ಎಂಬ ಸುದ್ದಿ ಹೊರ  ಬಿದ್ದಿದೆ. 

 Prashant Sambargi : ಬಿಗ್‌ ಬಾಸ್‌ ಖ್ಯಾತಿಯ ಪ್ರಶಾಂತ್‌ ಸಂಬರ್ಗಿ ಕಿರುತೆರೆಗೆ ಎಂಟ್ರಿ 

ಬೆಂಗಳೂರು: ಬಿಗ್ ಬಾಸ್ ಪ್ರವೇಶದ ಬಳಿಕ ಖ್ಯಾತಿ ಪೆಡದ  ಪ್ರಶಾಂತ್‌ ಸಂಬರ್ಗಿ ಸಣ್ಣ ಪುಟ್ಟ ಪ್ರತಿಭಟನೆ ಮಾಡುತ್ತಿದ್ದರು. ಆದಾದ ಬಳಿಕ  ಕನ್ನಡ ಬಿಗ್ ಬಾಸ್ ಸೀಸನ್‌ 8ರಲ್ಲಿ ಸ್ಪರ್ಧಿಸಿದ್ದರು. ನೇರ ನಡೆ ನುಡಿ ಮೂಲಕವೇ ಎಲ್ಲರ ಮನ ಗೆದ್ದಿದ್ದರು.

ನಂತರ ‘ಬಿಗ್ ಬಾಸ್ ಕನ್ನಡ 9’ ಕಾರ್ಯಕ್ರಮದಲ್ಲಿ ‘ಸೀನಿಯರ್’ ಆಗಿ ಮರು ಎಂಟ್ರಿ ಪಡೆದರು. ಪ್ರತಿ ಬಾರಿ  ವಾದ, ವಿವಾದ, ವಾಕ್‌ ಸಮರಗಳಲ್ಲೇ ಸುದ್ದಿಯಾಗುತ್ತಾರೆ ಯಾವುದೇ ವಿಷಯವಾದರೂ ಮೊದಲು ಪ್ರತಿಕ್ರಿಯಿಸುತ್ತಿದ್ದರು . ಆದರೆ ಇದೀಗ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆಂದು ಸುದ್ದಿ ಹೊರ  ಬಿದ್ದಿದೆ. 

ಇದನ್ನೂ ಓದಿ: Salman Khan : ಬಾಲಿವುಡ್‌ ಬಾದ್‌ ಷಾ ಸಲ್ಲುಗೆ ಬಂತು ಮತ್ತೊಂದು ಜೀವ ಬೆದರಿಕೆ ಕರೆ 

ಹೌದು, ಹೋರಾಟಗಾರ , ಬಿಗ್‌ ಬಾಸ್‌ ಖ್ಯಾತಿಯ ಘಟನುಘಟಿ ನಾಯಕ ಪ್ರಶಾಂತ್‌ ಸಂಬರ್ಗಿ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ಧಾರಾವಾಹಿ ಲೋಕದಲ್ಲಿ ಮಿಂಚಲು  ಸಂಬರ್ಗಿ ಸಜ್ಜಾಗಿದ್ದಾರೆ. ‘ಕೆಂಡಸಂಪಿಗೆ’ ಸಂಪಿಗೆ ಎಂಬ  ಧಾರವಾಹಿ ಮೂಲಕ ಮತ್ತಷ್ಟು ಮೈಲಿಗಲ್ಲಿಸ್ಥಾಪಿಸಲು ಬರಲಿದ್ದಾರೆ. . ‘ಕೆಂಡಸಂಪಿಗೆ’ ರಾಜಕೀಯ ವಿಚಾರ ಆಧರಿತ  ಧಾರಾವಾಹಿಯಾಗಿದೆ.

ಇದನ್ನೂ ಓದಿ: ಒಂದೇ ದಿನಕ್ಕೆ ಧೂಮಪಾನ, ಮದ್ಯಪಾನವನ್ನು ಬಿಡುವ ಸುಲಭ ಮಾರ್ಗ ಹೇಳಿದ ಬಿಗ್‌ ಬಿ

ಎಲೆಕ್ಷನ್ ಹತ್ತಿರ ಸಮಯದಲ್ಲಿ ‘ರಾಜಕೀಯ ಚಾಣಕ್ಯ’ನಾಗಿ ಪ್ರಶಾಂತ್ ಸಂಬರಗಿ ಕಾಣಿಸಿಕೊಂಡಿದ್ದಾರೆ. ಜನಧ್ವನಿ ಪಕ್ಷದ ಸೆಂಟ್ರಲ್ ಮಿನಿಸ್ಟರ್ ಭೈರತಿ ಕುಣಿಗಲ್ ಪಾತ್ರದಲ್ಲಿ ಪ್ರಶಾಂತ್ ಸಂಬರ್ಗಿ ನಟಿಸುತ್ತಿದ್ದಾರೆ. ಭೈರತಿ ಕುಣಿಗಲ್  ಅಂಶವನ್ನು ಆಧಾರಿಸಿ  ಸಂಬರಗಿ ಬಣ್ಣ ಹಚ್ಚಿದ್ದಾರೆ. ಸದ್ಯ  ಭೈರತಿ ಕುಣಿಗಲ್‌ ಪಾತ್ರ ಹೇಗೆಲ್ಲಾ ಮೂಡಿ ಬರಲಿದೆ ಅನ್ನೋದೆ ಕುತೂಹಲವಾಗಿದೆ.

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Read More