Home> Entertainment
Advertisement

ಶ್ರೀರಾಮ, ವಿಷ್ಣುವಿನ ಪಾತ್ರವಾಯ್ತು ಇದೀಗ 'ಕಣ್ಣಪ್ಪ' ಚಿತ್ರದಲ್ಲಿ ʼಶಿವʼನಾದ ಪ್ರಭಾಸ್‌..!

Vishnu Manchu Kannappa movie : ಶ್ರೀರಾಮಚಂದ್ರ, ಶ್ರೀಮಹಾವಿಷ್ಣುವಿನ ಪಾತ್ರದ ನಂತರ ರೆಬಲ್‌ ಸ್ಟಾರ್‌ ಪ್ರಭಾಸ್‌ ಭಗವಾನ್‌ ಶಿವನ ಪಾತ್ರದಲ್ಲಿ ನಟಿಸಲಿದ್ದಾರೆ. ವಿಷ್ಣು ಮಂಚು ನಟನೆಯ ಮುಂಬರುವ ಭಕ್ತಿಪ್ರಧಾನ ಚಿತ್ರದಲ್ಲಿ ಡಾರ್ಲಿಂಗ್‌ ಕಾಣಿಸಿಕೊಳ್ಳಲಿದ್ದಾರೆ. ಈ ಕುರಿತ ಕಂಪ್ಲೀಟ್‌ ಡಿಟೈಲ್ಸ್‌ ಇಲ್ಲಿವೆ ನೋಡಿ..

ಶ್ರೀರಾಮ, ವಿಷ್ಣುವಿನ ಪಾತ್ರವಾಯ್ತು ಇದೀಗ 'ಕಣ್ಣಪ್ಪ' ಚಿತ್ರದಲ್ಲಿ ʼಶಿವʼನಾದ ಪ್ರಭಾಸ್‌..!

Prabhas in Kannappa movie : ‘ಆದಿಪುರುಷ’ ಸಿನಿಮಾದಲ್ಲಿ ರೆಬೆಲ್ ಸ್ಟಾರ್ ಪ್ರಭಾಸ್ ಪುರುಷೋತ್ತಮ ಶ್ರೀರಾಮಚಂದ್ರನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಪ್ರಸ್ತುತ ಚಿತ್ರೀಕರಣದಲ್ಲಿರುವ ಪ್ಯಾನ್ ವರ್ಲ್ಡ್ ಚಿತ್ರ 'ಕಲ್ಕಿ 2898 AD' ನಲ್ಲಿ ಶ್ರೀಮಹಾವಿಷ್ಣುವಿನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಅಲ್ಲದೆ ಇದೀಗ ಮುಂಬರುವ ಭಕ್ತಿಪ್ರಧಾನ ಸಿನಿಮಾವೊಂದರಲ್ಲಿ ಶಿವನ ಪಾತ್ರದಲ್ಲಿ ಡಾರ್ಲಿಂಗ್‌ ಕಾಣಿಸಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.

ಹೌದು.. ಡೈನಾಮಿಕ್ ಸ್ಟಾರ್ ವಿಷ್ಣು ಮಂಚು ಅಭಿನಯದ ಭಕ್ತಿ ಪ್ರಧಾನ ಚಿತ್ರ 'ಕಣ್ಣಪ್ಪʼ - ಎ ಟ್ರೂ ಎಪಿಕ್ ಇಂಡಿಯನ್ ಟೇಲ್ ಚಿತ್ರದಲ್ಲಿ ಪ್ರಭಾಸ್ ಶಿವನಾಗಿ ಕಾಣಿಸಿಕೊಳ್ಳಲಿದ್ದಾರಂತೆ. ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಈ ಸಿನಿಮಾ ರಿಲೀಸ್‌ ಆಗಲಿದೆ. ಇತ್ತೀಚಿಗೆ ಶ್ರೀಕಾಳಹಸ್ತಿ ದೇಗುಲದಲ್ಲಿ ಈ ಚಿತ್ರದ ಮುಹೂರ್ತ ನೆರವೇರಿತು, ಶೀಘ್ರದಲ್ಲೇ ಚಿತ್ರೀಕರಣ ಆರಂಭವಾಗಲಿದೆ. 

ಇದನ್ನೂಓದಿ:ಕನ್ಯತ್ವ ಕಳೆದುಕೊಳ್ಳಲು ಸರಿಯಾದ ವಯಸ್ಸೆಷ್ಟು? ಸಂಚಲನ ಸೃಷ್ಟಿಸಿದ ಕಾಲಿವುಡ್‌ ನಟಿ ಸ್ಟೇಟ್‌ಮೆಂಟ್‌!!

‘ಕಣ್ಣಪ್ಪ’ ಚಿತ್ರದಲ್ಲಿ ಪ್ರಭಾಸ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದನ್ನು ವಿಷ್ಣು ಮಂಚು ಖಚಿತಪಡಿಸಿದ್ದಾರೆ. ಈ ಚಿತ್ರದಲ್ಲಿ ಪ್ರಭಾಸ್‌ ಶಿವನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ಹಾಲಿವುಡ್ ಮಟ್ಟದಲ್ಲಿ ‘ಭಕ್ತ ಕಣ್ಣಪ್ಪ’ ಸಿನಿಮಾ ಮಾಡಬೇಕು ಅಂತ ವಿಷ್ಣು ಮಂಚು ಕೆಲ ವರ್ಷಗಳಿಂದ ಹೇಳುತ್ತಿದ್ದರು. ಕೆಲ ದಿನಗಳ ಹಿಂದೆ ಈ ಚಿತ್ರಕ್ಕೆ ಚಾಲನೆ ನೀಡಲಾಗಿತ್ತು.

ತೆಲುಗು ಪ್ರೇಕ್ಷಕರಿಗೆ 'ಭಕ್ತ ಕಣ್ಣಪ್ಪ' ಎಂದರೆ ನೆನಪಾಗುವುದು ರೆಬೆಲ್ ಸ್ಟಾರ್ ಪ್ರಭಾಸ್ ಅವರ ದೊಡ್ಡಪ್ಪ ಕೃಷ್ಣಂರಾಜು. ಅವರು ನಾಯಕನಾಗಿ ನಟಿಸಿದ್ದ ‘ಭಕ್ತ ಕಣ್ಣಪ್ಪ’ ಟಾಲಿವುಡ್‌ನ ಹಿಟ್‌ ಸಿನಿಮಾಗಳಲ್ಲಿ ಒಂದು. ಈಗ ವಿಷ್ಣು ‘ಕಣ್ಣಪ್ಪ’ನಾಗಿ ನಟಿಸುತ್ತಿದ್ದು, ಪ್ರಭಾಸ್ ಶಿವನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. 

ಇದನ್ನೂಓದಿ: ದಕ್ಷಿಣದ ಅತ್ಯಂತ ದುಬಾರಿ ನಟಿ ಇವರೇ : ಸಮಂತಾ, ಅನುಷ್ಕಾ ಅಲ್ಲ.. ಎರಡು ಮಕ್ಕಳ ತಾಯಿ ಈ ಬೆಡಗಿ!

ಲೆಜೆಂಡರಿ ನಟ, ಕಲೆಕ್ಷನ್ ಕಿಂಗ್, ವಿಷ್ಣು ಮಂಚು ಅವರ ತಂದೆ ಮೋಹನ್ ಬಾಬು ಅವರ 24 ಫ್ರೇಮ್ಸ್ ಫ್ಯಾಕ್ಟರಿ ಬ್ಯಾನರ್‌ ಅಡಿಯಲ್ಲಿ 'ಕಣ್ಣಪ್ಪ' ಚಿತ್ರ ನಿರ್ಮಾಣವಾಗುತ್ತಿದೆ. ಸ್ಟಾರ್ ಪ್ಲಸ್ ಟಿವಿಯಲ್ಲಿ ಮಹಾಭಾರತ ಸರಣಿಯನ್ನು ನಿರ್ಮಿಸಿದ್ದ ಮುಖೇಶ್ ಕುಮಾರ್ ಸಿಂಗ್ ಅವರು 'ಕಣ್ಣಪ್ಪ' ಚಿತ್ರವನ್ನು ನಿರ್ದೇಶಿಸಲಿದ್ದಾರೆ. 

ಸುಮಾರು ರೂ. 150 ಕೋಟಿ ವೆಚ್ಚದಲ್ಲಿ ಚಿತ್ರ ನಿರ್ಮಾಣವಾಗಲಿದೆ. ಲೆಜೆಂಡರಿ ಬರಹಗಾರರಾದ ಪರುಚೂರಿ ಗೋಪಾಲ ಕೃಷ್ಣ, ಬುರ್ರಾ ಸಾಯಿ ಮಾಧವ್ ಮತ್ತು ತೋಟ ಪ್ರಸಾದ್ ಕಥೆ ಬರೆದಿದ್ದಾರೆ. ಈ ಚಿತ್ರಕ್ಕೆ ಮಣಿ ಶರ್ಮಾ ಮತ್ತು ಸ್ಟೀಫನ್ ದೇವಸಿ ಸಂಗೀತ ನೀಡಲಿದ್ದಾರೆ. ಈ ತಲೆಮಾರಿನ ಪ್ರೇಕ್ಷಕರಿಗೆ ಭಕ್ತ ಕಣ್ಣಪ್ಪ ಅವರ ಭಕ್ತಿಯ ಬಗ್ಗೆ ತಿಳಿಸುವುದು ಸಿನಿಮಾದ ಉದ್ದೇಶ ಎಂದು ನಟ ವಿಷ್ಣು ಮಂಚು ತಿಳಿಸಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More