Home> Entertainment
Advertisement

ಸಲಾರ್‌ ರಿಲೀಸ್‌ ವೇಳೆ ದುರ್ಘಟನೆ: ವಿದ್ಯುತ್‌ ತಗುಲಿ ಪ್ರಭಾಸ್‌ ಫ್ಯಾನ್‌ ಸಾವು!

Salaar Accident: ಪ್ರಭಾಸ್ ನಟನೆಯ ಸಲಾರ್ ಸಿನಿಮಾ ಬಿಡುಗಡೆ ಸಮಯದಲ್ಲಿ, ಆಂಧ್ರದ ಧರ್ಮಾವರಂನಲ್ಲಿ ಬಾಲರಾಜು ಎಂಬ ಅಭಿಮಾನಿಯೊಬ್ಬರಿಗೆ ವಿದ್ಯುತ್ ತಗುಲಿ ಕೊನೆಯುಸಿರೆಳೆದಿದ್ದಾರೆ. 'ಸಲಾರ್‌' ಚಿತ್ರದ ಫ್ಲೆಕ್ಸ್ ಕಟ್ಟಲು ಹೋದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ. 
 

ಸಲಾರ್‌ ರಿಲೀಸ್‌ ವೇಳೆ ದುರ್ಘಟನೆ: ವಿದ್ಯುತ್‌ ತಗುಲಿ ಪ್ರಭಾಸ್‌ ಫ್ಯಾನ್‌ ಸಾವು!

Prabhas Fan Dies During Salaar Release:'ಸಲಾರ್' ಸಿನಿಮಾ ಬಿಡುಗಡೆ ಹಿನ್ನೆಲೆ ಅನಂತಪುರದ ತಪೋವನ ಮೂಲದ ಬಾಲರಾಜು ಹಾಗೂ ಆತನ ಗೆಳೆಯರು ಫ್ಲೆಕ್ಸಿ ಫ್ರೇಂ ಮಾಡಿಸಿ, ಶ್ರೀಸತ್ಯಸಾಯಿ ಜಿಲ್ಲೆಯ ಧರ್ಮಾವರಂ ಪಟ್ಟಣದಲ್ಲಿ ರಂಗಾ ಸಿನಿ ಕಾಂಪ್ಲೆಕ್ಸ್ ಎದುರು ಮನೆಯೊಂದರ ಮೇಲೆ ಕಟ್ಟುತ್ತಿದ್ದಾಗ, ಆ ವೇಳೆ ಮನೆಯ ಮೇಲಿದ್ದ ವಿದ್ಯುತ್‌ ತಂತಿಗೆ ಫ್ರೇಮಿನ ಕಬ್ಬಿಣದ ರಾಡ್‌ ತಾಗಿ ಬಾಲರಾಜು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇದೇ ವೇಳೆ ವಿದ್ಯುತ್ ಶಾಕ್‌ನಿಂದ ಗಜೇಂದ್ರ ಎಂಬ ಮತ್ತೊಬ್ಬ ಯುವಕ ಗಾಯಗೊಂಡಿದ್ದು, ಇನ್ನು ನಾಲ್ವರು ಯುವಕರು ಅಪಘಾತದಲ್ಲಿ ಪಾರಾಗಿದ್ದಾರೆ. 

ತಪೋವನ ಮೂಲದ ಬಾಲರಾಜು ಕನಗಾನಪಲ್ಲಿ ಮಂಡಲದ ಮಾಮಿಲ್ಲಪಲ್ಲಿಯಲ್ಲಿ ಕೆಲ ದಿನಗಳಿಂದ ಸಣ್ಣ ವ್ಯಾಪಾರ ಮಾಡಿಕೊಂಡು ವಾಸವಾಗಿದ್ದವರು, ಸಲಾರ್‌ ಚಿತ್ರದ ರಿಲೀಸ್ ಹಿನ್ನೆಲೆ ಬಾಲರಾಜು, ಸ್ನೇಹಿತರ ಜೊತೆ ಅನಂತಪುರದಿಂದ ಧರ್ಮಾವರಕ್ಕೆ ಬಂದಿದ್ದರು. ಈ ದುರಂತ ಸಂಭವಿಸಿದ ನಂತರ, ಧರ್ಮವರಂ ಒನ್ ಟೌನ್ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಬಳಿಕ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. 

ಇದನ್ನೂ ಓದಿ: Salaar Leaked: ಸಲಾರ್ ತಂಡಕ್ಕೆ ಬಿಗ್‌ ಶಾಕ್.. ಫುಲ್‌ ಸಿನಿಮಾ HD ಪ್ರಿಂಟ್ ಆನ್‌ಲೈನ್‌ನಲ್ಲಿ ಲೀಕ್‌!

ಈ ಹಿಂದೆ ಕೂಡ ಸ್ಟಾರ್ ನಟರ ಸಿನಿಮಾಗಳ ಬಿಡುಗಡೆ ಸಮಯದಲ್ಲಿ ಇಂತಹ ದುರಂತಗಳು ನಡೆದಿದ್ದು, ಆದರೂ ಕೂಡ ಅಭಿಮಾನಿಗಳು ಎಚ್ಚೆತ್ತುಕೊಳ್ಳುತ್ತಿಲ್ಲ. ಇನ್ನು ಬಾಲರಾಜು ಸಾವಿನ ನಂತರ ಸಂಬಂಧಿಕರು ಮತ್ತು ಸ್ನೇಹಿತರು ಸ್ಥಳದಲ್ಲಿ ಧರಣಿ ನಡೆಸಿ ಆಕ್ರೋಶ ಹೊರ ಹಾಕಿದ್ದಾರೆ. ವಿದ್ಯುತ್ ತಂತಿ ಎತ್ತರದಲ್ಲಿ ಇರದೆ, ಕೆಳಗೆ ಇದ್ದಿದ್ದರಿಂದ ಬಾಲರಾಜುಗೆ ವಿದ್ಯುತ್ ತಗುಲಲು ಇದೇ ಮುಖ್ಯ ಕಾರಣ ಎಂದು ಆರೋಪಿಸಿದ್ದಾರೆ. ಅಷ್ಟೇ ಅಲ್ಲ ಆತನ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸುತ್ತಿದ್ದಾಗ, ಪೊಲೀಸರು ಪ್ರತಿಭಟನಾಕಾರರನ್ನು ಅಲ್ಲಿಂದ ತೆರವುಗೊಳಿಸಿದರು. 

ಇದೇ ವರ್ಷ ತಮಿಳು ನಟ ಅಜಿತ್ ಅಭಿಮಾನಿಯೊಬ್ಬ 'ತುನಿವು' ಸಿನಿಮಾ ರಿಲೀಸ್ ವೇಳೆ, ಚಲಿಸುತ್ತಿದ್ದ ಟ್ಯಾಂಕರ್ ಮೇಲೆ ಏರಿ ಸಂಭ್ರಮಚರಣೆಯಲ್ಲಿದ್ದಾಗ ಆಯತಪ್ಪಿ ಬಿದ್ದು ಮೃತಪಟ್ಟಿರುವ ಘಟನೆ ನಡೆದಿತ್ತು. ಚೆನ್ನೈನ ಕೋಯಂಬೆಡ್ ರೋಹಿಣಿ ಥಿಯೇಟರ್‌ ಬಳಿ ಈ ದುರಂತ ಸಂಭವಿಸಿದ್ದು, ಭರತ್ ಕುಮಾರ್ ಅಭಿಮಾನಿ ಈ ದುರ್ಘಟನೆಯಲ್ಲಿ ಪ್ರಾಣ ಕಳೆದುಕೊಂಡಿದ್ದ. ಇನ್ನು ತಮಿಳು ನಟ ಸೂರ್ಯ ಹುಟ್ಟುಹಬ್ಬದ ವೇಳೆ ಫ್ಲೆಕ್ಸ್ ಕಟ್ಟುತ್ತಿದ್ದಾಗ ವಿದ್ಯುತ್ ಸ್ಪರ್ಶಿಸಿ ಇಬ್ಬರು ಅಭಿಮಾನಿಗಳು ಮೃತಪಟ್ಟಿದ್ದ ಘಟನೆ, ಆಂಧ್ರದ ನರಸರಾವ್ ಪೇಟೆಯ ಮೊಪ್ಪುವಾರಿಪಾಲೆಂನಲ್ಲಿ ಈ ದುರಂತ ಸಂಭವಿಸಿತ್ತು. ನಕ್ಕಾ ವೆಂಕಟೇಶ್ ಮತ್ತು ಪೋಲೂರಿ ಸಾಯಿ ಎಂಬ ಇಬ್ಬರು ಅಭಿಮಾನಿಗಳು ಫ್ಲೆಕ್ಸ್ ಕಟ್ಟುವ ವೇಳೆ ವಿದ್ಯುತ್ ಸ್ಪರ್ಶಿಸಿ ಕೊನೆಯುಸಿರೆಳೆದಿದ್ದರು. 
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Read More