Home> Entertainment
Advertisement

Vinod Prabhakar: ಮರಿ ಟೈಗರ್ ಕ್ಯಾರಾವನ್‌ನಲ್ಲಿ ಅಪ್ಪು ಫೋಟೋ: ಇದರ ಹಿಂದಿರುವ ರಹಸ್ಯವೇನು?

Appu Photo In Vinod Caravan: ಸ್ಯಾಂಡಲ್‌ವುಡ್‌ ಮರಿ ಟೈಗರ್‌ ವಿನೋದ್‌ ಪ್ರಭಾಕರ್‌ ಕ್ಯಾರಾವಾನ್‌ನಲ್ಲಿ ಕರ್ನಾಟಕ ರತ್ನ ನಟ ಪುನೀತ್‌ ರಾಜ್‌ಕುಮಾರ್‌ ಭಾವಚಿತ್ರವಿದೆ. ಈ ನಟ ಪ್ರತಿದಿನ ಆ ಫೋಟೋಗೆ ಹೂವನಿಟ್ಟು ಪೂಜೆಯನ್ನು ಸಲ್ಲಲಿಸುತ್ತಾರೆ. ಇದರ ಇನ್ನಷೂ ಮಾಹಿತಿ ಇಲ್ಲಿದೆ.

Vinod Prabhakar: ಮರಿ ಟೈಗರ್ ಕ್ಯಾರಾವನ್‌ನಲ್ಲಿ ಅಪ್ಪು ಫೋಟೋ: ಇದರ ಹಿಂದಿರುವ ರಹಸ್ಯವೇನು?

Puneeth Rajkumar Photo In Vinod Prabhakar Caravan: ಕರ್ನಾಟಕದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿಮಾನಿಗಳಿಗೆ ಮಾತ್ರ ದೇವರೇ ಆಗಿರದೇ, ಸಿನಿಮಾರಂಗದ ನಟ-ನಟಿರಿಗೂ ಪರಮಾತ್ಮನೇ ಆಗಿದ್ದಾರೆ. ಅಷ್ಟೊಂದು ಗೌರವಿಸಲ್ಪಡೋ ಅಪ್ಪು ಭಾವ ಚಿತ್ರಗಳನ್ನ ಬಹುತೇಕರು ಗೌರವಿಸಿ ಹಾಗೆಯೇ ಪೂಜೆಯು ಸಲ್ಲಿಸುತ್ತಾರೆ. ಬೇರೇ ಫ್ಯಾನ್ಸ್‌ಗಳಂತೆ ಸ್ಯಾಂಡಲ್‌ವುಡ್‌ನ ಮರಿ ಟೈಗರ್ ವಿನೋದ್ ಪ್ರಭಾಕರ್ ಪ್ರತಿ ದಿನ ಅಪ್ಪು ಫೋಟೋಗೆ ಹೂ ಇಟ್ಟು ಪೂಜೆ ಸಲ್ಲಿಸುತ್ತಾರೆ.ಆದರೆ ದೇವಂತೇನೆ ಪುನೀತ್ ರಾಜಕುಮಾರ್ ಅವರನ್ನ ವಿನೋದ್ ಪ್ರಭಾಕರ್ ಕಾಣುತ್ತಾರೆ. 

ನಟ ವಿನೋದ್‌ ಪ್ರಭಾಕರ್‌ ತಮ್ಮ ಶೂಟಿಂಗ್ ಕ್ಯಾರವಾನ್‌ನಲ್ಲಿ ಪುನೀತ್ ರಾಜಕುಮಾರ್ ಒಂದು ಭಾವ ಚಿತ್ರ ಇಟ್ಟುಕೊಂಡಿದ್ದು, ಸ್ವಲ್ಪ ದೊಡ್ಡದೇ ಇರೋ ಈ ಫೋಟೋಗೆ ಪ್ರತಿನಿತ್ಯವೂ ಪೂಜೆ ಸಲ್ಲಿಸುತ್ತಾರೆ. ವಿನೋದ್‌ ತಮ್ಮ ಕ್ಯಾರವಾನ್‌ನಲ್ಲಿಯೇ ಇರೋ ಈ ಫೋಟೋದ ಜಾಗವನ್ನೆ ದೇವರ ಮನೆ ರೀತಿಯೇ ಟ್ರೀಟ್ ಮಾಡುತ್ತಿದ್ದು, ಅಲ್ಲಿ ಯಾರೇ ಬಂದರೂ ಅಷ್ಟೇ, ಚಪ್ಪಲಿ ಹಾಕಿಕೊಂಡು ಬರಬೇಡಿ ಅಂತಲೇ ಹೇಳಿ ಬಿಡುತ್ತಾರೆ.ಸ್ವತಃ ವಿನೋದ್ ಪ್ರಭಾಕರ್ ಕೂಡ ಚಪ್ಪಲಿ ಧರಿಸಿಕೊಳ್ಳೋದಿಲ್ಲ.

ಇದನ್ನೂ ಓದಿ: Sudeep: "ಪೈಪೋಟಿಗಾಗಿ ಅಪ್‌ಡೇಟ್‌ ಕೊಡಲು ಸಾಧ್ಯವಿಲ್ಲ": ಬೆಳ್ಳಂಬೆಳಗ್ಗೆ ಕಿಚ್ಚನ ಟ್ವೀಟ್!

ಮರಿ ಟೈಗರ್‌ ವಿನೋದ್‌ ಸಹ ಕ್ಯಾರವಾನ್‌ ಒಳಗಡೆ ಚಪ್ಪಲಿಯನ್ನ ಹಾಕಿಕೊಳ್ಳದೇ, ಕ್ಯಾರವಾನ್ ಹೊರಗಡೆ ಬಿಟ್ಟು ಬೇರೆಯವರಿಗೂ ಅದನ್ನು ಪಾಲಿಸೋಕೆ ಹೇಳ್ತಾರೆ. ಅಷ್ಟೇ ಭಕ್ತಿಯಿಂದಲೇ ಪುನೀತ್ ರಾಜಕುಮಾರ್ ಭಾವ ಚಿತ್ರಕ್ಕೆ ಟೈಗರ್ ಪ್ರಭಾಕರ್ ಪುತ್ರ ವಿನೋದ್ ಪ್ರಭಾಕರ ಗೌರವ ಸಲ್ಲಿಸುತ್ತಾರೆ. ಸದ್ಯ ಈ ನಟನಿಗೆ ಪುನೀತ್ ಮೇಲೆ ಅಷ್ಟೊಂದು ಪ್ರೀತಿ-ಗೌರವ ಮತ್ತು ಪೂಜ್ಯ ಭಾವನೆಯನ್ನ ಇಟ್ಟುಕೊಂಡಿದ್ದಾರೆ ಅಂತಲೇ ಹೇಳಬಹುದು.

ಚಂದನವನದಲ್ಲಿ ವಿನೋದ್ ಪ್ರಭಾಕರ್ ಅಭಿನಯದ ಸಿನಿಮಾಗಳ ಲೆಕ್ಕ ಇದೀಗ ಇಪ್ಪತೈದಕ್ಕೆ ಬಂದಿದ್ದು, ಆ ಚಿತ್ರಕ್ಕೆ ಆ ದಿನಗಳು ಸಿನಿಮಾದ ಖ್ಯಾತಿಯ ಕೆ.ಎಂ.ಚೈತನ್ಯ ನಿರ್ದೇಶನ ಮಾಡುತ್ತಿದ್ದಾರೆ. ಬಲರಾಮನ ದಿನಗಳು ಅನ್ನೋದು ಈ ಚಿತ್ರದ ಟೈಟಲ್ ಆಗಿದೆ. ಈ ಸಿನಿಮಾದ ಕುರಿತು ಈಗಾಗಲೇ ಸಿನಿಮಾ ತಂಡ ಸಾಷ್ಟು ವಿಷಯಗಳನ್ನೂ ಹೇಳಿಕೊಂಡಿದೆ. ಹಾಗೆಯೇ ಫೈಟರ್‌ ನಂತರ ನಟ ವಿನೋದ್‌ ಅಭಿನಯದ ನೆಲ್ಸನ್‌ ಚಿತ್ರದ ಟೀಸರ್‌ ಸಹ ಬಿಡುಗಡೆಯಾಗಿ ಕುತೂಹಲ ಹೆಚ್ಚಿಸಿದ್ದು, ಈ ನಟನ ವಿಭಿನ್ನ ಲುಕ್‌ ನೋಡಿದ ಅಭಿಮಾನಿಗಳ ಚಿತ್ರ ತೆರೆಮೇಲೆ ಬರುವುದಕ್ಕಾಹಿ ಕಾಯುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More