Home> Entertainment
Advertisement

ಯುಟ್ಯೂಬ್'ನಲ್ಲಿ ಹವಾ ಕ್ರಿಯೇಟ್ ಮಾಡ್ತಿದೆ ಪಂಚತಂತ್ರದ 'ಬ್ಯಾಡ ಹೋಗು ಅಂದ್ಬುಟ್ಲು' ಸಾಂಗ್!

ಪಂಚತಂತ್ರ ಚಿತ್ರದ 'ಬ್ಯಾಡ ಹೋಗು ಅಂದ್ಬುಟ್ಲು' ಸಾಂಗ್ ನಿನ್ನೆಯಷ್ಟೇ ರಿಲೀಸ್ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. 

ಯುಟ್ಯೂಬ್'ನಲ್ಲಿ ಹವಾ ಕ್ರಿಯೇಟ್ ಮಾಡ್ತಿದೆ ಪಂಚತಂತ್ರದ 'ಬ್ಯಾಡ ಹೋಗು ಅಂದ್ಬುಟ್ಲು' ಸಾಂಗ್!

ಬೆಂಗಳೂರು: ಯೋಗರಾಜ್ ಭಟ್ ನಿರ್ದೇಶನದಲ್ಲಿ ಮೂಡಿರುವ ಬಹುನಿರೀಕ್ಷಿತ 'ಪಂಚತಂತ್ರ' ಚಿತ್ರದ 'ಬ್ಯಾಡ ಹೋಗು ಅಂದ್ಬುಟ್ಲು' ಸಾಂಗ್ ಸೋಮವಾರವಷ್ಟೇ ಯೂಟ್ಯೂಬ್'ನಲ್ಲಿ ರಿಲೀಸ್ ಆಗಿದ್ದು, ಸಿಕ್ಕಾಪಟ್ಟೆ ಹವಾ ಕ್ರಿಯೇಟ್ ಮಾಡ್ತಿದೆ. 

ಇತ್ತೀಚೆಗಷ್ಟೇ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರ ಗಾಯನದ 'ಶೃಂಗಾರದ ಹೊಂಗೇಮರ' ಹಾಡು ಸಿನಿಪ್ರಿಯರನ್ನು ರೊಮ್ಯಾಂಟಿಕ್ ಮೂಡ್'ಗೆ ಕರೆದೊಯ್ದಿತ್ತು. ಈ ಬೆನ್ನಲ್ಲೇ ಸಂಗೀತ ನಿರ್ದೇಶಕ ವಾಸುಕಿ ವೈಭವ್‌ ಅವರ ಧ್ವನಿಯಲ್ಲಿ ಮೂಡಿಬಂದಿರುವ 'ಬ್ಯಾಡ ಹೋಗು ಅಂದ್ಬುಟ್ಲು' ಸಾಂಗ್ ನಿನ್ನೆಯಷ್ಟೇ ರಿಲೀಸ್ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಒಂದೇ ದಿನದಲ್ಲಿ 1 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದಿದೆ.

ಪಂಚತಂತ್ರದ ಆಮೆ ಮತ್ತು ಮೊಲದ ಕಥೆಯನ್ನು ಮೂಲವಾಗಿಟ್ಟುಕೊಂಡು ನಿರ್ಮಿಸಲಾಗಿದ್ದು, ಈಗಿನ ಹುಡುಗ-ಹುಡುಗಿಯರ ಮನಸಿನ ಭಾವನೆಗಳು, ಆಸೆಗಳನ್ನು ಹೇಳುವ ಪ್ರಯತ್ನ ಮಾಡಲಾಗಿದೆ. ಇಡೀ ಚಿತ್ರ ಕಾರ್ ರೇಸ್  ವಿಷಯವನ್ನು ಆಧರಿಸಿದ್ದು, ಕ್ರೀಡಾ ಚಿತ್ರ ಎಂದೇ ಹೇಳಬಹುದು.

ಮಂಗಳೂರಿನ ಬೆಡಗಿ ಸೋನಲ್ ಮೊಂತೆಲೋ ಚಿತ್ರದ ನಾಯಕಿಯಾಗಿ ಅಭಿನಯಿಸಿದ್ದು, ವಿಹಾನ್‌ ನಾಯಕನಾಗಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ಹೇಮಂತ್‌ ಪರಾಡ್ಕರ್‌ ನಿರ್ಮಾಣದ ಪಂಚತಂತ್ರ ಚಿತ್ರದಲ್ಲಿ ರಂಗಾಯಣ ರಘು, ಅಕ್ಷ ರ, ಬಾಲರಜವಾಡಿ, ದೀಪಕ್‌ ತಾರಾಗಣವಿದೆ. ಇದೇ ಮಾರ್ಚ್ 29ರಂದು ಚಿತ್ರ ಬಿಡುಗಡೆಯಾಗಲಿದ್ದು, ರಾಜ್ಯಾದ್ಯಂತ 150ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣಲಿದೆ. 

Read More