Home> Entertainment
Advertisement

ವಾರ್ಡ್​ ಮೀಸಲಾತಿ ಕರಡು ಆದೇಶಕ್ಕೆ ಆಕ್ಷೇಪ, ಸಾವಿರಾರು ಅರ್ಜಿ ಸಲ್ಲಿಕೆ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆ ವಾರ್ಡ್​ ಮೀಸಲಾತಿ ಪಟ್ಟಿಯ ಕರಡು ಪ್ರತಿಯ ಸಂಬಂಧ ಸಾವಿರಾರು ಆಕ್ಷೇಪಣೆಗಳು ಹರಿದು ಬರುತ್ತಿವೆ. ಕಾಂಗ್ರೆಸ್​ ಜನಪ್ರತಿನಿಧಿಗಳು ಇರುವ ಕ್ಷೇತ್ರಗಳಲ್ಲೇ ಹೆಚ್ಚು ಆಕ್ಷೇಪಣೆ ಅರ್ಜಿ ಸಲ್ಲಿಕೆಯಾಗಿವೆ ಎಂದು ತಿಳಿದು ಬಂದಿದೆ.

ವಾರ್ಡ್​ ಮೀಸಲಾತಿ ಕರಡು ಆದೇಶಕ್ಕೆ ಆಕ್ಷೇಪ, ಸಾವಿರಾರು ಅರ್ಜಿ ಸಲ್ಲಿಕೆ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆ ವಾರ್ಡ್​ ಮೀಸಲಾತಿ ಪಟ್ಟಿಯ ಕರಡು ಪ್ರತಿಯ ಸಂಬಂಧ ಸಾವಿರಾರು ಆಕ್ಷೇಪಣೆಗಳು ಹರಿದು ಬರುತ್ತಿವೆ. ಕಾಂಗ್ರೆಸ್​ ಜನಪ್ರತಿನಿಧಿಗಳು ಇರುವ ಕ್ಷೇತ್ರಗಳಲ್ಲೇ ಹೆಚ್ಚು ಆಕ್ಷೇಪಣೆ ಅರ್ಜಿ ಸಲ್ಲಿಕೆಯಾಗಿವೆ ಎಂದು ತಿಳಿದು ಬಂದಿದೆ.

ಈ ಸಂಬಂಧ ನಗರಾಭಿವೃದ್ಧಿ ಇಲಾಖೆಗೆ 2000ಕ್ಕೂ ಹೆಚ್ಚು ಆಕ್ಷೇಪಣಾ ಅರ್ಜಿಗಳು ಬಂದಿವೆ. ವಾರದ ಕೆಳಗೆ 243 ವಾರ್ಡ್​ಗಳಿಗೆ ಮೀಸಲು ನಿಗದಿ ಮಾಡಿದ್ದ ಸರ್ಕಾರ ಆಕ್ಷೇಪಣೆ ಸಲ್ಲಿಸಲು ಇಂದು ಕೊನೆಯ ದಿನ ಎಂದು ಹೇಳಿತ್ತು ಹೀಗಾಗಿ ಅರ್ಜಿಗಳ ಸಂಖ್ಯೆ ದುಪ್ಪಟ್ಟಾಗಿವೆ.

ಇದನ್ನೂ ಓದಿ : Davanagere : ಖಾಸಗಿ ಬಸ್ ಪಲ್ಟಿಯಾಗಿ 20 ಜನರಿಗೆ ಗಾಯ..!

ಕಾಂಗ್ರೆಸ್​, ಜೆಡಿಎಸ್ ಕ್ಷೇತ್ರಗಳಲ್ಲಿ ಹೆಚ್ಚು ಮಹಿಳಾ ಮೀಸಲು ನಿಗದಿಯಾಗಿದ್ದು, ಒಂದೊಂದು ವಿಧಾನಸಭಾ ಕ್ಷೇತ್ರದಲ್ಲಿ 7 ರಿಂದ 9 ವಾರ್ಡ್ ಗಳು ಎಂದು ವಿಂಗಡನೆ ಮಾಡಲಾಗಿದೆ. ಇದಕ್ಕೆಲ್ಲಾ ಬಿಜೆಪಿ ದುರುದ್ದೇಶದಿಂದ ಮೀಸಲು ವಿಚಾರದಲ್ಲಿ ಅನ್ಯಾಯ ಮಾಡಿದೆ ಎಂದು ಆರೋಪಗಳ ಸರ ಮಾಲೆ ಹೆಚ್ಚಾಗ್ತಿದೆ.

ಇದನ್ನೂ ಓದಿ :"ಸುದೀಪ್ ನನ್ನ ಸಿನಿಮಾದ 4 ಶೋ ಗಳನ್ನ ನನ್ನ ಅಭಿಮಾನಿಗಳಿಗೆ ತೋರಿಸುತ್ತೀನಿ ಅಂತಾರೆ"

ಪುಲಿಕೇಶಿನಗರದಲ್ಲಿ ಒಂದೇ ಒಂದು ವಾರ್ಡ್​ಗೆ ಸಾಮಾನ್ಯ ಮೀಸಲು, ಪುಲಕೇಶಿ ನಗರದಲ್ಲಿ ಎರಡು ವಾರ್ಡ್ ರೊಟೇಷನ್ ಮಾಡಿಲ್ಲ. ಮರು ಪರಿಷ್ಕರಣೆ ಮಾಡುವಂತೆ ಇಲಾಖೆಗೆ ಅರ್ಜಿ ಸಲ್ಲಿಕೆ ಮಾಡಲಾಗಿದೆ. ಇದು 2020ರ ಬಿಬಿಎಂಪಿ ಕಾಯ್ದೆಯ ಉಲ್ಲಂಘನೆಯಾಗಿದೆ ಎಂದು ಕಾಂಗ್ರೆಸ್ ನಾಯಕರುಗಳು ಆರೋಪಿಸುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Read More