Home> Entertainment
Advertisement

ಬಿಗ್ ಬಾಸ್ ಮನೆಯಲ್ಲಿ ತಮಟೆ ಹುಡ್ಗ ನವೀನ್ ಸಜ್ಜು ಮೇಲೆ ರೇಗಾಡಿದ್ದು ಯಾಕೆ?

 ಶುಕ್ರವಾರದ ಎಪಿಸೋಡ್ ನಲ್ಲಿ ತಾನಾಯಿತು ತನ್ನ ಪಾಡಾಯಿತು ಅಂತ ಕೊಟ್ಟ ಟಾಸ್ಕ್ ಗಳನ್ನು ಮಾಡುತ್ತಿದ್ದ ನವೀನ್ ಸಜ್ಜು ಮೇಲೆ ಏಕಾಏಕಿ ಅಪವಾದಗಳ ಸುರಿಮಳೆ ಸುರಿದು ಬಂತು...ಅದು ಹೇಗೆ ಅಂತೀರಾ? 

ಬಿಗ್ ಬಾಸ್ ಮನೆಯಲ್ಲಿ ತಮಟೆ ಹುಡ್ಗ ನವೀನ್ ಸಜ್ಜು ಮೇಲೆ ರೇಗಾಡಿದ್ದು ಯಾಕೆ?

ಬೆಂಗಳೂರು: ಬಿಗ್ ಬಾಸ್ ಮನೆ ಅಂದ್ರೆ ಸುಮ್ನೆನಾ ಇಲ್ಲಿ ಜಗಳವು ಇರುತ್ತೆ ಪ್ರೀತಿಯೂ ಇರುತ್ತೆ ಜೊತೆಗೆ ತಂತ್ರವೂ ಇರುತ್ತೆ.ಇನ್ನೊಂದು ವಿಷಯ ಏನಂದ್ರೆ ಗುಂಪುಗಾರಿಕೆ ಅನ್ನೋದಂತೂ ಇಲ್ಲಿ ಕಾಮನ್ ಅನ್ನೋ ಹಾಗಿರುತ್ತೆ, ಹಾಗಾದರೆ ಈಗ ನಾವು ಹೇಳೋ ವಿಷ್ಯ ಏನಪ್ಪಾ ಅಂದ್ರೆ ಶುಕ್ರವಾರದ ಎಪಿಸೋಡ್ ನಲ್ಲಿ ತಾನಾಯಿತು ತನ್ನ ಪಾಡಾಯಿತು ಅಂತ ಕೊಟ್ಟ ಟಾಸ್ಕ್ ಗಳನ್ನು ಮಾಡುತ್ತಿದ್ದ ನವೀನ್ ಸಜ್ಜು ಮೇಲೆ ಏಕಾಏಕಿ ಅಪವಾದಗಳ ಸುರಿಮಳೆ ಸುರಿದು ಬಂತು...ಅದು ಹೇಗೆ ಅಂತೀರಾ? 

ಬಿಗ್ ಬಾಸ್ 6 ನೇ ಸೀಸನ್ ನ 33 ನೇ ದಿನದಲ್ಲಿ ಕಾಪಿ ವಿಥ್ ಅಕ್ಷತಾ ಪ್ರೋಗ್ರಾಮ್ ಹೋಸ್ಟ್ ಮಾಡಿದ್ದ ಅಕ್ಷತಾ ಪಾಂಡವಪುರ ಜೊತೆ ತಮಟೆ ಹುಡ್ಗ ನವೀನ ಸಜ್ಜು ಹಾಡಿದ ಹುಡುಗೀರ್ ಅಂದ್ರೆ ಡೇಂಜರ್ ರಪ್ಪೋ ಹುಷಾರಾಗಿರಪ್ಪೋ ಅಂತಾ ಹಾಡಿದ್ದಕ್ಕೆ ಬಿಗ್ ಬಾಸ್ ಮನೆಯಲ್ಲಿ ದೊಡ್ಡ ರಂಪಾಟ ಆಗಿದ್ದಂತೂ ಮಾತ್ರ ವಿಕ್ಷಕರಿಗಂತೂ ಅಚ್ಚರಿ ಮೂಡಿಸಿತ್ತು. ಅದರಲ್ಲಿ ಎಲ್ಲದಕ್ಕೂ ಹುಡುಗಿರನ್ನೇ ಟಾರ್ಗೆಟ್ ಮಾಡುತ್ತಿರುವುದಕ್ಕೆ ಜಯಶ್ರೀ ಖ್ಯಾತಿ ತಗೆದು ಕೆಲ ಕ್ಷಣಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಜಗಳದ ವಾತಾವರಣವೇ ಸೃಷ್ಟಿಯಾಗಿತ್ತು. ಇನ್ನು ಮಾಡರ್ನ್ ರೈತ ಶಶಿಕುಮಾರ್ ಆಂಡಿ ವಿಚಾರದಲ್ಲಿ ನಡೆದ ವಾದದಲ್ಲಿ ಗೋಡೆಗೆ ಕೈ ಚಚ್ಚಿಕೊಂಡಿದ್ದಂತು ಕ್ಷಣ ಕಾಲ ಬಿಗ್ ಬಾಸ್ ಮನೆ ಜಗಳದ ಮನೆಯಾಗಿ ಪರಿವರ್ತನೆಯಾಗಿತ್ತು. 

ಹೀಗೆ ಈ ವಾರವಂತೂ ಬರಿ ಜಗಳ ವಿವಾದಗಳೇ ತುಂಬಿರುವುದರಿಂದ ವಾರದ ಕೊನೆಗೆ ಇದಕ್ಕೆಲ್ಲ ಸುದೀಪ ಕೊನೆ ಹಾಡ್ತಾರಾ ಮತ್ತು ಯಾರ್ಯಾರು ಈ ವಾರ ಬಿಗ್ ಬಾಸ್ ನಿಂದ ಎಲಿಮಿನೆಟ್ ಹಾಗ್ತಾರೆ ಎನ್ನುವದನ್ನು ಕಾದು ನೋಡಬೇಕಾಗಿದೆ.  
 

Read More