Home> Entertainment
Advertisement

ನರೇಶ್- ಪವಿತ್ರಾ ʼಮತ್ತೆ ಮದುವೆʼ ಟ್ರೈಲರ್‌ ರಿಲೀಸ್‌ : ʼಎದ್ದು ಬೀಳ್ತಿರುವʼ ವಯಸ್ಸಲ್ಲಿ ʼಲವ್‌ʼ ಯಾಕೆ..!

Naresh Pavitra lokesh Malli pelli trailer : ವೈರಲ್‌ ಫೋಟೋಸ್‌ ಮತ್ತು ವಿಡಿಯೋಗಳ ಮೂಲಕ ನಿರೀಕ್ಷೆ ಹುಟ್ಟಿಸಿದ್ದ ʼಮತ್ತೆ ಮದುವೆʼ ಚಿತ್ರದ ಟ್ರೈಲರ್ ಇಂದು ಬಿಡುಗಡೆಯಾಗಿದೆ. ನಟ ನರೇಶ್ ಮತ್ತು ನಟಿ ಪವಿತ್ರಾ ಲೋಕೇಶ್ ನಾಯಕ ನಟರಾಗಿ ನಟಿಸಿರುವ ಚಿತ್ರ ʼಮತ್ತೆ ಮದುವೆʼ. ಚಿತ್ರತಂಡ ಗುರುವಾರ ಚಿತ್ರದ ಟ್ರೇಲರ್‌ನ್ನು ಬಿಡುಗಡೆ ಮಾಡಿದೆ.   

ನರೇಶ್- ಪವಿತ್ರಾ ʼಮತ್ತೆ ಮದುವೆʼ ಟ್ರೈಲರ್‌ ರಿಲೀಸ್‌ : ʼಎದ್ದು ಬೀಳ್ತಿರುವʼ ವಯಸ್ಸಲ್ಲಿ ʼಲವ್‌ʼ ಯಾಕೆ..!

Matte maduve trailer : ಟಾಲಿವುಡ್‌ ನಟ ನರೇಶ್ ಮತ್ತು ಕನ್ನಡದ ನಟಿ ಪವಿತ್ರಾ ಲೋಕೇಶ್ ಅಭಿನಯದ ʼಮತ್ತೆ ಮದುವೆʼ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ನಿರ್ಮಾಪಕ ಎಂ.ಎಸ್.ರಾಜು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ವಿಜಯ ಕೃಷ್ಣ ಮೂವೀಸ್‌ನ ಹೋಮ್ ಬ್ಯಾನರ್‌ನಲ್ಲಿ ನರೇಶ್ ನಿರ್ಮಿಸುತ್ತಿದ್ದಾರೆ. ಹಿರಿಯ ನಟರಾದ ಅನ್ನಪೂರ್ಣ, ಜಯಸುಧಾ ಮತ್ತು ಶರತ್ ಬಾಬು ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ನರೇಶ್ ಅವರ ವೈಯಕ್ತಿಕ ಜೀವನದಲ್ಲಿ ನಡೆದ ಘಟನೆಗಳನ್ನು ಆಧರಿಸಿ ಈ ಸಿನಿಮಾ ಮಾಡಲಾಗಿದೆ.

ತೆಲುಗು ಮತ್ತು ಕನ್ನಡ ಭಾಷೆಗಳಲ್ಲಿ ತಯಾರಾಗಿರುವ ಮತ್ತೆ ಮದುವೆ ಸಿನಿಮಾ  ಮೇ 26 ರಂದು ಬಿಡುಗಡೆಯಾಗಲಿದೆ. ಇಂದು ಈ ಚಿತ್ರದ ಟ್ರೈಲರ್ ರಿಲೀಸ್‌ ಆಗಿದೆ. 2 ನಿಮಿಷ 33 ಸೆಕೆಂಡ್ ಅವಧಿಯ ಮತ್ತೆ ಮದುವೆ ಚಿತ್ರದ ಟ್ರೈಲರ್‌ ʼತೆಲುಗು ಇಂಡಸ್ಟ್ರಿ ಕನ್ನಡದತ್ತ ದೃಷ್ಟಿ ನೆಟ್ಟಿದೆʼ ಎಂಬ ಡೈಲಾಗ್‌ನೊಂದಿಗೆ ಆರಂಭವಾಗುತ್ತದೆ. ನೀವು ಯಾವಾಗ ಎದ್ದೇಳುತ್ತೀರಿ, ಯಾವಾಗ ಬೀಳುತ್ತೀರಿ ಎಂದು ನಿಮಗೆ ತಿಳಿದಿಲ್ಲ ಈ ವಯಸ್ಸಲ್ಲಿ ಲವ್‌ ಯಾಕೆ ಎನ್ನುವ ಸಂಭಾಷಣೆಗಳು ಟ್ರೈಲರ್‌ನಲ್ಲಿವೆ.

 

ಇದನ್ನೂ ಓದಿ:  ಶಿವ ತಾಂಡವ ಸ್ತೋತ್ರ ಪಠಿಸಿದ ʼದಿ ಕೇರಳ ಸ್ಟೋರಿʼ ನಟಿ ಅದಾ ಶರ್ಮಾ..! ವಿಡಿಯೋ ನೋಡಿ

ಅಲ್ಲದೆ, ನರೇಶ್- ಪವಿತ್ರಾ ಲೋಕೇಶ್ ಪ್ರೇಮ ಪ್ರಕರಣ, ಮದುವೆ, ನರೇಶ್ ಮೂರನೇ ಪತ್ನಿಯ ನಡುವಿನ ವಿವಾದಗಳನ್ನು ಯಥಾ ಪ್ರಕಾರ ತೋರಿಸಲಾಗಿದೆ. ಮೈಸೂರಿನ ಲಾಡ್ಜ್‌ನಲ್ಲಿ ರಮ್ಯಾ ರಘುಪತಿ ರಂಪಾಟವು ಸಹ ಈ ಮತ್ತೆ ಮದುವೆ ಟ್ರೈಲರ್‌ನಲ್ಲಿದೆ. ನರೇಶ್ ಅವರ ನಿಜಜೀವನದ ಕಥೆಯನ್ನು ಇದ್ದಂತೆಯೇ ತೋರಿಸಲು ಹೊರಟಿದ್ದಾರೆ ನಿರ್ದೇಶಕ ಎಂ.ಎಸ್.ರಾಜು ಎಂಬುದು ಟ್ರೇಲರ್ ನೋಡಿದರೆ ಅರ್ಥವಾಗುತ್ತದೆ.

ಕಳೆದ ಕೆಲವು ತಿಂಗಳಿನಿಂದ ನರೇಶ್ ಮತ್ತು ಪವಿತ್ರಾ ಡೇಟಿಂಗ್‌ ಮಾಡುತ್ತಿದ್ದು, ಇಬ್ಬರು ಶೀಘ್ರದಲ್ಲೇ ಮದುವೆಯಾಗ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಅಲ್ಲದೆ, ಆಗಾಗ ಮದುವೆ ಮತ್ತು ಲಿಪ್‌ ಕಿಸ್‌ ಮಾಡುವ ವಿಡಿಯೋ ಹಂಚಿಕೊಂಡು ಜನರ ತಲೆಗೆ ಈ ಜೋಡಿ ಹುಳ ಬಿಟ್ಟಿದ್ದವು. ನಂತರ ಅವೇಲ್ಲ ಸಿನಿಮಾದ ಒಂದು ಭಾಗ ಎಂದು ಎಲ್ಲರಿಗು ಅರ್ಥವಾಯಿತು. ʼಮರುಮದುವೆʼ ಎಂಬ ಶೀರ್ಷಿಕೆಯನ್ನಿಟ್ಟುಕೊಂಡು ತಮ್ಮದೇ ಲವ್‌ ಸ್ಟೋರಿಯಲ್ಲಿ ಸಿನಿಮಾದ ಮೂಲಕ ತೆರೆ ಮೇಲೆ ತರಲು ನರೇಶ್‌ ಪವಿತ್ರಾ ಮುಂದಾಗಿದ್ದಾರೆ. ʼಮರುಮದುವೆʼ ಚಿತ್ರಕ್ಕೆ ಸುರೇಶ್ ಬೊಬ್ಬಿಲಿ ಸಂಗೀತ ನೀಡಿದ್ದಾರೆ, ಎಂ.ಎನ್.ಬಾಲ್ ರೆಡ್ಡಿ ಛಾಯಾಗ್ರಹಣ ಇದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Read More