Home> Entertainment
Advertisement

ದರ್ಶನ್‌ ʼಕಾಟೇರʼ ಯಶಸ್ವಿಯಾಗಲು ಕಾರಣ ಈ ʼಶಕ್ತಿದೇವತೆʼ..! ಡಿಬಾಸ್‌ ಬೆನ್ನಹಿಂದಿದೆ ʼಆ ಶಕ್ತಿʼ

Darshan Kaatera movie:  ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಸಿನಿಮಾ ಈ ಮಟ್ಟಕ್ಕೆ ಯಶಸ್ವಿಯಾಗಲು ʼಕಾಟೇರʼ ಎಂಬ ಹೆಸರೇ ಕಾರಣ. ಇಂದು ಚಿತ್ರಮಂದಿರಗಳಲ್ಲಿ ಅಬ್ಬರಿಸುವ ಡಿಬಾಸ್‌ ಚಿತ್ರಕ್ಕೆ ಆ ಶಕ್ತಿಯ ಪವಾಡವೇ ಶ್ರೀರಕ್ಷೆ.

ದರ್ಶನ್‌ ʼಕಾಟೇರʼ ಯಶಸ್ವಿಯಾಗಲು ಕಾರಣ ಈ ʼಶಕ್ತಿದೇವತೆʼ..! ಡಿಬಾಸ್‌ ಬೆನ್ನಹಿಂದಿದೆ ʼಆ ಶಕ್ತಿʼ

Kaatera movie : ಚಾಲೆಂಜಿಗ್‌ ಸ್ಟಾರ್‌ ದರ್ಶನ್‌ ನಟನೆಯ ʼಕಾಟೇರʼ ಸಿನಿಮಾ ಕರುನಾಡಿನಲ್ಲಿ ಅಬ್ಬರಿಸುತ್ತಿದೆ. ಚಿತ್ರಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಬಾಕ್ಸ್‌ ಆಫೀಸ್‌ನಲ್ಲಿ ಸಖತ್‌ ಸದ್ದು ಮಾಡುತ್ತಿದೆ. ಇದೆ ಹೊತ್ತಿನಲ್ಲಿ ಡಿಬಾಸ್‌ ಕಾಟೇರ ಸಿನಿಮಾ ಗೆಲ್ಲಲು ಈ ಶಕ್ತಿ ದೇವಿಯೇ ಕಾರಣ ಎನ್ನುವ ಮಾತು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಹೌದು.. ಕಾಟೇರ ಅಬ್ಬರ ದಿನದಿಂದ ದಿನಕ್ಕೆ ಜೋರಾಗಿದೆ. ಸೋಷಿಯಲ್‌ ಮೀಡಿಯಾದಲ್ಲಿ ಡಿಬಾಸ್‌ ಸಿನಿಮಾದ್ದೇ ಮಾತು. ಅಲ್ಲದೆ, ಸಲಾರ್‌, ಡುಂಕಿ ಅಂತಹ ಪ್ಯಾನ್‌ ಇಂಡಿಯಾ ಸಿನಿಮಾವನ್ನು ಬದಿಗೊತ್ತಿ ದಾಸನ ಸಿನಿಮಾ ಕರ್ನಾಟಕದಲ್ಲಿ ಸಖತ್‌ ಸದ್ದು ಮಾಡುತ್ತಿದೆ.

ಇದನ್ನೂ ಓದಿ: ಹೊಸ ವರ್ಷಕ್ಕೆ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಹೊಸಚಿತ್ರ ಅನೌನ್ಸ್‌

ತರುಣ್‌ ಸುಧೀರ್‌ ನಿರ್ದೇಶನದ ಕಾಟೇರ ಸಿನಿಮಾ ಡಿಸೆಂಬರ್ 28ರ ಮಧ್ಯರಾತ್ರಿಯಿಂದಲೇ ಪ್ರದರ್ಶನ ಕಂಡಿದೆ. ಅಂದಿನಿಂದ ಚಿತ್ರಮಂದಿರಗಳು ತುಂಬಿ ತುಳುಕುತ್ತಿವೆ. ಅಲ್ಲದೆ, ಕ್ರಾಂತಿ ಸಿನಿಮಾ ನಂತರ ಡಿಬಾಸ್‌ ಈ ಸಿನಿಮಾದ ಮೂಲಕ ಕಮ್‌ಬ್ಯಾಕ್‌ ಮಾಡಿದ್ದಾರೆ ಅಂತ ಅವರ ಅಭಿಮಾನಿಗಳು ಹಾಡಿ ಹೊಗಳುತ್ತಿದ್ದಾರೆ.

ಕಾಟೇರ ಸಿನಿಮಾದಲ್ಲಿ, ದರ್ಶನ್‌ಗೆ ಜೊತೆಯಾಗಿ ಮಾಲಾಶ್ರೀ ಮಗಳು ಆರಾಧನಾ ರಾಮ್‌ ನಟಿಸಿದ್ದಾರೆ. ಈ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಅಲ್ಲದೆ ಮೊದಲ ಚಿತ್ರದಲ್ಲೇ ತಮ್ಮ ಅಭಿನಯದಿಂದ ಕನ್ನಡಿಗರ ಮನಗೆದ್ದಿದ್ದಾರೆ. ಈ ಚಿತ್ರ ಬಿಡುಗಡೆಯಾದ ಮೊದಲ ದಿನ ಕರ್ನಾಟಕ ಬಾಕ್ಸ್ ಆಫೀಸ್​ನಲ್ಲಿ 19.79 ಕೋಟಿ ರೂಪಾಯಿ ಗಳಿಕೆ ಮಾಡಿದೆ.

ಇದನ್ನೂ ಓದಿ:ಕಾಮಾಕ್ಷಿ ನಿನ್ನ ಕಣ್ಣ ನೋಟ ಬಲು ಡೇಂಜರ್‌..! ಯುವಕರಿಗೆ ನ್ಯೂ ಇಯರ್‌ ಕಿಕ್‌ ಕೊಟ್ಟ ಸುಂದರಿ

ಸಧ್ಯ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಕಾಟೇರ ಸಿನಿಮಾ ಈ ಮಟ್ಟಕ್ಕೆ ಯಶಸ್ವಿಯಾಗಲು ಕಾಟೇರ ಎಂಬ ಹೆಸರೇ ಕಾರಣ ಅಂತ ಹೇಳಲಾಗುತ್ತಿದೆ. ಕಾರಣ ಕಾಟೇರ ಅಂದ್ರೆ ಅದು ಒಂದು ದೇವಿಯ ಹೆಸರು. ಕಾಟೇರಮ್ಮ ಶಕ್ತಿ ದೇವತೆ, ಅಧುನಿಕ ಯುಗದಲ್ಲಿಯೂ ಅನೇಕ ಪವಾಡಗಳಿಂದ ತನ್ನ ಅಸ್ತಿತ್ವವನ್ನು ತೋರುತ್ತಿರುವ ಮಹಾತಾಯಿ.

ಪಾರ್ವತಿ, ದುರ್ಗೆ ಸೇರಿದಂತೆ ಶಕ್ತಿ ದೇವತೆಗಳಲ್ಲಿ ಒಬ್ಬಳಾದ ಕಾಟೇರಮ್ಮ ದೇವಿಯ ಪವಾಡಗಳು ಇಂದಿಗೂ ಅಚ್ಚರಿ ಮೂಡಿಸುತ್ತವೆ. ಗ್ರಾಮ ದೇವತೆಯಾಗಿ ಆಯಾ ಭಾಗದ ಜನಜೀವನ ಸಂಕುಲದ ಕಷ್ಟಗಳನ್ನ ಪರಿಹರಿಸಿ ತಾಯಿಯಾಗಿ, ಜನ ಕಲ್ಯಾಣಕ್ಕಾಗಿ ಅವತರಿಸುವ ಕಾಟೇರಮ್ಮ ದೇವಿ ಹೆಸರು ಸಿನಿಮಾಗೆ ಇಟ್ಟಿದ್ದರಿಂದ, ಅಮ್ಮನ ಆರ್ಶೀವಾದ ಮತ್ತು ಕಥೆ ಸಿನಿಮಾಗೆ ಬಲ ತುಂಬಿದೆ. ಅಲ್ಲದೆ, ದರ್ಶನ್‌ ಅವರ ಹಿಂದೆ ನಿಂತು ನಡೆಸಿದೆ ಎಂದು ಹೇಳಲಾಗುತ್ತಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More