Home> Entertainment
Advertisement

Darshan Arrest Live Updates: ನನ್ನ ತಂದೆ ಬಗ್ಗೆ ಕೆಟ್ಟ ಕಾಮೆಂಟ್ಸ್, ಅಸಭ್ಯ ಭಾಷೆಯಲ್ಲಿ ನಿಂದಿಸ್ತಿರೋರಿಗೆ ಧನ್ಯವಾದ..! ದರ್ಶನ್ ಪುತ್ರನ ಭಾವುಕ ಪೋಸ್ಟ್

ಸಾಮಾನ್ಯವಾಗಿ ಕೊಲೆ ಪ್ರಕರಣಗಳಲ್ಲಿ ಭಾಗಿಯಾದವರ ಮೇಲೆ ರೌಡಿ ಪಟ್ಟಿ ಓಪನ್ ಆಗುತ್ತೆ.. ಹೀಗಾಗಿ ನಟ ದರ್ಶನ್ ಆಂಡ್ ಗ್ಯಾಂಗ್ ನಿಂದ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಮೇಲೆ ರೌಡಿ ಶೀಟ್ ಓಪನ್ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.. 
 

Darshan Arrest Live Updates: ನನ್ನ ತಂದೆ ಬಗ್ಗೆ ಕೆಟ್ಟ ಕಾಮೆಂಟ್ಸ್, ಅಸಭ್ಯ ಭಾಷೆಯಲ್ಲಿ ನಿಂದಿಸ್ತಿರೋರಿಗೆ ಧನ್ಯವಾದ..! ದರ್ಶನ್ ಪುತ್ರನ ಭಾವುಕ ಪೋಸ್ಟ್
LIVE Blog

Darshan Arrest Live Updates: ಕನ್ನಡದ ಖ್ಯಾತ ನಟ ದರ್ಶನ್‌ ಅವರನ್ನು ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪದಡಿಯಲ್ಲಿ ಸದ್ಯ ಪೊಲೀಸ್‌ ಕಸ್ಟಡಿಯಲ್ಲಿದ್ದಾರೆ.. ಇದೇ ವೇಳೆ ನಟ ದರ್ಶನ್ ಅವರನ್ನು ಚಿತ್ರರಂಗದಿಂದ ಬ್ಯಾನ್ ಮಾಡಬೇಕು ಮತ್ತು ರೌಡಿ ಶೀಟರ್ ಓಪನ್‌ ಮಾಡಬೇಕು ಎನ್ನುವ ಮಾತುಗಳು ಕೇಳಿಬರುತ್ತಿವೆ..  

13 June 2024
18:56 PM

Darshan son vineesh post : ದರ್ಶನ್ ಪುತ್ರ ವಿನೀಶ್ ಭಾವುಕ ಪೋಸ್ಟ್ 

ದರ್ಶನ್ ಪುತ್ರ ವಿನೀಶ್ ಭಾವುಕ ಪೋಸ್ಟ್ ಹಾಕಿದ್ದಾರೆ. ಪೋಸ್ಟ್‌ನಲ್ಲಿ ʼನನ್ನ ತಂದೆ ಬಗ್ಗೆ ಕೆಟ್ಟ ಕಾಮೆಂಟ್ಸ್ ಮತ್ತು ಅಸಭ್ಯ ಭಾಷೆಯಲ್ಲಿ ನಿಂದಿಸ್ತಿರೋರಿಗೆ ಧನ್ಯವಾದಗಳು.. ನನಗೆ 15 ವರ್ಷ, ನನಗೂ ಮನಸಿದೆ, ಈ ಕಷ್ಟದ ಸಮಯದಲ್ಲಿ ನನ್ನ ತಾಯಿ ಮತ್ತು ತಂದೆಗೆ ನಿಮ್ಮ ಬೆಂಬಲದ ಅಗತ್ಯವಿದೆ..ʼ ಎಂದು ವಿನೀಶ್ ಪೋಸ್ಟ್ ಮಾಡಿದ್ದಾರೆ.

17:28 PM

Darshan case : ದರ್ಶನ್ ಯಡವಟ್ಟು  ಕೋಟಿ ಕೋಟಿ ಹಣ ಹಾಕಿರುವ ನಿರ್ಮಾಪಕರು ಕಂಗಾಲು

ಪವಿತ್ರ ಗೌಡ ಅವರಿಗೆ ಅಶ್ಲೀಲ ಸಂದೇಶ ಕಳುಹಿಸಿದ ಎನ್ನುವ ಕಾರಣಕ್ಕೆ ರೇಣುಕಾಸ್ವಾಮಿ ಎಂಬುವರ ಹತ್ಯೆ ಮಾಡಲಾಗಿದೆ. ಪ್ರಕರಣದಲ್ಲಿ ನಟ ದರ್ಶನ್‌ ಸೇರಿದಂತೆ ಒಟ್ಟು 14 ಜನರ ಬಂಧನವಾಗಿದೆ. ನಟ ಅರೆಸ್ಟ್‌  ಆದ ಬೆನ್ನಲ್ಲೆ, ಡೇವಿಲ್‌ ಸಿನಿಮಾ ನಿರ್ಮಾಪಕರು ಸೇರಿದಂತೆ, ಅವರ ಜೊತೆ ಸಿನಿಮಾ ಮಾಡಬೇಕು ಅಂದುಕೊಂಡು ಕೋಟಿ ಕೋಟಿ ಹಣ ಹಾಕಿರುವ ನಿರ್ಮಾಪಕರು ಕಂಗಾಲಾಗಿದ್ದಾರೆ. ಅದಕ್ಕೆ ಕಾರಣ ಕೊಲೆ ಪ್ರಕರಣದಲ್ಲಿ ಅಂದರ್‌ ಆಗಿರುವ ದರ್ಶನ್‌ಗೆ ಬೆಲ್ ಸಿಗೋದು ಡೌಟ್‌ ಎನ್ನಲಾಗಿದೆ.. 

ದರ್ಶನ್‌ಗೆ ಹಣ ಕೊಟ್ಟ ನಿರ್ಮಾಪಕರು ಯಾರ್ಯಾರು..?

ಡೆವಿಲ್‌ ಸಿನಿಮಾಗೆ ದರ್ಶನ್ ಬರೋಬ್ಬರಿ 22 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ. ಸಿಂಧೂರ ಲಕ್ಷ್ಮಣ ಸಿನಿಮಾಗೆ 3 ಕೋಟಿ ರೂ. ಅಡ್ವಾನ್ಸ್ ಹಣ ಪಡೆದಿದ್ದಾರೆ.. ಜೋಗಿ ಪ್ರೇಮ್ ನಿರ್ದೇಶನದ ಮುಂಬರುವ ಸಿನಿಮಾಗೆ ದರ್ಶನ್ ಅಡ್ವಾನ್ಸ್ ಹಣ ಅಂತಾ ದರ್ಶನ್ 3 ರಿಂದ 5 ಕೋಟಿ ಪಡೆದಿದ್ದಾರೆ ಅನ್ನೋದು ಗಾಂಧಿನಗರದ ಮಾತು. ನಿರ್ಮಾಪಕರಾದ ಬಿ.ವಿ.ಎಸ್. ಎನ್ ಪ್ರಸಾದ್ ಜೊತೆ ಸಿನಿಮಾ ಮಾತಕಥೆ ಆಗಿ 25 ಲಕ್ಷ ಅಡ್ವಾನ್ಸ್ ಹಣ ಪಡೆದಿದ್ದಾರಂತೆ‌. ತಮಿಳು ನಿರ್ಮಾಪಕ ರಮೇಶ್ ಪಿಳ್ಳೈ ಜೊತೆ ಚಿತ್ರ ಮಾಡುವುದಾಗಿ ದರ್ಶನ್ ಅಡ್ವಾನ್ಸ್ ಹಣ ಅಂತಾ 25 ಲಕ್ಷ ಪಡೆದಿದ್ದಾರಂತೆ. ಹೈದರಾಬಾದ್ ಮೂಲದ ನಿರ್ಮಾಪಕ ರಘುನಾಥ್ ಎಂಬುವರ ಜೊತೆ ಸಿನಿಮಾ ಮಾತುಕತೆ ಆಗಿದೆ‌. ಈ ಚಿತ್ರಕ್ಕೂ ದರ್ಶನ್ 25 ಲಕ್ಷ ಅಡ್ವಾನ್ಸ್ ಹಣ ಪಡೆದಿದ್ದಾರೆ.
 

10:54 AM

ರೇಣುಕಾಸ್ವಾಮಿ ಕೊಲೆ ಪ್ರಕರಣ ಮತ್ತೊಬ್ಬ ಸ್ಯಾಂಡಲ್‌ವುಡ್‌ ನಟ ಅರೆಸ್ಟ್‌: 

ಡಿ ಟೀಮ್ ನಿಂದ ರೇಣುಕಾಸ್ವಾಮಿ ಕೊಲೆ ಪ್ರಕರಣ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಸೇರಿದಂತೆ 13 ಜನರನ್ನು ಅರೆಸ್ಟ್ ಮಾಡಲಾಗಿತ್ತು.. ಇದೀಗ ಬಂದಿರುವ ಮಾಹಿತಿಯ ಪ್ರಕಾರ ಈ ಕೊಲೆ ಕೇಸ್‌ನಲ್ಲಿ ಮತ್ತೊಬ್ಬ ಸ್ಯಾಂಡಲ್ ವುಡ್ ನಟ ಪೊಲೀಸರ ವಶವಾಗಿದ್ದಾರೆ.. 
 
ಹೌದು ದರ್ಶನ್ ಜೊತೆಗಿನ ಬೃಂದಾವನ, ಬುಲ್ ಬುಲ್ ಚಿತ್ರಗಳಲ್ಲಿ ನಟಿಸಿದ್ದ ಪ್ರದೋಶ್ ದರ್ಶನ್ ಹಿಂದೆ ಮುಂದೆ ಓಡಾಡಿಕೊಂಡಿದ್ದರು.. ಸದ್ಯ ಈ ನಟನನ್ನು ಪೊಲೀಸ್‌ ಬಂಧಿಸಿದ್ದಾರೆ ಎನ್ನುವ ಮಾಹಿತಿ ಇದೆ.. 

10:45 AM

ದರ್ಶನ್ ಆಪ್ತ ಮೂಲಗಳಿಂದ ಹೊರಬಿತ್ತು ಶಾಕಿಂಗ್ ನ್ಯೂಸ್: 

ಚಾಲೆಂಜಿಂಗ್ ಸ್ಟಾರ್ ದರ್ಶನ್‌ ಜೊತೆ ಪಾರ್ಟಿ ಮಾಡಲು ಹೆದರುತ್ತಾರಂತೆ ಸ್ಯಾಂಡಲ್ವುಡ್ ಮಂದಿ.. ನಟ ಎಣ್ಣೆ ನಶೆಯಲ್ಲಿ ಸಿಕ್ಕಸಿಕ್ಕವರಿಗೆ ಬಾರಿಸುತ್ತಾರಂರೆ.. ಅಲ್ಲದೇ ನಶೆಯಲ್ಲಿ ಇದ್ದರೆ ಕೈಯಲಿದ್ದ ಎಣ್ಣೆ ಬಾಟಲಿಗಳಿಂದಲೇ ಹಲ್ಲೆ ಮಾಡುತ್ತಾರೆ ಎಂದು ದರ್ಶನ್ ಆಪ್ತ ಮೂಲಗಳು ಜೀ ಕನ್ನಡ ನ್ಯೂಸ್ ಗೆ ಮಾಹಿತಿ ನೀಡಿದ್ದಾರೆ.. 
 

08:44 AM

Renukaswamy Death mystery: ಕಿಡ್ನಾಪ್ ಗೂ ಮುನ್ನ ರೇಣುಕಾ ಬೈಕ್ ಜಖಂ..?
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರದಂತೆ ಒಟ್ಟು 13  ಜನರನ್ನು ಪೊಲೀಸರು ವಶದಲ್ಲಿದ್ದಾರೆ.. ಈ ವಿಚಾರಣೆ ವೇಳೆ ಎಳೆ ಎಳೆ ರಹಸ್ಯ ಬಹಿರಂಗವಾಗುತ್ತಿದ್ದು, ಕಿಡ್ನಾಪ್ ಗೂ ಮುನ್ನ ರೇಣುಕಾಸ್ವಾಮಿಗೆ ಆಕ್ಸಿಡೆಂಟ್ ನಡೆದಿತ್ತಾ? ಆಕ್ಸಿಡೆಂಟ್ ಮಾಡಿ ರೇಣುಕಾ ಸ್ವಾಮಿಯನ್ನ ಕಿಡ್ನಾಪ್ ಮಾಡಿದ್ರಾ ಆರೋಪಿಗಳು..? ಘಟನೆ ನಡೆದ ದಿನ ರೇಣುಕಾಸ್ವಾಮಿಗೆ ಯಾರೆಲ್ಲ ಕಾಲ್ ಮಾಡಿದ್ರು..? ಕಾಲ್ ಲಿಸ್ಟ್ ನಲ್ಲಿ ಯಾರೆಲ್ಲೆ ಆರೋಪಿಗಳಿದ್ದಾರೆ ಎನ್ನುವುದನ್ನು ಪೊಲೀಸರು ತನಿಖೆಯಲ್ಲಿ ಬಯಲು ಮಾಡಿದ್ದಾರೆ.. 

ಮಾಹಿತಿಯ ಪ್ರಕಾರ ಶನಿವಾರ 7:30 ರಿಂದ 9:30 ರ ವರೆಗೆ 3 ಬಾರಿ ರಾಘವೇಂದ್ರ ಅಲಯಾಸ್‌ ರಘುಗೆ ನಟ ದರ್ಶನ್ ನಿಂದ‌ ಕಾಲ್ ಮಾಡಲಾಗಿದೆ.. ಈ‌ ಮಧ್ಯೆ ಆರೋಪಿ ವಿನಯ್ ಕಡೆಯಿಂದ‌ ರೇಣುಕಾಸ್ವಾಮಿಗೆ ಒಂದು ಬಾರಿ ಕರೆ ಮಾಡಲಾಗಿದೆ.. ಬಳಿಕ 9:45ಕ್ಕೆ ಕೊನೆಯ ಬಾರಿ ರಾಘವೇಂದ್ರ- ರೇಣುಕಾಸ್ವಾಮಿ‌ ಕೊನೆಯ ಮಾತುಕತೆ.. ಈ ಕರೆಯಲ್ಲಿ 38 ಸೆಕೆಂಡುಗಳು ರಘು- ರೇಣುಕಾಸ್ವಾಮಿ ಸಂಭಾಷಣೆ ನಡೆದಿದೆ.. ಈ ಕಾಲ್ ಹೊರತುಪಡಿಸಿ ರೇಣುಕಾಸ್ವಾಮಿಗೆ ಕುಟುಂಬಸ್ಥರ ಕರೆಗಳು ಬಂದಿವೆ.. ತದ ನಂತರ ರೇಣುಕಾಸ್ವಾಮಿ ಯಾವುದೇ ಕರೆ ಸ್ವಿಕರಿಸಿಲ್ಲ ಎಂಬುದು ಪತ್ತೆಯಾಗಿದೆ.. 

08:10 AM

Darshan Arrest: ಕೊಲೆ ಪ್ರಕರಣದಲ್ಲಿ ದರ್ಶನ್ ಅಂದರ್ : ಅಭಿಮಾನಿ ಕಣ್ಣೀರು

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಅರೆಸ್ಟ್‌ ಆಗಿದ್ದರಿಂದ ಅಭಿಮಾನಿಯೊಬ್ಬರು ಕಣ್ಣೀರಿಟ್ಟಿದ್ದಾರೆ. ಸದ್ಯ ಆ ವಿಡಿಯೋ ಸೋಷಿಯಲ್‌ ಮಿಡಿಯಾದಲ್ಲಿ ಹರಿದಾಡುತ್ತಿದೆ.. 

 

Darshan Fans: ದಚ್ಚು ಅಂದರ್‌, ಅಭಿಮಾನಿ ಕಿಡಿಕಿಡಿ - ಬೈಕಿನಲಿದ್ದ D Boss ಅಕ್ಷರ ಅಳಿಸಿದ..!

ಪದೇ ಪದೇ ಕಾನೂನು ಬಾಹಿರ ಕೃತ್ಯಗಳಲ್ಲಿ ಭಾಗಿಯಾಗ್ತಿರೋ ದರ್ಶನ್ ವಿರುದ್ಧ ಕೆಲವು ಅಭಿಮಾನಿಗಳು ಕಿಡಿಕಾರುತ್ತಿದ್ದಾರೆ.. ಸದ್ಯ  ದರ್ಶನ್ ವಿರುದ್ಧ ಹಳೆ ಕೇಸ್ ಗಳ ಪರಿಶೀಲನೆ ನಡೆಸಿ ರೌಡಿ ಪಟ್ಟಿಯಲ್ಲಿ ಸೇರಿಸಲು ಪೊಲೀಸರ ಚಿಂತನೆ 
 

Read More