Home> Entertainment
Advertisement

ಸ್ವಂತ ರೆಸ್ಟೋರೆಂಟ್‌ ಹೊಂದಿರುವ ಕನ್ನಡ ನಟ ನಟಿಯರಿವರು..!

These Actress Actors have own Restaurants : ಕನ್ನಡದ ಅನೇಕ ನಟ-ನಟಿಯರು ಕೇವಲ ನಟನೆಯಲ್ಲಷ್ಟೇ ಅಲ್ಲದೇ ಉದ್ಯಮದಲ್ಲಿಯೂ ತೊಡಗಿಕೊಂಡಿದ್ದಾರೆ. ತಮ್ಮ ತಮ್ಮ ಆಲೋಚನೆ ಅಭಿರುಚಿಗೆ ತಕ್ಕಂತೆ ಉದ್ಯಮಗಳನ್ನು ನಡೆಸುತ್ತಿದ್ದಾರೆ. ಇದರಲ್ಲಿ ಕೆಲವು ನಟರು ಹೋಟೆಲ್‌ ಉದ್ಯಮದತ್ತ ತಮ್ಮ ಚಿತ್ತವನ್ನು ಹರಿಸಿದ್ದಾರೆ.

ಸ್ವಂತ ರೆಸ್ಟೋರೆಂಟ್‌ ಹೊಂದಿರುವ ಕನ್ನಡ ನಟ ನಟಿಯರಿವರು..!

Sandalwood : ಉದ್ಯಮದಲ್ಲಿ ತೊಡಗಿಕೊಂಡ ನಟ ನಟಿಯರ ಸೃಜನ್‌ ಲೋಕೆಶ್‌ ಸೇರಿದಂತೆ ಅಕುಲ್‌ ಬಾಲಾಜಿ ಹೀಗೆ ಸಾಕಷ್ಟು ನಟ ನಟಿಯರು ಈ ಹೋಟೆಲ್‌ ಉದ್ಯಮಕ್ಕೆ ಕೈ ಹಾಕಿದ್ದಾರೆ ಹಾಗಾದರೆ ಯಾರೆಲ್ಲಾ ಈ ರೆಸ್ಟೋರೆಂಟ್‌ ಉದ್ಯಮದಲ್ಲಿ ತೊಡಗಿಕೊಂಡಿದ್ದಾರೆ ಅನ್ನೋ ಸಣ್ಣ ಮಾಹಿತಿ ಇಲ್ಲಿದೆ.

ಸೃಜನ್‌ ಲೋಕೇಶ್‌

ಟಾಕಿಂಗ್‌ ಸ್ಟಾರ್‌ ಅಂತಾನೇ ಫೇಮಸ್‌ ಆಗಿರೋ ಸೃಜನ್‌ ಲೋಕೇಶ್‌ ಸದ್ಯ ರಿಯಾಲಿಟಿ ಶೋ ಹಾಗೂ ಪ್ರೊಡಕ್ಷನ್‌ ಹೌಸ್‌ನಲ್ಲಿ ಸಕ್ರಿಯವಾಗಿದ್ದಾರೆ. ಸೃಜನ್‌ ಅವರಿಗೆ ಹೋಟೆಲ್‌ ಬ್ಯುಸಿನೆಸ್‌ನಲ್ಲಿ ಹೆಚ್ಚು ಆಸಕ್ತಿ ಇತ್ತು. ಹೀಗಾಗಿ ಬೆಂಗಳೂರಿನಲ್ಲಿ ಎರಡು ರೆಸ್ಟೋರೆಂಟ್‌ಗಳನ್ನು ತೆರೆದಿದ್ದಾರೆ. ಬೆಳ್ಳಂದೂರಿನಲ್ಲಿ ಸೂಚಿ ಎಂಬ ಹೆಸರಿನಿಂದ ಮತ್ತು ಕೋಕು ಕಿಚನ್‌ ಎಂಬ ಹೆಸರಿನ ಇನ್ನೊಂದು ರೆಸ್ಟೋರೆಂಟ್‌ನ್ನು ತೆರೆದಿದ್ದಾರೆ 

ಇದನ್ನೂ ಓದಿ-ನಗೆಪಾಟಲಿಗೀಡಾದ ಆದಿಪುರುಷ್‌ ಸಿನಿಮಾ; ಮೀಮ್ಸ್‌ ಮೂಲಕ ನಿರ್ದೇಶಕರ ಕಾಲೆಳೆದ ನೆಟ್ಟಿಗರು..!

ಶೈನ್‌ ಶೆಟ್ಟಿ 
ಶೈನ್‌ ಶೆಟ್ಟಿ ಅವರು ಬಿಗ್‌ ಬಾಸ್‌ ಸೀಸನ್‌ 7ರ ವಿನ್ನರ್‌. ಕಿರುತೆರೆಯಲ್ಲಿ ಮಿಂಚಿದ ನಟ. ಇದೀಗ ನಟ ಶೈನ್‌ ಶೆಟ್ಟಿ ಹೋಟೆಲ್‌ ಉದ್ಯಮದತ್ತ ಗಮನ ಹರಿಸಿದ್ದು, ಇವರು 2019ರಲ್ಲಿ ಬನಶಂಕರಿ 2ನೇ ಹಂತದಲ್ಲಿ ಸಣ್ಣದೊಂದು ಗಾಡಿಯಲ್ಲಿ ಗಲ್ಲಿಕಿಚನ್‌ನ್ನು ತೆರೆದಿದ್ದರು. ಅಲ್ಲಿನ ಆಹಾರಕ್ಕೆ ಜನ ಫಿದಾ ಆಗಿದ್ದರು. ಸದ್ಯ ಶೈನ್‌ ಶೆಟ್ಟಿ ಅವರು ಗಲ್ಲಿ ಕಿಚನ್‌ ಹೆಸರಿನ 3 ರೆಸ್ಟೋರೆಂಟ್‌ಗಳನ್ನು ನಡೆಸಿಕೊಂಡು ಹೋಗುತ್ತಿದ್ದಾರೆ. 

ಕಿರಣ್‌ ರಾಜ್‌  
ಇವರು ಕನ್ನಡದ ಕಿರಿತೆರೆ ಲೋಕದ ಫೇಮಸ್‌ ನಟ. ಜೊತೆಗೆ ಯಶಸ್ವಿ ಉದ್ಯಮಿ ಕೂಡ. ಕಿರಣ್‌ ರಾಜ್‌ ಅವರು ಒಂದು ಮಲ್ಟಿ ಕುಸಿನ್‌ ರೆಸ್ಟೋರೆಂಟ್‌ ಹಾಗೂ ತಮ್ಮದೇ ಆದ ಬಟ್ಟೆ ಬ್ರಾಂಡ್‌ನ್ನು ನಡೆಸಿಕೊಂಡು ಹೋಗುತ್ತಿದ್ದಾರೆ. 

ಇದನ್ನೂ ಓದಿ-ಮದುವೆಯಾದ 3 ವರ್ಷಕ್ಕೆ ಮುರಿದು ಬಿತ್ತಾ ʼಗಾಯಕಿ ನೇಹಾ ಕಕ್ಕರ್‌ʼ ಸಂಸಾರ..!? ಫೋಟೋ ವೈರಲ್‌

ಅಕುಲ್‌ ಬಾಲಾಜಿ 
ಅಕುಲ್‌ ಬಾಲಾಜಿ ಕನ್ನಡದ ಕಿರುತೆರೆಯ ಖ್ಯಾತ ನಿರೂಪಕ ಮತ್ತು ಚಿತ್ರನಟ. ಯಶಸ್ವಿ ಕಾರ್ಯಕ್ರಮಗಳನ್ನು ನಡೆಸಿಕೊಡುವ ಮೂಲಕ ಕನ್ನಡಿಗರ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರು ಸಹ ಉದ್ಯಮದಲ್ಲಿ ಸಕ್ರಿಯವಾಗಿದ್ದಾರೆ. ಅಕುಲ್‌ ಅವರು ದೊಡ್ಡಬಳ್ಳಾಪುರ ಬಳಿಯ ಲಘುಮೇನಹಳ್ಳಿಯಲ್ಲಿ ರೆಸಾರ್ಟ್‌ವೊಂದನ್ನು ಹೊಂದಿದ್ದಾರೆ. 

ಚಂದನ್‌ 
ನಟ ಚಂದನ್‌ ಸಹ ಹೋಟೆಲ್‌ ಬ್ಯುಸಿನೆಸ್‌ನಲ್ಲಿ ತೊಡಗಿದ್ದಾರೆ. ಕೆಲ ವರ್ಷಗಳ ಹಿಂದಷ್ಟೇ ಬೆಂಗಳೂರಿನಲ್ಲಿ ಬಿರಿಯಾನಿ ಹೋಟೆಲ್‌ ಒಂದನ್ನು ಓಪನ್‌ ಮಾಡಿದ್ದರು. ಮದುವೆ ನಂತರ ಚಂದನ್‌ ದಂಪತಿಯರು ಮಂಡಿಪೇಟೆ ಪಲಾವ್‌ ಎಂಬ ರೆಸ್ಟೋರೆಂಟ್‌ನ್ನು ತೆರೆದಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Read More