Home> Entertainment
Advertisement

'ಕಾಟೇರ' ವೀರನಾಗಿ ಘರ್ಜಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್. . ಕಾಟೇರನ ನರ್ತನಕ್ಕೆ ಸಿಕ್ತು ಭರ್ಜರಿ ಗೆಲುವು

Kaatera Movie Review: ರೆಟ್ರೋ ಕಾಲದ ಕಥೆಯನ್ನು ಬಹಳ ನೈಜವಾಗಿ ನಿಮ್ಮ ಕಣ್ಣಿಗೆ ಹಬ್ಬವನ್ನೇ ಕೊಡುತ್ತದೆ. ಕಾಟೇರ ಎಂಬ ಪಾತ್ರದಲ್ಲಿ ದರ್ಶನ್ ಅವರು ಉತ್ತಮ ಅಭಿನಯ ನೀಡಿದ್ದಾರೆ. ಈ ಸಿನಿಮಾದಲ್ಲಿ ಅವರಿಗೆ ಎರಡು ಗೆಟಪ್ ಇದೆ. ಮಾಸ್ ಮತ್ತು ಕ್ಲಾಸ್ ಪ್ರೇಕ್ಷಕರಿಗೆ ಇಷ್ಟ ಆಗುವಂತಹ ರೀತಿಯಲ್ಲಿ ‘ಕಾಟೇರ’ ಸಿನಿಮಾ ಮೂಡಿಬಂದಿದೆ. 

'ಕಾಟೇರ' ವೀರನಾಗಿ ಘರ್ಜಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್. . ಕಾಟೇರನ ನರ್ತನಕ್ಕೆ ಸಿಕ್ತು ಭರ್ಜರಿ ಗೆಲುವು

Kaatera Movie Review In Kannada: ಬಹುನಿರೀಕ್ಷೆಯ ಕಾಟೇರ ಸಿನಿಮಾ ಭರ್ಜರಿಯಾಗಿ ತೆರೆಕಂಡಿದೆ. ರಿಲೀಸ್ ಗೂ ಮುನ್ನ ಸಿಕ್ಕಾಪಟ್ಟೆ ಸದ್ದು ಮಾಡಿದ ಕಾಟೇರ ಸಿನಿಮಾ ತೆರೆ ಕಂಡ ಬಳಿಕವು ಎಲ್ಲರ ಮನಸ್ಸು ಗೆದ್ದಿದೆ ಅಂದ್ರೆ ತಪ್ಪಿಲ್ಲ. ಯಾವುದೋ ಕಟ್ಟುಕಥೆಯನ್ನ ಈ ಸಿನಿಮಾದಲ್ಲಿ ತುರುಕೋ ಬದಲು ನೈಜ ಕಥೆಯನ್ನ ಆಧಾರಿಸಿದ ಸಿನಿಮಾಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೀವ ತುಂಬಿದ್ದಾರೆ.  ಕ್ರಾಂತಿ ಬಳಿಕ ರಿಲೀಸ್ ಆದ ಕಾಟೇರ ಸಿನಿಮಾಗೆ ಪ್ರೇಕ್ಷಕಪ್ರಭು ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ.  ನೆನ್ನೆ ಮಧ್ಯರಾತ್ರಿಯಿಂದ ಶುರುವಾದ ಈ ಸಿನಿಮಾವನ್ನ ಜನ ಚಳಿಯನ್ನು ಲೆಕ್ಕಿಸದೆ ನೋಡಿ ಎಂಜಾಯ್ ಮಾಡಿದ್ದಾರೆ. 

ರೆಟ್ರೋ ಕಾಲದ ಕಥೆಯನ್ನು ಬಹಳ ನೈಜವಾಗಿ ನಿಮ್ಮ ಕಣ್ಣಿಗೆ ಹಬ್ಬವನ್ನೇ ಕೊಡುತ್ತದೆ. ಕಾಟೇರ ಎಂಬ ಪಾತ್ರದಲ್ಲಿ ದರ್ಶನ್ ಅವರು ಉತ್ತಮ ಅಭಿನಯ ನೀಡಿದ್ದಾರೆ. ಈ ಸಿನಿಮಾದಲ್ಲಿ ಅವರಿಗೆ ಎರಡು ಗೆಟಪ್ ಇದೆ. ಮಾಸ್ ಮತ್ತು ಕ್ಲಾಸ್ ಪ್ರೇಕ್ಷಕರಿಗೆ ಇಷ್ಟ ಆಗುವಂತಹ ರೀತಿಯಲ್ಲಿ ‘ಕಾಟೇರ’ ಸಿನಿಮಾ ಮೂಡಿಬಂದಿದೆ. 

ಇದನ್ನೂ ಓದಿ- ಒನ್ಸ್ ಮೋರ್ ಶ್ರಾವಣಿ ಸುಬ್ರಮಣ್ಯ ಸದ್ಯದಲ್ಲೇ ಶುರು

ಸಿನಿಮಾದ ಆರಂಭದಲ್ಲಿ 107 ಜನರ ಅಸ್ಥಿ ಪಂಜರ ಸಿಗುತ್ತದೆ. ಪೊಲೀಸರು ಅದರ ತನಿಖೆಗೆ ಇಳಿದಾಗ 15 ವರ್ಷಗಳ ಹಿಂದಿನ ಕಹಾನಿ ತೆರೆದುಕೊಳ್ಳುತ್ತದೆ. ಆ 107 ಜನರ ಸಾವಿಗೆ ಕಾರಣ ಆದ ವ್ಯಕ್ತಿ ಯಾರು ಎಂಬ ಪ್ರಶ್ನೆಗೆ ಫ್ಲ್ಯಾಶ್ ಬ್ಯಾಕ್ ನಲ್ಲಿ ಉತ್ತರ ಸಿಗುತ್ತದೆ. ಸೋ ದರ್ಶನ್ ಅವರ ಅಬ್ಬರ,  ಫೈಟ್,  ಡೈಲಾಗ್ ಹೀಗೆ ಎಲ್ಲವನ್ನೂ ಕಣ್ಣಾರೆ ನೋಡಬೇಕು ಅಂದ್ರೆ ನೀವು ಥೀಯೇಟರ್ ಗೆ ಬರಲೇಬೇಕು. ಒಟ್ಟಿನಲ್ಲಿ ಮೂರು ಗಂಟೆಗಳ ಈ ಸಿನಿಮಾ ನಿಮ್ಮ ಮನಸ್ಸನ್ನು ಅದರಲ್ಲೂ ರೈತರ ಮನಸ್ಸನ್ನು ಗೆಲ್ಲೋದ್ರಲ್ಲಿ ಅನುಮಾನವೇ ಇಲ್ಲ ಬಿಡಿ. 

ಸಿರಿವಂತರು ಮತ್ತು ಬಡವರ ನಡುವಿನ ಅಂತರ ಮತ್ತು ನೋವಿನ ಕಥೆಯನ್ನು ಈ ಸಿನಿಮಾದಲ್ಲಿ ಹೇಳಲಾಗಿದೆ. ರೈತರಿಗಾಗಿ, ಪ್ರೀತಿಸಿದವಳಿಗಾಗಿ, ಕುಟುಂಬದವರಿಗಾಗಿ, ಊರಿನ ಜನರಿಗಾಗಿ, ಸಾಮಾಜಿಕ ನ್ಯಾಯಕ್ಕಾಗಿ ಹೋರಾಟಕ್ಕೆ ನಿಂತ ಕಾಟೇರ ಎಂಬ ವೀರನ ಕಥೆ ಈ ಚಿತ್ರದಲ್ಲಿದೆ.

ಇದನ್ನೂ ಓದಿ- ಸಲಾರ್‌ 6ನೇ ದಿನದ ಬಾಕ್ಸ್‌ ಆಫೀಸ್‌ ಕಲೆಕ್ಷನ್‌: 'ಕೆಜಿಎಫ್‌' ರೇಂಜ್‌ನಲ್ಲಿ ಚಿತ್ರ ದರ್ಬಾರ್ ಮಾಡ್ತಿದ್ಯಾ?

ಕನಸಿನರಾಣಿ ಮಾಲಾಶ್ರೀ ಪುತ್ರಿ ತಮ್ಮ ಮೊದಲ ಸಿನಿಮಾದಲ್ಲೇ ಮನೋಜ್ಞವಾಗಿ ಅಭಿನಯಿಸಿ ಸ್ಯಾಂಡಲ್ವುಡ್ ಗೆ ಸಿಕ್ಕ ಭರವಸೆಯ ನಾಯಕಿ ಆಗಿದ್ದಾರೆ. ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಅದ್ಭುತ ಕಥೆಗೆ ಭರ್ಜರಿಯಾಗೇ ಹಣ ಹಾಕಿದ್ದಾರೆ. ತರುಣ್ ಸುಧೀರ್ ಡೈರೆಕ್ಷನ್ ಮೆಚ್ಚಲೇಬೇಕು. ಆರಾಧನಾ ರಾಮ್, ಜಗಪತಿ ಬಾಬು, ಅವಿನಾಶ್, ಶ್ರುತಿ, ಕುಮಾರ್ ಗೋವಿಂದ್, ಅಚ್ಯುತ್ ಕುಮಾರ್, ವೈಜನಾಥ ಬೀರಾದಾರ ಮುಂತಾದವರು ಕಾಟೇರ ಸಿನಿಮಾದ ಜೀವಾಳ ಅಂದ್ರೆ ತಪ್ಪಿಲ್ಲ ನೋಡಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More