Home> Entertainment
Advertisement

ನವರಸನಾಯಕ ಜಗ್ಗೇಶ್ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿಗೆ ಶುಭ ಹಾರೈಸಿದ ಪರಿ..!

ಬಹಳ ದಿನಗಳ ಬಳಿಕ ಸೋಶಿಯಲ್ ಮೀಡಿಯಾಗೆ ಮರಳಿದ್ದಾರೆ ಕಿರಿಕ್ ಹುಡುಗ ರಕ್ಷಿತ್ ಶೆಟ್ಟಿ.

ನವರಸನಾಯಕ ಜಗ್ಗೇಶ್ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿಗೆ ಶುಭ ಹಾರೈಸಿದ ಪರಿ..!

ಬೆಂಗಳೂರು: ಸ್ಯಾಂಡಲ್ ವುಡ್ ನ ಕಿರಿಕ್ ಹುಡುಗ ರಕ್ಷಿತ್ ಶೆಟ್ಟಿ ಅವರಿಗಿಂದು ಹುಟ್ಟು ಹಬ್ಬದ ಸಂಭ್ರಮ. ಈ ಮೊದಲೇ ಘೋಷಿಸಿದಂತೆ ಇಂದು ಅವರು ಮತ್ತೆ ಸೋಶಿಯಲ್ ಮೀಡಿಯಾಗೆ ಮರಳಿದ್ದಾರೆ.

ಸುಮಾರು ಒಂದು ವರ್ಷ ಸಾಮಾಜಿಕ ಜಾಲತಾಣದಿಂದ ದೂರವಿದ್ದ ರಕ್ಷಿತ್ ಸೋಶಿಯಲ್ ಮೀಡಿಯಾಗೆ ರೀ ಎಂಟ್ರಿ ಕೊಡುತ್ತಾ ತಮ್ಮ ಮೊದಲ ಟ್ವೀಟ್ ನಲ್ಲಿಯೇ ಧೂಳೆಬ್ಬಿಸಿದ್ದಾರೆ. 

ಚಂಡಮಾರುತ ಏಳುವುದಕ್ಕೂ ಮುನ್ನ ಮೌನವಾಗಿರುತ್ತದೆಯೇ? ಎಂದು ಪ್ರಶ್ನಿಸುವ ಮೂಲಕ ಅವರು ಟ್ವಿಟ್ಟರ್ ನಲ್ಲಿ ಮತ್ತೆ ಖಾತೆ ತೆರೆದಿದ್ದಾರೆ. 

ಟ್ವಿಟ್ಟರ್ ನಲ್ಲಿ ರಕ್ಷಿತ್ ಮೊದಲ ಸಂದೇಶಕ್ಕೆ ಪ್ರತಿಕ್ರಿಯಿಸುತ್ತಾ, ಅವರಿಗೆ ಜನ್ಮದಿನದ ಶುಭಾಶಯ ಕೋರಿರುವ ನವರಸನಾಯಕ ಜಗ್ಗೇಶ್...

ತಾಳಿದವ ಬಾಳುತ್ತಾನೆ!
ಮೌನ ಹರಿತವಾದ ಆಯುಧ!
ನಗು ಎಲ್ಲಾಗುಣಕ್ಕು ಶ್ರೇಷ್ಟಉತ್ತರ!
ತನ್ನಂಬಿಕೆ ಇದ್ದವ ಜಗಗೆಲ್ಲುವ!
ಅಪಮಾನ ಗೆಲುವಿಗೆ ರಹದಾರಿ!
ಮಾತಿಗಿಂತ ಕೃತಿಶ್ರೇಷ್ಟ!
ಆರ್ಭಟಿಸುವವ ಆಂತರ್ಯದಲ್ಲಿ ಭಯಸ್ತ!
ಗೆಲ್ಲುವ ಛಲದವ ಸದ್ದುಮಾಡದವ!
ಈ ಎಲ್ಲಾಗುಣ ನಿನ್ನಲ್ಲಿದೆ!ಮುಂದಿನ ಗೆಲುವು ನಿನ್ನದೆ!
ಹುಟ್ಟುಹಬ್ಬದ ಶುಭಾಷಯಗಳು  ಎಂದಿದ್ದಾರೆ.
 

Read More