Home> Entertainment
Advertisement

ಅಂದು ಐಟಂ ಸಾಂಗ್‌ಗೆ ಜೋಡಿ, ಇಂದು ತಾಯಿ-ಮಗ: 'ಗುಂಟೂರು ಖಾರಂ' ಟ್ರೋಲ್!

Gunturu Kaaram Troll: ಗುಂಟೂರು ಕಾರಂ ಚಿತ್ರದಲ್ಲಿ ತಾಯಿ-ಮಗನಾಗಿ ಅಭಿನಯಸಿದ್ದ ರಮ್ಯ ಕೃಷ್ಣ ಹಾಗೂ ಮಹೇಶ್‌ ಬಾಬು,  ಹಿಂದೆ ಇಬ್ಬರು ಐಟಂ ಸಾಂಗ್‌ವೊಂದಕ್ಕೆ ಹೆಜ್ಜೆ ಹಾಕಿದ್ದು, ಇದೀಗ ಟ್ರೋಲಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಅಂದು ಐಟಂ ಸಾಂಗ್‌ಗೆ ಜೋಡಿ, ಇಂದು ತಾಯಿ-ಮಗ: 'ಗುಂಟೂರು ಖಾರಂ' ಟ್ರೋಲ್!

Troll About Mahesh Babu And Ramya Krishna: ಟಾಲಿವುಡ್‌ ಸೂಪರ್‌ ಸ್ಟಾರ್‌ ಮಹೇಶ್ ಬಾಬು ನಟನೆಯ 'ಗುಂಟೂರು ಖಾರಂ'ಚಿತ್ರ ಕೆಲವು ದಿನಗಳ ಹಿಂದೆಯೇ ತೆರೆಕಂಡು ಮಿಶ್ರಪ್ರತಿಕ್ರಿಯೆ ಪಡೆದುಕೊಂಡಿದ್ದರೂ, ಮೊದಲ ದಿನವೇ ಭರ್ಜರಿ ಕಲೆಕ್ಷನ್ ಮಾಡಿದೆ. ಆದರೆ ಎರಡನೇ ದಿನಕ್ಕೆ ಸಿನಿಮಾ ಡಲ್ ಆಗಿದ್ದು, ತ್ರಿವಿಕ್ರಮ್ ಶ್ರೀನಿವಾಸ್ ಕಥೆ, ಚಿತ್ರಕಥೆ, ನಿರ್ದೇಶನದ ಬಗ್ಗೆ ಪ್ರೇಕ್ಷಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ಚಿತ್ರದಲ್ಲಿ ಮಹೇಶ್ ಬಾಬು ತಾಯಿ ಪಾತ್ರದಲ್ಲಿ ರಮ್ಯಾಕೃಷ್ಣ ನಟಿಸಿದ್ದು, ತಾಯಿ ಮಗನ ಬಾಂಧವ್ಯದ ಕಥೆ ಸಿನಿಮಾದಲ್ಲಿದೆ. 

ಬಹುಭಾಷಾ ನಟಿ  ರಮ್ಯಾ ಕೃಷ್ಣ ಸದಾ ಪವರ್‌ಫುಲ್ ತಾಯಿ ಪಾತ್ರಗಳಲ್ಲಿ ಗಮನ ಸೆಳೆಯುತ್ತಿದ್ದು, ಇದೀಗ 'ಗುಂಟೂರು ಖಾರಂ'ಚಿತ್ರದಲ್ಲಿಯೂ ಅದೇ ಪ್ರಯತ್ನ ನಡೆದಿದೆ. ಆದರೆ ಈ ಸಿನಿಮಾ ಬೆನ್ನಲ್ಲೇ ಹಳೇ ಹಾಡೊಂದನ್ನು ತೋರಿಸಿ ಕೆಲವರು ಟ್ರೋಲ್ ಮಾಡುತ್ತಿದ್ದಾರೆ. ಅದು ಮಹೇಶ್ ಬಾಬು ಹಾಗೂ ರಮ್ಯಾ ಕೃಷ್ಣ ಹೆಜ್ಜೆ ಹಾಕಿದ್ದ ಐಟಂ ಸಾಂಗ್. 'ಗುಂಟೂರು ಖಾರಂ' ಚಿತ್ರದಲ್ಲಿ ತಾಯಿ ಮಗನಾಗಿ ನಟಿಸಿರುವ ಮಹೇಶ್ ಬಾಬು ಹಾಗೂ ರಮ್ಯಾಕೃಷ್ಣ ಈ ಹಿಂದೆ ಐಟಂ ಸಾಂಗ್‌ವೊಂದಕ್ಕೆ ಬಿಂದಾಸ್ ಆಗಿ ಕುಣಿದಿದ್ದರು. 

ಇದನ್ನೂ ಓದಿ: ಅಂದು ಸಮಂತಾ-ನಾಗಚೈತನ್ಯ.. ಇಂದು ನಯನತಾರಾ-ವಿಘ್ನೇಶ್ ಭವಿಷ್ಯ ನುಡಿದ ಖ್ಯಾತ ಜ್ಯೋತಿಷಿ..! ಅಗಲಿಕೆ ಖಚಿತ?

ಹೌದು.. ಸಾಮಾನ್ಯವಾಗಿ ಒಂದು ಚಿತ್ರದಲ್ಲಿ ನಾಯಕಿಯಾಗಿ ನಟಿಸಿದವರೇ ಮತ್ತೊಂದು ಚಿತ್ರದಲ್ಲಿ ತಾಯಿಯಾಗಿ ಅಥವಾ ಸಹೋದರಿಯಾಗಿ ನಟಿಸಿರುವ ಉದಾಹರಣೆಗಳಿವೆ. ಮಗಳಾಗಿ ನಟಿಸಿದವರು ಮುಂದೆ ನಾಯಕಿಯಾಗಿ ಕಾಣಿಸಿಕೊಂಡ ಉದಾಹರಣೆಯಿದೆ. ಇದು 60,70, 80ರ ದಶಕಗಳಲ್ಲಿ  ಜಾಸ್ತಿ ಇದ್ದು, ಇತ್ತೀಚೆಗೆ ಕಮ್ಮಿ ಆಗಿದೆ. ಹಲವಾರು ವರ್ಷಗಳ ಹಿಂದೆ ಬಂದಿದ್ದ 'ನಾನಿ' ಎನ್ನುವ ಚಿತ್ರದಲ್ಲಿ ಮಹೇಶ್ ಬಾಬು- ರಮ್ಯಾ ಕೃಷ್ಣ ಐಟಂ ಹಾಡಿಗೆ ಡ್ಯಾನ್ಸ್ ಮಾಡಿದ್ದರು. ಆರಂಭದಲ್ಲಿ ಥಿಯೇಟರ್‌ನಲ್ಲಿ ಹಾಡನ್ನು ಪ್ರದರ್ಶಿಸಿದ್ದರು ಬಳಿಕ ತೆಗೆದುಬಿಟ್ಟಿ,  ರೊಮ್ಯಾಂಟಿಕ್ ಹಾಡನ್ನು ಸದ್ಯ ಟ್ರೋಲ್ ಮಾಡಲಾಗುತ್ತಿದೆ. 

ಅಂದು ಹೀಗೆ ಕುಣಿದವರನ್ನು ಈಗ ಈ ರೀತಿ ತೋರಿಸಿದ್ದೀರಲ್ಲಾ? ನಿರ್ದೇಶಕರೇ? ಎಂದು ಟ್ರೋಲ್ ಮಾಡುತ್ತಿದ್ದಾರೆ. ಪ್ರಭಾಸ್ ನಟನೆಯ 'ಅಡವಿ ರಾಮುಡು' ಎನ್ನುವ ಚಿತ್ರದಲ್ಲಿ ಕೂಡ ರಮ್ಯಾಕೃಷ್ಣ ಇದೇ ರೀತಿ ಸ್ಪೆಷಲ್ ಸಾಂಗ್‌ವೊಂದಕ್ಕೆ ಕುಣಿದಿದ್ದು, ಬಳಿಕ 'ಬಾಹುಬಲಿ' ಚಿತ್ರದಲ್ಲಿ ಪ್ರಭಾಸ್ ತಾಯಿಯ ಪಾತ್ರದಲ್ಲಿ ನಟಿಸಿದ್ದರು. ಆಗ ಯಾರು ಟ್ರೋಲ್ ಮಾಡಲಿಲ್ಲ. ಈಗ ಯಾಕೆ ಟ್ರೋಲ್ ಎಂದು ಮಹೇಶ್ ಬಾಬು ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ. 
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

 

Read More