Home> Entertainment
Advertisement

BBK9 : ಬಿಗ್‌ಬಾಸ್‌ ಮನೆಯಲ್ಲಿ ಆರ್ಯವರ್ಧನ್‌ ಗುರೂಜಿ ಮಾಟ ಮಂತ್ರ..!

ಬಿಗ್‌ಬಾಸ್‌ ಆಟಕ್ಕೆ ಮನೆಮಂದಿಯಲ್ಲಾ ಸುಟ್ಟು ಸುಣ್ಣವಾಗುತ್ತಿದ್ದಾರೆ. ದಿನದಿಂದ ದಿನಕ್ಕೆ ದೊಡ್ಮನೆಯಲ್ಲಿ ಹೊಸ ಹೊಸ ಆಟಗಳು ಉದಯಿಸುತ್ತಿವೆ. ಇವೇಲ್ಲ ಪ್ರೇಕ್ಷಕರಿಗೆ ಮಜಾ ಕೊಟ್ಟರೆ ಸ್ಪರ್ಧಿಗಳಿಗೆ ಸಂಕಟಪ್ರಾಯವಾಗಿವೆ. ಸದ್ಯ ರೂಪೇಶ್‌ ರಾಜಣ್ಣ ಅವರು ಕಳೆದುಕೊಂಡ ಚಿನ್ನದ ಉಂಗುರ ಮತ್ತು ಬ್ರೆಸ್​ಲೆಟ್ ಕಂಡು ಹಿಡಿಯುವುದಾಗಿ ಹೇಳಿ ಗುರೂಜಿ ಮತ್ತು ರೂಪೇಶ್‌ ಬಕ್ರಾ ಮಾಡಿದ ಎಪಿಸೋಡ್‌ ವೀಕ್ಷಕರನ್ನು ನಗೆಗಡಲಿಗೆ ತೆಲಿಸುತ್ತಿದೆ.

BBK9 : ಬಿಗ್‌ಬಾಸ್‌ ಮನೆಯಲ್ಲಿ ಆರ್ಯವರ್ಧನ್‌ ಗುರೂಜಿ ಮಾಟ ಮಂತ್ರ..!

BBK9 : ಬಿಗ್‌ಬಾಸ್‌ ಆಟಕ್ಕೆ ಮನೆಮಂದಿಯಲ್ಲಾ ಸುಟ್ಟು ಸುಣ್ಣವಾಗುತ್ತಿದ್ದಾರೆ. ದಿನದಿಂದ ದಿನಕ್ಕೆ ದೊಡ್ಮನೆಯಲ್ಲಿ ಹೊಸ ಹೊಸ ಆಟಗಳು ಉದಯಿಸುತ್ತಿವೆ. ಇವೇಲ್ಲ ಪ್ರೇಕ್ಷಕರಿಗೆ ಮಜಾ ಕೊಟ್ಟರೆ ಸ್ಪರ್ಧಿಗಳಿಗೆ ಸಂಕಟಪ್ರಾಯವಾಗಿವೆ. ಸದ್ಯ ರೂಪೇಶ್‌ ರಾಜಣ್ಣ ಅವರು ಕಳೆದುಕೊಂಡ ಚಿನ್ನದ ಉಂಗುರ ಮತ್ತು ಬ್ರೆಸ್​ಲೆಟ್ ಕಂಡು ಹಿಡಿಯುವುದಾಗಿ ಹೇಳಿ ಗುರೂಜಿ ಮತ್ತು ರೂಪೇಶ್‌ ಬಕ್ರಾ ಮಾಡಿದ ಎಪಿಸೋಡ್‌ ವೀಕ್ಷಕರನ್ನು ನಗೆಗಡಲಿಗೆ ತೆಲಿಸುತ್ತಿದೆ.

ಗೊಂಬೆ ಟಾಸ್ಕ್ ಆಡುವ ವೇಳೆ ರೂಪೇಶ್ ರಾಜಣ್ಣ ತಮ್ಮ ಚಿನ್ನದ ಉಂಗುರ ಹಾಗೂ ಬ್ರೆಸ್​ಲೆಟ್​ ಅನ್ನು ಕಳೆದುಕೊಂಡಿದ್ದರು. ಎಷ್ಟು ಹುಡುಕಿದರೂ ಸಹ ರಾಜಣ್ಣನಿಗೆ ಅವು ಸಿಗಲಿಲ್ಲ, ಇದರಿಂದ ಅವರು ಬೇಸರಗೊಂಡಿದ್ದರು. ಅಲ್ಲದೆ, ರಾಜಣ್ಣ ರೂಪೇಶ್‌ ಶೆಟ್ಟಿ ಮಾತು ಕೇಳಿ ಬಿಗ್‌ ಬಾಸ್‌ ಮೆಚ್ಚಿಸಲು ಉರುಳುಸೇವೆ ಮಾಡಿದ್ದರು. ಆದ್ರೆ ಬಿಗ್‌ಬಾಸ್‌ ಯಾವುದೇ ರೀತಿ ಅವರಿಗೆ ಸಹಾಯ ಮಾಡಲಿಲ್ಲ.

ಇದನ್ನೂ ಓದಿ: ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅವರ "ಅಬ್ಬರ" ಇವತ್ತಿಂದ ಶುರು..!

ಎಷ್ಟು ಪ್ರಯತ್ನ ಪಟ್ಟರೂ ರಾಜಣ್ಣನಿಗೆ ತಮ್ಮ ಅಭರಣಗಳು ರೂಪೇಶ್ ಶೆಟ್ಟಿಗೆ ಸಿಕ್ಕಿದ್ದು ಅವು ಅವರ ಹತ್ತಿರವೇ ಇವೆ ಎಂದು ತಿಳಿದುಕೊಳ್ಳಲು ಆಗಲಿಲ್ಲ. ಇನ್ನು ಇದನ್ನೇ ಉತ್ತಮ ಸಮಯವೆಂದು ಭಾವಿಸಿ ರೂಪೇಶ್‌ ಶೆಟ್ಟಿ ರಾಜಣ್ಣನಿಗೆ ಕುರಿ ಮಾಡಲು ಮುಂದಾದರು. ಇದಕ್ಕೆ ಆರ್ಯವರ್ಧನ್‌ ಗುರೂಜಿ ಕೂಡ ಕೈಜೊಡಿಸಿ ತಮ್ಮ ದಿವ್ಯ ಶಕ್ತಿಯಿಂದ ಕಳೆದುಹೋಗಿರುವ ಆಭರಣಗಳನ್ನು ಹುಡುಕಿ ಕೊಡುವುದಾಗಿ ಹೇಳಿದರು.

ಇದನ್ನು ನಿಜವೆಂದು ನಂಬಿದ ರಾಜಣ್ಣ ಗುರೂಜಿ ಹೇಳಿದಂತೆ ಕೇಳಲು ಮುಂದಾಗುತ್ತಾರೆ. ಆಗ ಗುರೂಜಿ ಅಡುಗೆ ಮನೆಯಿಂದ ಮೆಣಸಿನ ಕಾಯಿ, ಆಲೂಗಡ್ಡೆ ಸೇರಿದಂತೆ ಇತರೆ ತರಕಾರಿ ತಂದು ಮಂತ್ರ ಮಾಡುವ ರೀತಿ ಮಾಡುತ್ತಾರೆ. ಇದೇ ಸಂದರ್ಭಕ್ಕೆ ಸರಿಯಾಗಿ ರೂಪೇಶ್ ಶೆಟ್ಟಿ ಗಾರ್ಡನ್ ಏರಿಯಾದಲ್ಲಿ ಉಂಗುರ ಹಾಗೂ ಬ್ರೆಸ್​ಲೆಟ್ ಅನ್ನು ಅಡಗಿಸಿಟ್ಟು ಬಂದಿರುತ್ತಾರೆ. ಆಗ ಗುರೂಜಿ ರಾಜಣ್ಣನಿಗೆ ಮೆಣಸಿನಕಾಯಿ ತಿನ್ನಲು ಹೇಳುತ್ತಾನೆ. ಅಲ್ಲದೆ ಮುಖದ ಮೇಲೆ ನೀರು ಎರಚಿ ಮಂಗನನ್ನಾಗಿ ಮಾಡುತ್ತಾರೆ. ಇದನ್ನು ಅರಿಯದ ರಾಜಣ್ಣ ಮಾತ್ರ ಇಬ್ಬರು ಹೇಳಿದಂತೆ ಕೇಳುತ್ತಾರೆ.

ಇದನ್ನೂ ಓದಿ: ಕುಡಿದು ಮತ್ತಿನಲ್ಲಿ ಮಧ್ಯದ ಬೆರಳು ತೋರಿಸಿ ಆಶಿಕಾ ರಂಪಾಟ : ವಿಡಿಯೋ ನೋಡಿ..!

ಇನ್ನು ಮೊದಲೇ ರೂಪೇಶ್‌ ಅಭರಣ ಇಟ್ಟಿದ್ದ ಜಾಗವನ್ನು ಸರಿಯಾಗಿ ನೋಡಿ ಗುರೂಜಿ ಅಲ್ಲಿಗೆ ಆಲೂಗಡ್ಡೆ ಎಸೆಯುತ್ತಾರೆ. ಅಂಬೆಗಾಲು ಇಟ್ಟುಕೊಂಡು ಅಲ್ಲಿಗೆ ಹೋದ ರಾಜಣ್ಣನಿಗೆ ತನ್ನ ಅಭರಣಗಳು ಸಿಗುತ್ತವೆ. ಇದೊಂದು ಪವಾಡ ಎಂದೇ ರೂಪೇಶ್ ರಾಜಣ್ಣ ಭಾವಿಸಿದ್ದರು. ಅದ್ರೆ ಅವರು ಮತ್ತೆ ಕುರಿ ಆಗಿದ್ದು ಮಾತ್ರ ತಿಳಿಯಲಿಲ್ಲ. ಇನ್ನು ಈ ದೃಶ್ಯವನ್ನು ನೋಡಿದ ಎಲ್ಲರೂ ಬಿದ್ದು ಬಿದ್ದು ನಕ್ಕಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More