Home> Entertainment
Advertisement

ಅಜಯ್‌ ದೇವಗನ್‌ ಮಾತ್ರವಲ್ಲ, ಅಕ್ಷಯ್‌ & ಶಾರುಖ್‌ ವಿರುದ್ಧವೂ ಕೆಂಡದಂತಹ ಕೋಪ..!

ಒಂದು ಕಡೆ ಹಿಂದಿ ರಾಷ್ಟ್ರಭಾಷೆ ಹೌದೋ..? ಅಲ್ಲವೋ..? ಎಂಬ ಬಗ್ಗೆ ಬಿಸಿ ಬಿಸಿ ಚರ್ಚೆ ಶುರುವಾಗಿದ್ದರೆ, ಮತ್ತೊಂದು ಕಡೆ ಬಾಲಿವುಡ್‌ನ ಸ್ಟಾರ್‌ ನಟರ ವಿರುದ್ಧ ಉತ್ತರ ಭಾರತದ ಅಭಿಮಾನಿಗಳೇ ಗರಂ ಆಗಿದ್ದಾರೆ. ಈ ರೀತಿ ಫ್ಯಾನ್ಸ್‌ ರೊಚ್ಚಿಗೇಳಲು ಕಾರಣ ಪಾನ್‌ ಮಸಾಲ ಅರ್ಥಾತ್‌ ಗುಟ್ಕಾ ಜಾಹೀರಾತು. ಅಜಯ್‌ ದೇವಗನ್‌, ಅಕ್ಷಯ್‌ ಕುಮಾರ್‌ ಹಾಗೂ ಶಾರುಖ್‌ ಖಾನ್‌ ಒಟ್ಟಾಗಿ ನಟಿಸಿರುವ ಪಾನ್‌ ಮಸಾಲ ಒಂದರ ಖಾಸಗಿ ಜಾಹೀರಾತು ಕಿಡಿ ಹೊತ್ತಿಸಿದೆ.

ಅಜಯ್‌ ದೇವಗನ್‌ ಮಾತ್ರವಲ್ಲ, ಅಕ್ಷಯ್‌ & ಶಾರುಖ್‌ ವಿರುದ್ಧವೂ ಕೆಂಡದಂತಹ ಕೋಪ..!

ಮುಂಬೈ: ಒಂದು ಕಡೆ ಹಿಂದಿ ರಾಷ್ಟ್ರಭಾಷೆ ಹೌದೋ..? ಅಲ್ಲವೋ..? ಎಂಬ ಬಗ್ಗೆ ಬಿಸಿ ಬಿಸಿ ಚರ್ಚೆ ಶುರುವಾಗಿದ್ದರೆ, ಮತ್ತೊಂದು ಕಡೆ ಬಾಲಿವುಡ್‌ನ ಸ್ಟಾರ್‌ ನಟರ ವಿರುದ್ಧ ಉತ್ತರ ಭಾರತದ ಅಭಿಮಾನಿಗಳೇ ಗರಂ ಆಗಿದ್ದಾರೆ. ಈ ರೀತಿ ಫ್ಯಾನ್ಸ್‌ ರೊಚ್ಚಿಗೇಳಲು ಕಾರಣ ಪಾನ್‌ ಮಸಾಲ ಅರ್ಥಾತ್‌ ಗುಟ್ಕಾ ಜಾಹೀರಾತು. ಅಜಯ್‌ ದೇವಗನ್‌, ಅಕ್ಷಯ್‌ ಕುಮಾರ್‌ ಹಾಗೂ ಶಾರುಖ್‌ ಖಾನ್‌ ಒಟ್ಟಾಗಿ ನಟಿಸಿರುವ ಪಾನ್‌ ಮಸಾಲ ಒಂದರ ಖಾಸಗಿ ಜಾಹೀರಾತು ಕಿಡಿ ಹೊತ್ತಿಸಿದೆ.

ಇದನ್ನೂ ಓದಿ: 'ಕನ್ನಡ ಸಿನಿಮಾ ಕೆಜಿಎಫ್ 2 ಬಾಕ್ಸ್ ಆಫೀಸ್ ನಲ್ಲಿ ಹವಾ ಮಾಡಿರೋದು ಹಿಂದಿ ನಟರಿಗೆ ಹೊಟ್ಟೆ ಉರಿ'

ಬಾಲಿವುಡ್‌ನಲ್ಲಿ ಒಂದಾದ ಬಳಿಕ ಮತ್ತೊಂದು ಸಿನಿಮಾಗಳು ಸೋತು, ಸುಣ್ಣವಾಗಿ ಮಕಾಡೆ ಮಲಗುತ್ತಿವೆ. ಹೀಗಾಗಿ ಬಾಲಿವುಡ್‌ ಅಭಿಮಾನಿಗಳು ದಕ್ಷಿಣದ ಸಿನಿಮಾಗಳ ಮೇಲೆ ಕಣ್ಣು ನೆಟ್ಟಿದ್ದಾರೆ. ದಕ್ಷಿಣ ಭಾರತದ ಚಿ‌ತ್ರಗಳು ಎಲ್ಲೆಲ್ಲೂ ಸೂಪರ್‌ ಹಿಟ್‌ ಆಗುತ್ತಿವೆ. ಇಷ್ಟೆಲ್ಲದರ ನಡುವೆ ಭಾಷೆಯ ಯುದ್ಧ ಕೂಡ ಆರಂಭವಾಗಿದೆ. ಬಾಲಿವುಡ್‌ ಸ್ಟಾರ್‌ ನಟರು ಭಾಷೆ ವಿಚಾರವನ್ನೇ ದಾಳವಾಗಿಸಲು ಪ್ರಯತ್ನಿಸಿ, ಮತ್ತೆ ಮತ್ತೆ ಅಜಯ್‌ ದೇವಗನ್‌ ಅವರ ರೀತಿ ಸೋತು ಸುಣ್ಣವಾಗಿದ್ದಾರೆ.

ಇದನ್ನೂ ಓದಿ: 'ನಿಮಗೆ ನಾನು ಕನ್ನಡದಲ್ಲಿ ಪ್ರತಿಕ್ರಿಯಿಸಿದ್ದರೆ ಹೇಗಿರ್ತಿತ್ತು....! ಅಜಯ್ ದೇವಗನ್ ಗೆ ತಿರುಗೇಟು ನೀಡಿದ ಕಿಚ್ಚ ಸುದೀಪ್

ಫ್ಯಾನ್ಸ್‌ಗೆ ಸಿಟ್ಟು ಏಕೆ..?
ಅದೊಂದು ಕಾಲವಿತ್ತು, ಬಾಲಿವುಡ್‌ ಸಿನಿಮಾಗಳು ಎಂಟ್ರಿ ಆಗುತ್ತಿವೆ ಎಂದರೆ ದಕ್ಷಿಣದ ಸಿನಿಮಾಗಳು ನಡುಗುತ್ತಿದ್ದವು. ಆದ್ರೆ ಕಳೆದ 1 ದಶಕಗಳಿಂದ ದಕ್ಷಿಣ ಭಾರತ‌ದ ಸಿನಿಮಾಗಳು ಅಬ್ಬರಿಸುತ್ತಿವೆ. ಈ ಒಂದು ದಶಕವನ್ನ ದಕ್ಷಿಣದ ಸಿನಿ ಮಂದಿ ಎಂದೂ ಮರೆಯಲಾಗದು. 1 ದಶಕದಲ್ಲಿ ಬಾಲಿವುಡ್‌ನ ಪುಡಿ ಪುಡಿ ಮಾಡಿವೆ ದಕ್ಷಿಣದ ಸಿನಿಮಾಗಳು. ಈ ಸಿಟ್ಟಿಗೋ ಏನೋ, ಬಾಲಿವುಡ್‌ ನಟರು ವ್ಯತಿರಿಕ್ತ ಹೇಳಿಕೆಗಳನ್ನ ನೀಡುತ್ತಿದ್ದಾರೆ. ಆದ್ರೆ ಪಾನ್‌ ಮಸಾಲ ಜಾಹೀರಾತಿಗೆ ಬಾಲಿವುಡ್‌ ಸ್ಟಾರ್ಸ್ ಮುಗಿಬಿದ್ದ ಹಿನ್ನೆಲೆ‌ ಅಭಿಮಾನಿಗಳು ರೊಚ್ಚಿಗೆದ್ದು, ಸೋಷಿಯಲ್‌ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಹಿಂದಿ ರಾಷ್ಟ್ರಭಾಷೆ ಎಂಬ ವಿಚಾರಕ್ಕೆ ನಟ ಕಿಚ್ಚ ಸುದೀಪ್‌ ಜೊತೆ ಕಿರಿಕ್‌ ತೆಗೆದಿರುವ ಅಜಯ್‌ ದೇವಗನ್‌ಗೆ ಸ್ವತಃ ಉತ್ತರ ಭಾರತದ ಅದರಲ್ಲೂ ಹಿಂದಿ ಮಾತನಾಡುವ ಜನರೇ ಬುದ್ಧಿ ಹೇಳುತ್ತಿದ್ದಾರೆ. ಪಾನ್‌ ಮಸಾಲ ಜಾಹೀರಾತು ನೀಡುವುದನ್ನ ಮೊದಲು ನಿಲ್ಲಿಸಿ ಎಂದು ತಾಕೀತು ಮಾಡುತ್ತಿದ್ದಾರೆ. ಇದರ ಜೊತೆಗೆ ನಟ ಅಕ್ಷಯ್‌ ಕುಮಾರ್‌ ಹಾಗೂ ನಟ ಶಾರುಖ್‌ ಖಾನ್‌ ವಿರುದ್ಧವೂ ಇದೇ ರೀತಿಯ ಆಕ್ರೋಶ ಮೊಳಗುತ್ತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Read More