Home> Entertainment
Advertisement

ಈ ಬಾಲಿವುಡ್ ನಟನ ಜೊತೆ ಜಗಳವಾಡಿ ಪೋಲಿಸ್ ಗೆ ಕರೆ ಮಾಡಿದ್ದ ಏಕ್ತಾ ಕಪೂರ್ !

 ಸಹೋದರ ತುಷಾರ್ ಕಪೂರ್ ಅವರೊಂದಿಗಿನ ಜಗಳದ ನಂತರ ತಾನು ಒಮ್ಮೆ ಪೊಲೀಸರನ್ನು ಕರೆದಿದ್ದ ಸಂಗತಿಯನ್ನು ಚಲನಚಿತ್ರ ನಿರ್ಮಾಪಕಿ ಏಕ್ತಾ ಕಪೂರ್ ಇತ್ತೀಚೆಗೆ ಬಹಿರಂಗಪಡಿಸಿದ್ದಾರೆ.  

 ಈ ಬಾಲಿವುಡ್ ನಟನ ಜೊತೆ ಜಗಳವಾಡಿ ಪೋಲಿಸ್ ಗೆ ಕರೆ ಮಾಡಿದ್ದ ಏಕ್ತಾ ಕಪೂರ್ !

ನವದೆಹಲಿ:  ಸಹೋದರ ತುಷಾರ್ ಕಪೂರ್ ಅವರೊಂದಿಗಿನ ಜಗಳದ ನಂತರ ತಾನು ಒಮ್ಮೆ ಪೊಲೀಸರನ್ನು ಕರೆದಿದ್ದ ಸಂಗತಿಯನ್ನು ಚಲನಚಿತ್ರ ನಿರ್ಮಾಪಕಿ ಏಕ್ತಾ ಕಪೂರ್ ಇತ್ತೀಚೆಗೆ ಬಹಿರಂಗಪಡಿಸಿದ್ದಾರೆ.  

ದಿ ಕಪಿಲ್ ಶರ್ಮಾ  ಶೋನಲ್ಲಿ ಏಕ್ತಾ ಅವರು ಬಾಲ್ಯದಲ್ಲಿ, ಕಿರಿಯ ಸಹೋದರ ತುಷಾರ್ ಅವರೊಂದಿಗಿನ ಜಗಳದ ಬಗ್ಗೆ ಪ್ರಸ್ತಾಪಿಸಿ ಕೊನೆಗೆ ತಾವು ಪೊಲೀಸರನ್ನು ಕರೆದಿದ್ದ ಸಂಗತಿಯನ್ನು ವಿವರಿಸಿದ್ದಾರೆ. 

ಎನ್‌ಡಿಟಿವಿ ವರದಿಯಲ್ಲಿ ಉಲ್ಲೇಖಿಸಿರುವ ಏಕ್ತಾ, "ಇತರ ಸಹೋದರರಂತೆ, ನಾನು ಮತ್ತು ತುಷಾರ್ ಕೂಡ ಸಾಕಷ್ಟು ಜಗಳವಾಡುತ್ತೇವೆ. ಒಮ್ಮೆ ನಾವು ತಿರುಪತಿಗೆ ಕುಟುಂಬ ಪ್ರವಾಸಕ್ಕೆ ಹೋದಾಗ, ನಾವಿಬ್ಬರೂ ಕೆಲವು ಕಾರಣಗಳಿಗಾಗಿ ಜಗಳವಾಡಲು ಪ್ರಾರಂಭಿಸಿದ್ದೇವೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. ತುಷಾರ್ ನನ್ನ ಮೂಗಿಗೆ ಹೊಡೆದನು. ನಂತರ, ನಾನು ಪೊಲೀಸರಿಗೆ ಡಯಲ್ ಮಾಡಿದೆ. ”ಎಂದು ಏಕ್ತಾ ಹೇಳಿಕೊಂಡಿದ್ದಾರೆ.

ಇದಕ್ಕೆ ದನಿಗೂಡಿಸಿರುವ ತುಷಾರ್ ಕಪೂರ್  "ನಾವಿಬ್ಬರೂ ಶಾಲೆಗೆ ಹೋಗುವಾಗ, ನಾವು ತುಂಬಾ ಜಗಳಮಾಡುತ್ತಿದ್ದೆವು. ನಾವು ಪರಸ್ಪರರ ಕಾಲರ್ ಗುಂಡಿಗಳನ್ನು ಕೂಡ ಹರಿದು ಹಾಕುತ್ತಿದ್ದೆವು. ಅಂತಹ ಸಂದರ್ಭಗಳಲ್ಲಿ, ನಮ್ಮ ಬಟ್ಟೆಗಳನ್ನು ಬದಲಾಯಿಸಲು ನಾವು ಮನೆಗೆ ಹಿಂತಿರುಗಬೇಕಾಗಿತ್ತು ಮತ್ತು ಹೀಗೆ ನಾವು ಶಾಲೆಗೆ ತಡವಾಗಿ ಹೋಗುತ್ತಿದ್ದೆವು. ”ಎಂದು  ತಮ್ಮ ಹಳೆಯ ನೆನಪುಗಳನ್ನು ಶೋ ನಲ್ಲಿ ಹಂಚಿಕೊಂಡಿದ್ದಾರೆ.  

ಏತನ್ಮಧ್ಯೆ, ಏಕ್ತಾ ಕಪೂರ್ ಅವರ ಮುಂದಿನ ಚಿತ್ರ ಮೆಂಟಲ್ ಹೈ ಕ್ಯಾ 2019 ರ ಜುಲೈ 26 ರಂದು ಬಿಡುಗಡೆಯಾಗುತ್ತಿದೆ. ಈ ಚಿತ್ರದಲ್ಲಿ ಕಂಗನಾ ರನೌತ್ ಮತ್ತು ರಾಜ್ ಕುಮಾರ್ ರಾವ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.   

Read More