Home> Entertainment
Advertisement

"ನಮ್ಮ ಮನೆಗೆ ಬರೋಕೆ ಅವರಿಗೆ ಹೆದರಿಕೆ ಇರಬೇಕು.": ʻಡಂಕಿʼ, ʻಸಲಾರ್‌ʼಗೆ ಟಕ್ಕರ್‌ ಕೊಟ್ಟ ಚಾಲೆಂಜಿಂಗ್‌ ಸ್ಟಾರ್!

Kaateera Pressmeet: ಚಾಲೆಂಜಿಂಗ್‌ ಸ್ಟಾರ್‌ ನಟ ದರ್ಶನ್‌, 'ಸಲಾರ್', 'ಡಂಕಿ' ಎರಡು ಪ್ಯಾನ್ ಇಂಡಿಯಾ ಸಿನಿಮಾಗಳ ಬಿಡುಗಡೆಯಾಗಿ ಒಂದು ವಾರದೊಳಗೆ ಕಾಟೇರ ರಿಲೀಸ್ ಮಾಡೋಕೆ ಹೊರಟಿದ್ದು ಬೇಡವಾಗಿತ್ತು ಅಂತ ಮಾತನಾಡಿವರಿಗೆ ಸರಿಯಾಗಿ ಉತ್ತರ ನೀಡಿದ್ದಾರೆ.

Darshan Talks About Kaateera Release: ಸ್ಯಾಂಡಲ್‌ವುಡ್‌ ಚಾಲೆಂಜಿಂಗ್‌ ಸ್ಟಾರ್‌ ನಟ ದರ್ಶನ್ ಸಿನಿಮಾ ರಿಲೀಸ್ ಆಗುತ್ತಿದೆ ಅಂದರೆ, ಥಿಯೇಟರ್‌ನಲ್ಲಿ ಹಬ್ಬವಾಗಿದ್ದು, ಫಸ್ಟ್ ಡೇ ಫಸ್ಟ್ ಶೋ ಚಿತ್ರ ನೋಡುವುದಕ್ಕೆ ನೂಕು ನುಗ್ಗಲು ಕಾಮನ್ ಆಗಿರುತ್ತೆ. ಕಟೌಟ್ ಅಂತೆ, ಅದಕ್ಕೆ ಹೂವಿನ ಹಾರ, ಹಾಲಿನ ಅಭಿಷೇಕ ಜೊತೆಗೆ ಪಟಾಕಿ ಸಿಡಿಸಿ ಸಂಭ್ರಮ ಅಂತೆ ಇವೆಲ್ಲವೂ ಮಿಸ್ ಆಗುವುದಕ್ಕೆ ಸಾಧ್ಯವೇ ಇಲ್ಲ. ಆದರೆ, ಈ ಬಾರಿ ಎಲ್ಲವೂ ಕೊಂಚ ಜಾಸ್ತಿನೇ ಇರುತ್ತೆ ಅಂತ ಅನಿಸುತ್ತಿದ್ದು, ಅದಕ್ಕೆ ದರ್ಶನ್ 'ಕಾಟೇರ' ಸಿನಿಮಾ ಪ್ರಚಾರದ ಮೇಲೆ ಆಡಿದ ಮಾತುಗಳು. ಇದೇ ಡಿಸೆಂಬರ್ 16ರಂದು 'ಕಾಟೇರ' ಚಿತ್ರದ ಟ್ರೇಲರ್ ರಿಲೀಸ್ ಆಗುತ್ತಿದ್ದು, ಎರಡು ವಾರಗಳ ಬಳಿಕ ಅಂದರೆ, ಡಿಸೆಂಬರ್ 29ರಂದು ಸಿನಿಮಾನೇ ರಿಲೀಸ್ ಆಗುತ್ತಿದೆ. 

ಕಾಟೇರ ಚಿತ್ರವನ್ನು 'ಸಲಾರ್', 'ಡಂಕಿ' ಎರಡು ಪ್ಯಾನ್ ಇಂಡಿಯಾ ಸಿನಿಮಾಗಳ ಬಿಡುಗಡೆಯಾಗಿ ಒಂದು ವಾರದೊಳಗೆ ಈ ಸಿನಿಮಾವನ್ನು ರಿಲೀಸ್ ಮಾಡೋಕೆ ಹೊರಟಿದ್ದು, ಎರಡು ಬಿಗ್ ಸಿನಿಮಾ ಮಧ್ಯೆ 'ಕಾಟೇರ' ಬೇಡವಾಗಿತ್ತು ಅಂತ ಮಾತನಾಡಿಕೊಂಡವರಿದ್ದಾರೆ. ಅಷ್ಟಾಗಿಯೂ ಡಿಸೆಂಬರ್ 29ಕ್ಕೆ ಯಾಕೆ ರಿಲೀಸ್ ಮಾಡಿದ್ದು, ಅನ್ನೋದನ್ನು ದರ್ಶನ್ ರಿವೀಲ್ ಮಾಡಿದ್ದಾರೆ. "ಡಿಸೆಂಬರ್ 29ಕ್ಕೆ ಯಾಕೆ ರಿಲೀಸ್ ಮಾಡುತ್ತಿದ್ದೇವೆ ಅಂದ್ರೆ, ನಮ್ಮ ಸಿನಿಮಾ, ನಮ್ಮ ಜಾಗವಿದು. ಯಾರಿಗೋ ಹೆದರಿಕೊಂಡು ನಾವ್ಯಾಕೆ ಬರಬೇಕ್ರಿ. ನಮ್ಮ ಮನೆಗೆ ಬರೋಕೆ ಅವರಿಗೆ ಹೆದರಿಕೆ ಇರಬೇಕು. ನಮಗ್ಯಾಕೆ ಹೆದರಿಕೆ. ನಮ್ಮ ಕನ್ನಡ ಜನ ಇದ್ದಾರಾ ಇಲ್ಲ ಅಂತ ನಮಗೆ ಡೌಟ್ ಬಂದು ಬಿಡಬೇಕು. ಕನ್ನಡ ಸಿನಿಮಾ ಚೆನ್ನಾಗಿದ್ದಾಗ ಯಾವಾಗಲೂ ಕನ್ನಡಿಗರು ಕೈ ಹಿಡಿದೇ ಹಿಡಿಯುತ್ತಾರೆ." ಎಂದು ಆತ್ಮವಿಶ್ವಾಸದಿಂದಲೇ ದರ್ಶನ್ ಹೇಳಿದ್ದಾರೆ. 

ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಮಗದೊಮ್ಮೆ ರಂಗೇರಲಿದೆ ಡಿ ಬಾಸ್ ಫ್ಯಾನ್ಸ್ ಪಾರ್ಟಿ.. ಈ ಬಾರಿ #Kaaterra ಟ್ರೈಲರ್ ಲಾಂಚ್ ಫಂಕ್ಷನ್ ನೆಕ್ಸ್ಟ್ ಲೆವೆಲ್!

ಇಷ್ಟೇ ಅಲ್ಲದೆ ನಟ ದರ್ಶನ್ "ನಾವು ಯಾವುದೇ ಪ್ಯಾನ್ ಇಂಡಿಯಾ ಸಿನಿಮಾ ಮಾಡಿಲ್ಲ ಸ್ವಾಮಿ. ಅಪ್ಪಟ ಕನ್ನಡ ಸಿನಿಮಾ. ಕರ್ನಾಟಕದ ಜನತೆಗೋಸ್ಕರ ಮಾಡಿದ ಸಿನಿಮಾ ಅಂತ ಹೇಳುತ್ತೇನೆ. ನಮ್ಮ ಪ್ರಡ್ಯೂಸರ್‌ಗೆ ಥ್ಯಾಂಕ್ಸ್ ಹೇಳುತ್ತೀನಿ. ಈ ಸಿನಿಮಾ ಸುಮ್ಮನೆ, ಅವರ ಡೇಟ್ ಸಿಕ್ಕಿಲ್ಲ ಅಂತೆಲ್ಲ ತಡವಾಗಿಲ್ಲ. ಎರಡು ಹಳ್ಳಿಯನ್ನು ಕ್ರಿಯೇಟ್ ಮಾಡುವುದು ಇತ್ತಲ್ಲ. ಒಂದು ಹಳ್ಳಿ ಆದ ಕೂಡಲೇ ಅದನ್ನೇ ಬದಲಾಯಿಸಿ, ಇನ್ನೊಂದು ಹಳ್ಳಿ ಮಾಡಬಹುದಿತ್ತು. ಇಲ್ಲ ಹಂಗೆಲ್ಲ ಆಗಲ್ಲ ಅಂತ ಅದಕ್ಕೆ ಎರಡೆರಡು ತಿಂಗಳು ಕೂರಿಸಿದರು. ಎರಡು ತಿಂಗಳು ಡ್ರೈವರ್ ಆಗಿ ಆದರೂ ಇಟ್ಕೊಳ್ಳಿ ಮನೆಗೆ ಕೂರುವುದಕ್ಕೆ ಆಗೋದಿಲ್ಲ ಅಂತ. ಅದೂ ಮಾಡಲಿಲ್ಲ. ಇವರನ್ನು ಒಪ್ಪಿಸೋದಷ್ಟೇ ಕಷ್ಟ. ಒಪ್ಪಿಸಿದ ಮೇಲೆ ಸಿನಿಮಾ ಆಗೋದೇ ಗೊತ್ತಾಗಲ್ಲ" ಎಂದು ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಬಗ್ಗೆ ಹೊಗಳಿ ಮಾತಾಡಿದ್ದಾರೆ. 

ಅಂದ್ಹಾಗೆ ದರ್ಶನ್ ಇನ್ನೂ ಸಿನಿಮಾವನ್ನು ಪೂರ್ತಿಯಾಗಿ ನೋಡಿಲ್ಲ ಎಂದು ಹೇಳಿಕೊಂಡಿದ್ದು, ಡಬ್ಬಿಂಗ್ ಮಾಡುವಾಗ ಸ್ವಲ್ಪ ನೋಡಿದ್ದು ಬಿಟ್ಟರೆ, ಇಡೀ ಚಿತ್ರವನ್ನು ನೋಡಿಲ್ಲ. ಡಿಸೆಂಬರ್ 29ಕ್ಕೆ ಜನರೊಂದಿಗೆ ಕೂತು ನೋಡುತ್ತೇನೆ ಎಂದಿದ್ದಾರೆ. ಕೊನೆಗೆ ದರ್ಶನ್‌ "ಡಿಸೆಂಬರ್ 29ಕ್ಕೆ ಕಾಟೇರ ಬರುತ್ತಿದೆ. ಎಲ್ಲರೂ ನೋಡೋಣ. ನಿಮ್ಮ ಜೊತೆ ಸೇರಿಕೊಂಡು ನಾವು ನೋಡುತ್ತೇವೆ. ನಮಗೂ ಏನೂ ತೋರಿಸಿಲ್ಲ. ಅಲ್ಲಿ ಇಲ್ಲಿ ಡಬ್ಬಿಂಗ್ ಮಾಡಿ ನೋಡಿರಬಹುದು ಅಷ್ಟೇ." ಎಂದು ಚಿತ್ರವನ್ನು ವೀಕ್ಷಿಸಲು ಆಹ್ವಾನ ಕೊಟ್ಟಿದ್ದಾರೆ.
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Read More