Home> Bigg Boss
Advertisement

ಪ್ರತಾಪ್‌ ನೀನು ನನಗೆ ದೇವರು ಕಣೋ..! ಬೆಳಿಗ್ಗೆ ಎದ್ದು ನಿನ್ನನ್ನೇ ನೊಡ್ತೀನಿ, ಒಳ್ಳೆಯದಾಗುತ್ತೆ..

Tukali santhu Drone prathap: ಮನೆಮಂದಿ ಕಾಲೆಳೆಯುತ್ತಿದ್ದ ತುಕಾಲಿ ಸಂತು ಇದೀಗ ತಣ್ಣಗಾಗಿದ್ದಾರೆ. ಅಲ್ಲದೆ, ಟಾಸ್ಕ್‌ಗಳತ್ತ ಗಮನಹರಿಸುತ್ತ ಸಖತ್ ಆಕ್ವೀವ್‌ ಆಗಿದ್ದು, ಸದ್ಯ ವಿನಯ್‌ ಗೌಡ ಟೀಮ್‌ನಲ್ಲಿದ್ದಾರೆ. ಇದೀಗ ತುಕಾಲಿ, ಡ್ರೋನ್‌ ಪ್ರತಾಪ್‌ ಅವರನ್ನು ದೇವರಂತೆ ಕಾಣಿಸುತ್ತಿರುವುದಾಗಿ ಹೇಳಿ, 'ಬಿಗ್ ಬಾಸ್‌' ಬಳಿ ಒಂದು ಮನವಿ ಮಾಡಿಕೊಂಡಿದ್ದಾರೆ.

ಪ್ರತಾಪ್‌ ನೀನು ನನಗೆ ದೇವರು ಕಣೋ..! ಬೆಳಿಗ್ಗೆ ಎದ್ದು ನಿನ್ನನ್ನೇ ನೊಡ್ತೀನಿ, ಒಳ್ಳೆಯದಾಗುತ್ತೆ..

Bigg Boss kannada season 10 : ಬಿಗ್‌ ಬಾಸ್‌ ಮನೆಯಲ್ಲಿ ದಿನದಿಂದ ದಿನಕ್ಕೆ ಡ್ರೋನ್‌ ಗಾಳಿ ಜೋರಾಗಿ ಬೀಸುತ್ತಿದೆ. ಪ್ರತಾಪ್‌ ಶತ್ರುಗಳೇ ಇರದ ನಾಯಕನ ರೀತಿ ದೊಡ್ಮನೆಯಲ್ಲಿ ಸೇಫ್‌ ಜರ್ನಿ ಆರಂಭಿಸಿದ್ದು, ತಂತ್ರಗಾರಿಕೆ ಮತ್ತು ಬುದ್ದಿ ಶಕ್ತಿಯಿಂದ ನಾಮಿನೇಷನ್‌ನಿಂದ ದೂರ ಉಳಿದಿದ್ದಾರೆ. ಅಲ್ಲದೆ, ತಮ್ಮ ಮಾತಿನ ಮೋಡಿಯಿಂದ ಸ್ಪರ್ಧಿಗಳನ್ನು ಗೆಲ್ಲುತ್ತಿದ್ದಾರೆ.

ಇನ್ನು ತುಕಾಲಿ ಸಂತು ಮತ್ತು ಡ್ರೋನ್ ಪ್ರತಾಪ್‌ ಅವರ ಬಗ್ಗೆ ಎಲ್ಲರಿಗೂ ಗೊತ್ತು. ಡ್ರೋನ್‌ ಪ್ರತಾಪಕ್ಕೆ ಮೊದಲು ಬಲಿಯಾಗಿದ್ದೇ ತುಕಾಲಿ ಅಂದ್ರೆ ತಪ್ಪಾಗಲ್ಲ. ಎಲ್ಲರನ್ನು ನಗಿಸುವ ಭರದಲ್ಲಿ ಸಂತೋಷ್‌, ಪ್ರತಾಪ್‌ ಮನಸ್ಸಿಗೆ ನೋವುಂಟು ಮಾಡಿದ್ದ. ಇದನ್ನೇ ಅಸ್ತ್ರವಾಗಿಸಿಕೊಂಡು ಸುಮ್ಮನಿದ್ದ ಪ್ರತಾಪ್‌ ಪ್ರೇಕ್ಷಕರ ಮನ ಗೆದ್ದಿದ್ದ, ಅಲ್ಲದೆ, ಕಿಚ್ಚ ಸುದೀಪ್‌ ಮನೆಮಂದಿಗೆ ಕ್ಲಾಸ್‌ ತೆಗೆದುಕೊಂಡಿದ್ದರು.

ಇದನ್ನೂ ಓದಿ: ಸಚಿನ್ ದಾಖಲೆ ಬ್ರೇಕ್‌ ಮಾಡಿದ ಪತಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ಅನುಷ್ಕಾ..! ಕ್ಯೂಟ್‌ ವಿಡಿಯೋ ವೈರಲ್‌

ಇನ್ನು ಬಿಗ್ ಬಾಸ್‌ ಮನೆಗೆ ಕಾಲಿಟ್ಟ ದಿನಗಳಲ್ಲಿ ಮನೆಮಂದಿ ಕಾಲೆಳೆಯುತ್ತಿದ್ದ ತುಕಾಲಿ ಸಂತು ಇದೀಗ ತಣ್ಣಗಾಗಿದ್ದಾರೆ. ಅಲ್ಲದೆ, ಟಾಸ್ಕ್‌ಗಳತ್ತ ಗಮನಹರಿಸುತ್ತ ಸಖತ್ ಆಕ್ವೀವ್‌ ಆಗಿದ್ದು, ಸದ್ಯ ವಿನಯ್‌ ಗೌಡ ಟೀಮ್‌ನಲ್ಲಿದ್ದಾರೆ. ಇದೀಗ ತುಕಾಲಿ, ಡ್ರೋನ್‌ ಪ್ರತಾಪ್‌ ಅವರನ್ನು ದೇವರಂತೆ ಕಾಣಿಸುತ್ತಿರುವುದಾಗಿ ಹೇಳಿ, 'ಬಿಗ್ ಬಾಸ್‌' ಬಳಿ ಒಂದು ಮನವಿ ಮಾಡಿಕೊಂಡಿದ್ದಾರೆ.

ಪ್ರತಾಪ ನೀನು ನಮ್ಗೆ ದೇವರು ಥರ ಕಾಣಿಸ್ತಾ ಇದ್ದಿಯಾ. ವಾಲ್‌ ಆಫ್ ಮೆಮೋರಿಯಲ್ಲಿ ನಿನ್ ಫೋಟೋ ಇದೆಯಲ್ಲ, ಅದನ್ನು ತೆಗೆದುಕೊಳ್ಲಾ ನಾನು? ದಿನಾ ನನ್ ತಲೆ ಹತ್ರ ಇಟ್ಟುಕೊಂಡು ನಿದ್ದೆ ಮಾಡ್ತೀನಿ. ಬೆಳಗ್ಗೆ ಎದ್ದ ತಕ್ಷಣ ನೋಡ್ತೀನಿ. ಇಲ್ಲಿ ಇರುವವರ ಮುಖ ನೋಡಿದ್ರೆ ಏನೂ ಒಳ್ಳೇದು ಆಗ್ತಿಲ್ಲ ಕಣೋ.. ಪ್ಲೀಸ್.' ಎಂದು ಪ್ರತಾಪ್ ಬಳಿ ತುಕಾಲಿ ಸಂತು ಬೇಡಿಕೊಂಡಿದ್ದಾರೆ.

ಇದನ್ನೂ ಓದಿ: ಸೆಲ್ಫಿ ತೆಗೆದುಕೊಳ್ಳಲು ಬಂದ ಅಭಿಮಾನಿಗೆ ಹೊಡೆದ ʼನಟ ನಾನಾ ಪಾಟೇಕರ್ʼ..! ವಿಡಿಯೋ ವೈರಲ್‌

ಅಲ್ಲದೆ, ಬಿಗ್‌ಬಾಸ್‌ ಕ್ಯಾಮೆರಾ ಎದುರು ಬಂದು 'ಬಿಗ್ ಬಾಸ್ ನಿಮ್ ದಮ್ಮಯ್ಯ ಅಂತೀನಿ, ಬೆಳಗ್ಗೆ ಎದ್ದು ಯಾರ್ ಮುಖ ನೋಡಿದ್ರು ಎಡವಟ್ಟು ಆಗ್ತಾ ಇದೆ. ಈಗ ನನಗೆ ಜ್ಞಾನೋದಯವಾಗಿದೆ. ನೊಂದವರ ಪಾಲಿಗೆ ಪ್ರತಾಪ್ ದೇವರು ಥರ ಕಾಣಿಸ್ತಾ ಇದ್ದಾರೆ. ನನಗೆ ಪ್ರತಾಪ್ ಅವರ ಒಂದೇ ಒಂದು ಫೋಟೋ ಕೊಡಿ. ಅದನ್ನು ತಲೆ ಹತ್ರ ಇಟ್ಕೊಂಡು ಮಲ್ಕೋತಿನಿ ಎಂದು ಬೇಡಿಕೆ ಇಟ್ಟಿದ್ದಾರೆ.  ಅದ್ರೆ ಬಿಗ್‌ಬಾಸ್‌ ಸಂತು ಆಸೆ ಈಡೇರಿಸುತ್ತಾ ಅಂತ ಕಾಯ್ದು ನೋಡಬೇಕು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More