Home> Bigg Boss
Advertisement

BBK10: ಬಿಗ್‌ಬಾಸ್ ಮನೆಯ ಕ್ಯಾಪ್ಟನ್‌ ಆದ ಕಾರ್ತಿಕ್: ‌ಖುಷಿಯಲ್ಲಿ ಕುಣಿದು ಕುಪ್ಪಳಿಸಿದ ಸಂಗೀತಾ ಹಾಗೂ ತನಿಷಾ

Bigg Boss: ಬಿಗ್‌ಬಾಸ್‌ ಕನ್ನಡ ಸೀಸನ್‌ 10ರ ಕಾರ್ಯಕ್ರಮದಲ್ಲಿ,  ಈವರೆಗೂ ಪ್ರತಿ ವಾರ ನಾಮಿನೇಟ್ ಆಗುತ್ತಿದ್ದ ಕಾರ್ತಿಕ್‌, ಆರನೇ ವಾರ ಕ್ಯಾಪ್ಟನ್ ಆಗಿ ಕಾರ್ತಿಕ್ ಮಹೇಶ್ ಆಯ್ಕೆ ಆಗಿದ್ದು,  ಈ ವಾರಾಂತ್ಯದ ಎಲಿಮಿನೇಷನ್‌ನಿಂದ ಸೇಫ್ ಆಗಿದ್ದಾರೆ.
 

BBK10: ಬಿಗ್‌ಬಾಸ್ ಮನೆಯ ಕ್ಯಾಪ್ಟನ್‌ ಆದ ಕಾರ್ತಿಕ್: ‌ಖುಷಿಯಲ್ಲಿ ಕುಣಿದು ಕುಪ್ಪಳಿಸಿದ ಸಂಗೀತಾ ಹಾಗೂ ತನಿಷಾ

Karthik Mahesh Became Bigg Boss Captain: ಬಿಗ್‌ಬಾಸ್‌ ಮನೆಯಲ್ಲಿ ಆರನೇ ವಾರದ ಕ್ಯಾಪ್ಟನ್ ಆಗಲು ಕ್ಯಾಪ್ಟನ್‌ ರೇಸ್‌ನಲ್ಲಿ ಡ್ರೋನ್ ಪ್ರತಾಪ್, ನಮ್ರತಾ, ಕಾರ್ತಿಕ್ ಮಹೇಶ್, ತುಕಾಲಿ ಸಂತು ಹಾಗೂ ವರ್ತೂರು ಸಂತೋಷ್‌ ಪೈಪೂಟಿಗೆ ಇಳಿದಿದ್ದರು. ಈ ಐದೂ ಮಂದಿಗೆ ಬಿಗ್‌ಬಾಸ್‌ ಬುದ್ಧಿ ಉಪಯೋಗಿಸಿ ಆಡುವ ಚಟುವಟಿಕೆಯನ್ನ ನೀಡಿದ್ದು, ಈ ಚಟುವಟಿಕೆಯನ್ನ ವೇಗವಾಗಿ ಮುಗಿಸಿ ಕ್ಯಾಪ್ಟನ್ ಆದವರು ಕಾರ್ತಿಕ್ ಮಹೇಶ್. ಇಲ್ಲಿಯವರೆಗೂ ಸತತವಾಗಿ ಕಾರ್ತಿಕ್ ಪ್ರತಿ ವಾರ ನಾಮಿನೇಟ್ ಆಗುತ್ತಿದ್ದು, ಈ ವಾರಾಂತ್ಯದ  ಕಾರ್ತಿಕ್ ಎಲಿಮಿನೇಷನ್‌ನಲ್ಲಿ ಬಚಾವ್ ಆದರು.

ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಡ್ರೋನ್ ಪ್ರತಾಪ್‌, ವರ್ತೂರು ಸಂತೋಷ್ ಹಾಗೂ ತುಕಾಲಿ ಸಂತು ಇನ್ನೇನು ಕಂಪ್ಲೀಟ್‌ ಆಗುವ ಹಂತದಲ್ಲಿದ್ದು, ಇನ್ನೇನು ಇವರು ಮುಗಿಸಿದರು ಅನ್ನೋಷ್ಟರಲ್ಲಿ ಕಾರ್ತಿಕ್ ಮಹೇಶ್ ವಿನ್ ಆಗ್ಬಿಟ್ಟರು.ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಕಾರ್ತಿಕ್ ಗೆಲ್ಲುತ್ತಿದ್ದಂತೆಯೇ ಸಂಗೀತಾ ಖುಷಿಯಿಂದ ಕುಣಿದಾಡಿ, ಕಾರ್ತಿಕ್‌ರನ್ನ ತಬ್ಬಿಕೊಂಡರು. ಮತ್ತೆ ಕಾರ್ತಿಕ್ ಕ್ಲೋಸ್ ಫ್ರೆಂಡ್ ಆಗಿರುವ ತನಿಷಾ ಕುಪ್ಪಂಡ   ಕೂಡ ಸಂತಸ ಪಟ್ಟರು. 

ಇದನ್ನು ಓದಿ: Tanisha Kuppanda : ಕೊನೆಗೂ ಜೈಲು ಸೇರಿದ ತನಿಷಾ ಕುಪ್ಪಂಡ, ಅಮ್ಮನ ನೆನೆದು ಕಣ್ಣೀರು!

ಕಾರ್ತಿಕ್ ಲಕ್ಕಿ ನಂಬರ್‌ ಏಳು, ಹುಟ್ಟಿದ ದಿನ ಏಳು, ಬಿಗ್‌ಬಾಸ್‌ ಮನೆಯೊಳಗೆ ಎಂಟ್ರೀ ಕೊಟ್ಟ ದಿನ ಏಳು ಆಗಿದ್ದು, ಇದೀಗ  ಏಳನೇ ವಾರಕ್ಕೆ ಕಾರ್ತಿಕ್ ಕ್ಯಾಪ್ಟನ್ ಆಗಿ ಆಯ್ಕೆ ಆಗಿದ್ದು, ‘7’ರ ನಂಟನ್ನ ಕ್ಯಾಪ್ಟನ್ ಆದ್ಮೇಲೆ ಮಾತನಾಡಿದರು. ಬಳಿಕ ಕಾರ್ತಿಕ್‌ಗೆ ಫ್ಯಾಮಿಲಿ ಫೋಟೋ ಲಭಿಸಿತು.ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ನಮ್ರತಾ ಗೌಡ ಗೆಲ್ಲದ ಕಾರಣ  ಬೇಸರದಲ್ಲಿ "ನಾನು ಕ್ಯಾಪ್ಟನ್ ಆಗಬೇಕಿತ್ತು. ಅಸಹ್ಯ ಆಗುತ್ತಿದೆ ನನಗೆ. ತುಂಬಾ ಸ್ಟ್ರೆಸ್ ಆಗುತ್ತಿದೆ ನನ್ನ ತಲೆ. ಜನ ತುಂಬಾ ನಿರೀಕ್ಷೆ ಇಟ್ಟುಕೊಂಡಿರುತ್ತಾರೆ ಅಲ್ವಾ?" ಅಂತ ಹೇಳುತ್ತಾ ಕಣ್ಣೀರಿಟ್ಟರು.

ಕ್ಯಾಪ್ಟನ್ಸಿ ಟಾಸ್ಕ್‌ಗೆ ಐವರನ್ನು ಆಯ್ಕೆ ಮಾಡುವಾಗ ಮೊದಲು ತುಕಾಲಿ ಸಂತುರನ್ನ ಇತರರು ವೋಟಿಂಗ್‌ ವೇಳೆ ಅಯ್ಕೆ ಮಾಡದೆ, ವೋಟಿಂಗ್ ಪದ್ಧತಿ ಬಗ್ಗೆ ಈತ ವಿರೋಧ ವ್ಯಕ್ತಪಡಿಸಿದರು. ಬಳಿಕ ಕ್ಯಾಪ್ಟನ್ ರೇಸ್‌ಗೆ ಇಳಿಯಲು ತುಕಾಲಿ ಸಂತುಗೆ ಅವಕಾಶ ನೀಡಲಾಗಿದ್ದು, ಆದರೆ ಆಟದಲ್ಲಿ ಗೆಲುವು ಸಾಧಿಸುವಲ್ಲಿ ಸ್ವಲ್ಪದರಲ್ಲೇ  ಸಂತು ಹಿಂದುಳಿದರು. ಕ್ಯಾಪ್ಟನ್‌ ಪಟ್ಟಕ್ಕೇರುವಲ್ಲಿ ತುಕಾಲಿ ಸಂತು ಜಸ್ಟ್ ಮಿಸ್ ಆಗಿದ್ದರಿಂದ ತುಕಾಲಿ ಸಂತು ಬೇಸರಗೊಂಡರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Read More