Home> Bigg Boss
Advertisement

BBK 10: ಬಿಗ್‌ಬಾಸ್‌ ಮನೆಯ ವಾರದ ಲಕ್ಷುರಿ ಬಜೆಟ್ ಹೊಗೆ! ದೊಡ್ಮನೆಯ ಸದಸ್ಯರ ಮಧ್ಯೆ ಮನಸ್ತಾಪ!

Bigg Boss Kannada 10: ಬಿಗ್‌ಬಾಸ್‌ ಕನ್ನಡ 10 ಕಾರ್ಯಕ್ರಮದಲ್ಲಿ ಮೊದಲ ವಾರದಿಂದಲೂ ಒಂದಲ್ಲಾ ಒಂದು ಕಾರಣಕ್ಕೆ ಲಕ್ಷುರಿ ಬಜೆಟ್‌ನ ಸ್ಪರ್ಧಿಗಳು ಕಳೆದುಕೊಳ್ಳುತ್ತಿದ್ದು, ಈ ಬಾರಿ ಲೆಕ್ಕಾಚಾರ ಉಲ್ಟಾ ಪಲ್ಟಾ ಆಗಿ, ನಿಗದಿಗಿಂತ ಹೆಚ್ಚಿನ ಮೌಲ್ಯದ ಸಾಮಾಗ್ರಿಗಳನ್ನು ಬರೆದ ಕಾರಣ ಲಕ್ಷುರಿ ಬಜೆಟ್‌ ಮಿಸ್‌ ಆಗಿದೆ. ಇದಕ್ಕೆ ಕಾರಣ ಏನು? ಇಲ್ಲಿದೆ ಸಂಪೂರ್ಣ ಸ್ಟೋರಿ.

BBK 10: ಬಿಗ್‌ಬಾಸ್‌ ಮನೆಯ ವಾರದ ಲಕ್ಷುರಿ ಬಜೆಟ್ ಹೊಗೆ! ದೊಡ್ಮನೆಯ ಸದಸ್ಯರ ಮಧ್ಯೆ ಮನಸ್ತಾಪ!

Bigg Boss Luxury Budget: ಬಿಗ್‌ಬಾಸ್‌ ಮನೆಯಲ್ಲಿ ಈ ವಾರದ ಸ್ಕೂಲ್ ಟಾಸ್ಕ್‌ನಲ್ಲಿ ವಿದ್ಯಾರ್ಥಿಗಳಾಗಿ ಹೆಚ್ಚು ಸ್ಟಾರ್ ಹಾಗೂ ಶಿಕ್ಷಕರಾಗಿ ಕಡಿಮೆ ದೂರು ಪಡೆದಿದ್ದ ನಮ್ರತಾ, ಸಂಗೀತಾ ಶೃಂಗೇರಿ, ಮೈಕಲ್, ಡ್ರೋನ್ ಪ್ರತಾಪ್, ವಿನಯ್, ಪವಿ ಪೂವಪ್ಪ, ಸಿರಿ, ತನಿಷಾ ಕುಪ್ಪಂಡ, ಅವಿನಾಶ್ ಶೆಟ್ಟಿ, ವರ್ತೂರು ಸಂತೋಷ್ , ಈ ವಾರ ಲಕ್ಷುರಿ ಬಜೆಟ್‌ ಪಡೆಯಲು ಅರ್ಹರಾಗಿದ್ದರು. ಇವರೆಲ್ಲರಿಗಾಗಿ 10 ಸಾವಿರ ಲಕ್ಷುರಿ ಬಜೆಟ್‌ ಪಾಯಿಂಟ್‌ಗಳನ್ನು ಬಿಗ್‌ಬಾಸ್‌ ನಿಗದಿ ಪಡಿಸಿದ್ದು, ಲಕ್ಷುರಿ ಬಜೆಟ್ ಖರೀದಿ ವೇಳೆ, ನಮ್ರತಾ ಪನ್ನೀರ್ - 600 ಗ್ರಾಂ 3 ಪ್ಯಾಕೆಟ್, ಬ್ರೌನ್ ರೈಸ್ - 10 ಕೆಜಿ, ತುಪ್ಪ - 1 ಕೆಜಿ, ಚಿಕನ್ - 5 ಕೆಜಿ ಬರೆದರು. ಒಟ್ಟು ಮೊತ್ತವನ್ನ ಮೈಕಲ್‌ ಲೆಕ್ಕ ಹಾಕಿದಾಗ, ಈ ಎಲ್ಲಾ ಸಾಮಗ್ರಿಗಳ ಒಟ್ಟು ಮೊತ್ತ 11 ಸಾವಿರದ ಮೇಲಾಯಿತು. 

ಆ ಸಮಯದಲ್ಲಿ, ಪನ್ನೀರ್‌  2 ಪ್ಯಾಕೆಟ್ ಮಾಡೋಷ್ಟರಲ್ಲಿ ಟೈಮ್‌ ಮುಗಿದು ಹೋಗಿ, ನಿಗದಿತ ಸಮಯದಲ್ಲಿ ಖರೀದಿ ಮುಗಿಯದ ಕಾರಣ ಲಕ್ಷುರಿ ಬಜೆಟ್‌ ಮಿಸ್‌ ಆಯ್ತು."ಒಂದು ಐಟಮ್‌ ಮೈನಸ್‌ ಮಾಡಬೇಕಿತ್ತು" ಎಂದು ಸಿರಿ ಹೇಳಿದರೇ, ಇನ್ನು "ಪಾಪಿಗಳು ಅಂದೆ ಪಾಪಿಗಳೇ ಆಗೋದ್ವಿ. ಎಲ್ಲಾ ಹೋಯ್ತು. ಈಗ ಖುಷಿನಾ" ಎಂದು ತುಕಾಲಿ ಸಂತುಗೆ ವರ್ತೂರು ಸಂತೋಷ್ ಕೇಳಿದರು. "ಬ್ರೌನ್ ರೈಸ್‌ - 5 ಕೆಜಿ ಮೈನಸ್‌ ಮಾಡಿದ್ದರೆ ಈಸಿಯಾಗಿ ಆಗಿರೋದು" ಎಂದು ಕಾರ್ತಿಕ್ ಕೇಳಿದಾಗ, "ಯಾವಾಗಲೂ 2 ಐಟಂ ಮಾಡ್ತಿದ್ರಿ. ಈ ಬಾರಿ 4 ಐಟಂ ಯಾಕೆ ತಗೊಳ್ಳಲು ಹೋದ್ರಿ?’’ ಎಂದು ತುಕಾಲಿ ಸಂತು ಪ್ರಶ್ನಿಸಿದರು. ಇತ್ತ, ವಿನಯ್ "ಈ ಮನೆಗೆ ಬಂದು ನಾನು ಕಲಿತಿರೋದು ಏನು ಅಂದ್ರೆ, ಯಾವುದು ನಮಗೆ ಸಿಗಲ್ವೋ.. ಅದರ ಬಗ್ಗೆ ಆಸೆ ಬಿಟ್ಟುಬಿಡಬೇಕು. ಚಿಕನ್ ಬಿಟ್ಟೆ, ಕಾಫಿ ಬಿಟ್ಟೆ, ಲಕ್ಷುರಿ ಅಂತೂ ಮರೆತುಬಿಟ್ಟಿದ್ದೀನಿ" ಎಂದರು.

ಇದನ್ನೂ ಓದಿ: BBK10: ಹಸಿವಿಂದ ಕಂಗೆಟ್ಟ ಬಿಗ್‌ಬಾಸ್‌ ಸದಸ್ಯರಿಗೆ ಕಿಚ್ಚನ ಕೈಯಡುಗೆಯ ಕೊಡುಗೆ!

ದೊಡ್ಮನೆಯ ಸದಸ್ಯರು ತಮಗನ್ನಿಸಿರುವುದು ಮಾತನಾಡುತ್ತಿರುವಾಗ, ವಿನಯ್‌ ಲಕ್ಷುರಿ ಬಜೆಟ್ ಮಿಸ್ ಆಗೋಕೆ ತನಿಷಾ ಕಾರಣ ಅಂತ ಆರೋಪಿಸಿದರು. ಆಗ ಸಂಗೀತಾಗಾಗಿ ಪನ್ನೀರ್‌ ಕನ್ಸಿಡರ್‌ ಮಾಡಬೇಕು ಅಂತ ತನಿಷಾ ಹೇಳಿದಕ್ಕೆ, ಪನ್ನೀರ್‌ ಇಂದಲೇ ಲಕ್ಷುರಿ ಬಜೆಟ್ ಮಿಸ್‌ ಆಗಿದ್ದು ಅನ್ನೋದು ವಿನಯ್ ವಾದ ಮಾಡಿದರು. ಮಾತಿಗೆ ಮಾತು ಬೆಳೆದು ನಮ್ರತಾ - ಸಂಗೀತಾ ಮಧ್ಯೆ ವಾಗ್ವಾದ ಜೋರಾದಾಗ, ಕೊನೆಗೆ "ಪತ್ರ ಓದುವಾಗಲೂ ಬ್ರೌನ್ ರೈಸ್ ಹೇಳಿದ್ವಿ. ಅದನ್ನ ಯಾರೂ ಪ್ರಶ್ನೆ ಮಾಡಲಿಲ್ಲ. ಈ ಕೇಳಿ ಪ್ರಯೋಜನ ಇಲ್ಲ" ಎಂದು ನಮ್ರತಾ ಗುಡುಗಿದರು. ಅದಕ್ಕೆ ಸಂಗೀತಾ "ಚರ್ಚೆಯಲ್ಲಿ ನಮ್ಮನ್ನ ಇನ್ವಾಲ್ವ್ ಮಾಡೋದೇ ಇಲ್ಲ" ಎಂದು ದೂರಿದರು.

ನಮ್ರತಾ - ಸಂಗೀತಾ ಇಬ್ಬರ ಜಗಳ ಮುಂದುವರೆಯುತ್ತಾ, ನಮ್ರತಾ "ಸಂಗೀತಾ ಮೆಂಟಲಿ ತುಂಬಾ ಹಿಂಸೆ ಕೊಡ್ತಾರೆ. ನನ್ನ ಮನೆಗೆ ತಗೊಂಡು ಹೋಗೋಕೆ ಬರೆದ್ನಾ? ಒಬ್ಬರಿಗೆ ಮಾತ್ರ ಪನ್ನೀರ್ ಬೇಕಾಗಿತ್ತು. ಅದನ್ನ ನಾನು ಕ್ಯಾನ್ಸಲ್ ಮಾಡಬಹುದಿತ್ತು. ಆದರೆ ನಾನು ಮಾಡಲಿಲ್ಲ. ಟೋಟಲ್ 11 ಸಾವಿರ ಆದಾಗ ಬ್ಲಾಂಕ್ ಆಗಿದ್ದು ನಿಜ. ಅದನ್ನ ಯೋಚನೆ ಮಾಡದೆ ಪ್ರಶ್ನೆ ಮಾಡ್ತಾರೆ" ಎಂದು ಕಣ್ಣೀರಿಟ್ಟರು. ಇತ್ತ, ಸಂಗೀತಾ ಸಹ "ನನಗೆ ತುಂಬಾ ಹರ್ಟ್ ಆಗುತ್ತಿದೆ. ನಾನು ಏನೂ ಮಾಡಿಲ್ಲ. ಪ್ರಶ್ನೆ ಮಾಡಿದರೆ ಜಗಳ ಆಡ್ತಾರೆ" ಎಂದು ಬೇಸರ ವ್ಯಕ್ತಪಡಿಸಿದರು. ಅವಾಗ ಬಿಗ್‌ಬಾಸ್‌ "ಗೊಂದಲ ಹಾಗೂ ಲೆಕ್ಕಾಚಾರದಲ್ಲಿ ಆದ ತಪ್ಪಿನಿಂದ ಈ ವಾರ ಮನೆ ಲಕ್ಷುರಿ ಬಜೆಟ್‌ ಕಳೆದುಕೊಂಡಿದೆ" ಎಂದು ಘೋಷಿಸಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Read More