Home> Bigg Boss
Advertisement

BiggBoss Kannada 10: ಸಿರಿ ಮದುವೆಯಾಗುವ ಹುಡುಗ ಹೇಗಿರಬೇಕಂತೆ ಗೊತ್ತಾ!

BiggBoss Contestant Siri: ಅನೇಕ ಧಾರವಾಹಿ ಹಾಗೂ ಸಿನಿಮಾಗಳ ಮೂಲಕ ಜನರ ಮನಸ್ಸು ಗೆದ್ದ ನಟಿ ಸಿರಿ ಎಷ್ಟು ವರ್ಷವಾದರು ಇನ್ನು ಮದುವೆಯಾಗಿಲ್ಲ. ಈ ವಿಷಯದ ಬಗ್ಗೆ ನಟಿ ಸಿರಿ ಬಿಗ್‌ಬಾಸ್‌ ಮನೆಯಲ್ಲಿ ಹಂಚಿಕೊಂಡಿದ್ದಾರೆ. ಸಿರಿಯವರ ತಂದೆ ತೀರಿಕೊಂಡ ಕೆಲವು ತಿಂಗಳಲ್ಲಿ ಈಕೆಯ ಬಾವ ಕಳೆದುಕೊಂಡ ಹೆಚ್ಚು ನೊವಿಗೆ ಕಾರಣವಾಗಿದೆ ಎಂಬುದರ ಬಗ್ಗೆ ಮಾತನಾಡಿದ್ದಾರೆ. ಈ ವಿಷಯದಿಂದ ಮದುವೆಯಾಗಲು ಧೈರ್ಯ ಮಾಡಲಿಲ್ಲ ಎಂದು ಹೇಳಿದ್ದಾರೆ. 

BiggBoss Kannada 10: ಸಿರಿ ಮದುವೆಯಾಗುವ ಹುಡುಗ ಹೇಗಿರಬೇಕಂತೆ ಗೊತ್ತಾ!

BBK10 Siri About Her Marriage: ಕಿರುತೆರೆ ಹಾಗೂ ಬೆಳ್ಳಿತೆರೆ ಮೇಲೆ ಹಲವಾರು ಧಾರವಾಹಿ ಮತ್ತು ಸಿನಿಮಾಗಳಲ್ಲಿ ತಮ್ಮ ನಟನೆಯ ಮೂಲಕ ವೀಕ್ಷಕರನ್ನು ಮನೋರಂಜಿಸಿದ ನಟಿ ಸಿರಿ ಇನ್ನು ಮದುವೆಯಾಗಿಲ್ಲ. ಸಿರಿ ಬಿಗ್‌ಬಾಸ್‌ ಮನೆಗೆ ಎಂಟ್ರಿ ಕೊಟ್ಟ ಮೇಲೆ ಅವರ ಅಭಿಮಾನಿಗಳಲ್ಲೂ ಕೂಡ ಈ ವಿಷಯ ಹೆಚ್ಚು ಚರ್ಚೆಯಾಗುತ್ತಿದೆ. 

ಈಕೆಯ ವಯಸ್ಸು 39 ಆದರೂ ಮದುವೆಯಾಗಲು ಧೈರ್ಯ ಮಾಡಲಿಲ್ಲ. ನಟಿ ಸಿರಿ ಅವರಿಗೆ ನಿಜಕ್ಕೂ ಮದುವೆ ಇಷ್ಟವಿಲ್ಲವೇ? ಅಥವಾ ಮದುವೆ ಎಂದರೆ ಭಯವೇ? ಈ ಬಗ್ಗೆ ನಟಿ ಸಿರಿ ಬಿಗ್‌ಬಾಸ್‌ ಸೀಸನ್‌ 10ರ ಮನೆಯಲ್ಲಿ ಮುಕ್ತವಾಗಿ ದೊಡ್ಮನೆಯ ಸದಸ್ಯರ ಜೊತೆಗೆ ಮಾತನಾಡಿರುವ ನಟಿ ಸಿರಿ "ತಂದೆ ಸಾವಿನ ನೋವು ಮಾಸುವ ಮುನ್ನವೇ ಭಾವ ತೀರಿಕೊಂಡು, ಅಕ್ಕ ಈಗ ಸಿಂಗಲ್‌ ಪೇರೆಂಟ್‌" ಎಂದು ಭಾವುಕರಾಗಿದ್ದಾರೆ. 

ಬಿಗ್‌ಬಾಸ್‌ ಮನೆಯಲ್ಲಿ ತಮ್ಮ ತಂದೆ ಬಗ್ಗೆ ಮನದಾಳದ ಮಾತುಗಳನ್ನು ಹಂಚಿಕೊಂಡಿರುವ ನಟಿ ಸಿರಿ, "ಒಂದು ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇರುತ್ತಾರೆ ಅಂತೆ. ಆದರೆ ನಾನು ಒಂದು ಯಶಸ್ವಿ ಮಹಿಳೆಯ ಹಿಂದೆ ಒಬ್ಬ ಪುರುಷನೂ ಇರುತ್ತಾನೆ ಅಂತೀನಿ. ನನ್ನ ತಂದೆ ನಮಗೋಸ್ಕರ ತುಂಬಾ ಕಷ್ಟ ಪಟ್ಟಿದ್ದಾರೆ, ತ್ಯಾಗನೂ ಮಾಡಿದ್ದಾರೆ. ನಾನು ಶೂಟಿಂಗ್‌ ಮುಗಿಸಿ ಬಂದ ತಕ್ಷಣ, ನನ್ನ ತಂದೆ ಎದುರಿಗೆ ಬರುತ್ತಿದ್ದರು. ಆದರೀಗ ನನ್ನ ತಂದೆ ಇಲ್ಲ. ನನ್ನ ತಂದೆ ಕೂರುತ್ತಿದ್ದ ಸೋಫಾ ನೋಡಲು ತುಂಬಾ ಕಷ್ಟ ಆಗುತ್ತದೆ. ಪ್ರತಿದಿನ ಶೂಟಿಂಗ್‌ ಮುಗಿಸಿದ ಮೇಲೆ ನನಗೆ ಮನೆಗೆ ಹೋಗಲು ಇಷ್ಟ ಆಗುತ್ತಿರಲಿಲ್ಲ. ನನಗೆ ನಮ್ಮ ಮನೆಯಲ್ಲಿ ತಂದೆಯಿಲ್ಲ ಎಂಬ ಬೇಸರ ಕಾಡುತ್ತದೆ" ಎಂದು ಹೇಳಿದ್ದಾರೆ.

ಇದನ್ನೂ ಓದಿ-  ನಟ ದರ್ಶನ್ ಮನೆಯಲ್ಲಿ 8 ಹುಲಿ ಉಗುರಿನ ಪೆಂಡೆಂಟ್ ಪತ್ತೆ..! ಅಸಲಿ ಅಥವಾ ನಕಲಿ..?

ನನ್ನ ಗಂಡ ಆಗುವವನು ಅಳಿಯ ಮತ್ರವಲ್ಲ, ಮಗನೂ ಆಗಬೇಕು!
ಇದೇ ಸಂದರ್ಭದಲ್ಲಿ ತಮ್ಮನ್ನು ಮದುವೆಯಾಗುವ ಹುಡುಗ ಹೇಗಿರಬೇಕು ಎಂಬ ಬಗ್ಗೆಯೂ ಮಾತನಾಡಿರುವ ನಟಿ ಸಿರಿ, "ನನ್ನ ಮದುವೆಯಾಗುವ ಹುಡುಗ ಅಳಿಯನೂ ಆಗಬೇಕು, ಮಗನೂ ಆಗಿರಬೇಕು. ನನ್ನ ಮದುವೆಯಾಗುವ ಹುಡುಗ ನನ್ನ ತಂದೆ ಪ್ರೀತಿ ಕೊಟ್ಟ ಅವನು ಪ್ರೀತಿ ನೀಡಬೇಕು. ಮದುವೆ ಆದ ಬಳಿಕ ಸಮಸ್ಯೆ ಬಂದರೆ ನನಗೆ ಇಷ್ಟ ಆಗುವುದಿಲ್ಲ. ನಮ್ಮ ತಂದೆ ಪ್ರೀತಿಯನ್ನು ನೋಡಿದ ನಮಗೆ ನಮ್ಮ ಗಂಡನೂ ಅದೇ ರೀತಿ ಪ್ರೀತಿ ಮಾಡಬೇಕು. ಅವನು ಆರ್ಥಿಕವಾಗಿ ಚೆನ್ನಾಗಿ ಇದ್ದರೆ ಸಾಲದು, ನಮ್ಮ ಕಷ್ಟಕ್ಕೆ ಆಗುವಂತವನಾಗಿರಬೇಕು. ಮದುವೆಯ ನಂತರ ಅವರ ಕುಟುಂಬದಿಂದ ನಮ್ಮ ಕುಟುಂಬದಿಂದ ದೂರವಾಗುವ ಪ್ರಶ್ನೆ ಕಾಡುತ್ತದೆ. ಅದಕ್ಕೆ ನಾನು ಇಷ್ಟು ವರ್ಷ ಮದುವೆಯಾಗಲು ತಯಾರಾಗಲಿಲ್ಲ. ಹಾಗೆ ನನಗೆ ಧೈರ್ಯನೂ ಬರಲಿಲ್ಲ" ಎಂದು ಹೇಳಿಕೊಂಡಿದ್ದಾರೆ.

ಸಿರಿ ತಮ್ಮ ಮಾತು ಮುಂದುವರೆಸುತ್ತಾ " ನನ್ನ ತಂದೆ ತೀರಿಕೊಂಡ ನೋವಿನಿಂದ ಇನ್ನೂ ಹೊರ ಬಂದಿರಲಿಲ್ಲ. ಅವರ ಅಂತ್ಯಕ್ರಿಯೆ ಮಾಡುವಾಗ ಅವರ ದೇಹದ ಮೇಲೆ ಕರ್ಪೂರ ಹಚ್ಚಿದ್ರು. ಅದು ನನಗೆ ಇನ್ನೂ ನೆನಪಿದೆ. ನನ್ನ ತಂದೆ ತೀರಿಕೊಂಡು ಆರು ತಿಂಗಳಲ್ಲಿ ನನ್ನ ಭಾವ ತೀರಿಕೊಂಡರು. ಅವರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು. ಈಗ ನನ್ನ ಅಕ್ಕ ಸಿಂಗಲ್‌ ಪೇರೆಂಟ್.‌ ಅಕ್ಕ ಸದ್ಯ ತುಂಬಾ ಸ್ಟ್ರಾಂಗ್‌ ಆಗಿ ಇದ್ದಾರೆ. ನಾನು ಸಹ ಗಟ್ಟಿಯಾಗಿ ಇದ್ದೀನಿ" ಎಂದು ಹೇಳುತ್ತಾ ಕಣ್ಣೀರಿಟ್ಟರು.

ಇದನ್ನೂ ಓದಿ-  BBK 10 : 8 ವರ್ಷಗಳ ಪ್ರೀತಿ... ಲವ್‌ ಬ್ರೇಕಪ್‌ ಕತೆ ಹೇಳಿದ ಕಾರ್ತಿಕ್!

ಸಿರಿ ಇಷ್ಟೇಲ್ಲಾ ನೋವು ಮನಸಿನ್ನಲ್ಲಿ ಇದ್ದರೂ ಸದಾ ನಗುನಗುತ್ತಾ ಇರುತ್ತಾರೆ. ಬಿಗ್‌ಬಾಸ್‌ ಮನೆಯಲ್ಲಿ ಎಲ್ಲಾರ ಜೊತೆ ಹೊಂದಿಕೊಳ್ಳುತ್ತಾ, ಚೆನ್ನಾಗಿ ಆಟ ಆಡುತ್ತಾ ಇದ್ದಾರೆ. ಈಕೆ ಇನ್ನಷ್ಟೂ ಚೆನ್ನಾಗಿ ಆಟವಾಡಿ ಬಿಗ್‌ಬಾಸ್‌ನಲ್ಲಿ ಗೆದ್ದು ಬರಲಿ. ಅವರಿಗೆ ಅವರಿಷ್ಟದಂತೆ ಬಾಳಸಂಗಾತಿ ಸಿಗಲಿ ಎಂದು ಆಶಿಸೋಣ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Read More