Home> Entertainment
Advertisement

ಬಿಗ್‌ ಬಾಸ್‌ನಲ್ಲಿ ಗೆದ್ದು, ಸಂಭ್ರಮಿಸಿದ್ದ ರೈತನ ಮಗ ಪಲ್ಲವಿ ಪ್ರಶಾಂತ್‌ ಬಂಧನ..!?

Pallavi Prashanth arrested : ಬಿಗ್ ಬಾಸ್ ಸೀಸನ್ 7 ತೆಲುಗು ವಿನ್ನರ್ ಪಲ್ಲವಿ ಪ್ರಶಾಂತ್ ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆಗ ನ್ಯಾಯಾಧೀಶರು 14 ದಿನಗಳ ಕಾಲ ರಿಮಾಂಡ್ ನೀಡಲಾಗುತ್ತಿದೆ ಎಂದರು.

ಬಿಗ್‌ ಬಾಸ್‌ನಲ್ಲಿ ಗೆದ್ದು, ಸಂಭ್ರಮಿಸಿದ್ದ ರೈತನ ಮಗ ಪಲ್ಲವಿ ಪ್ರಶಾಂತ್‌ ಬಂಧನ..!?

Pallavi Prashanth : ಬಿಗ್ ಬಾಸ್ ತೆಲುಗು ಸೀಸನ್ 7 ರ ಅಂತಿಮ ದಿನದಂದು ನಡೆದ ಗಲಾಟೆಯಲ್ಲಿ ಪಲ್ಲವಿ ಪ್ರಶಾಂತ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಬಿಗ್ ಬಾಸ್ ವಿನ್ನರ್ ಪಲ್ಲವಿ ಪ್ರಶಾಂತ್ ಅವರನ್ನು ಗಜ್ವೇಲ್ ಮಂಡಲ್ ಕೋಲ್ಗೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ. ಪ್ರಶಾಂತ್ ಜೊತೆ ಅವರ ಸಹೋದರನನ್ನೂ ಸಹ ಬಂಧಿಸಲಾಗಿದೆ.

ಜುಬ್ಲಿ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ಸುಮಾರು ಆರು ಗಂಟೆಗಳ ಕಾಲ ಇಬ್ಬರನ್ನೂ ವಿಚಾರಣೆ ನಡೆಸಲಾಗಿದೆ. ಬುಧವಾರ ರಾತ್ರಿ ಪಲ್ಲವಿ ಪ್ರಶಾಂತ್ ಮತ್ತು ಆತನ ಸಹೋದರನನ್ನು ನ್ಯಾಯಾಧೀಶರ ಮಂದೆ ಹಾಜರುಪಡಿಸಲಾಯಿತು. ಪ್ರಕರಣದ ವಿಚಾರಣೆ ಬಳಿಕ ಇಬ್ಬರನ್ನೂ 14 ದಿನಗಳ ಕಾಲ ರಿಮಾಂಡ್‌ಗೆ ನೀಡಲಾಗಿದೆ. ಇದರೊಂದಿಗೆ ಪ್ರಶಾಂತ್ ಮತ್ತು ಆತನ ಸಹೋದರನನ್ನು ಚಂಚಲಗುಡ ಜೈಲಿಗೆ ಸ್ಥಳಾಂತರಿಸಲಾಯಿತು.

ಇದನ್ನೂ ಓದಿ:BBK 10: "ನನಗೆ ತುಕಾಲಿ ಸಂತು ಅಸಹ್ಯವಾಗಿ ಕಾಣಿಸಿದರು": ಬೇಸರ ವ್ಯಕ್ತಪಡಿಸಿದ ವರ್ತೂರ್‌ ಸಂತೋಷ್‌!

ಘಟನೆ ಹಿನ್ನೆಲೆ : ಈ ಬಗ್ಗೆ ಎಸಿಪಿ ಹರಿಪ್ರಸಾದ್ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ. ಬಿಗ್ ಬಾಸ್ ಸೀಸನ್ 7 ರ ಫೈನಲ್‌ನಲ್ಲಿ ಪಲ್ಲವಿ ಪ್ರಶಾಂತ್ ವಿನ್ನರ್ ಎಂದು ಘೋಷಿಸಲಾಗಿದೆ. ಆ ಸಂದರ್ಭದಲ್ಲಿ ರಸ್ತೆ ಸಂಖ್ಯೆ 5ಕ್ಕೆ ಜನಸಾಗರವೇ ಬಂದಿತ್ತು. ಬಳಿಕ ಜಗಳ ನಡೆಯುವ ಸಾಧ್ಯತೆ ಇದ್ದ ಕಾರಣ ಸಂಘಟಕರು ಬೇರೆ ಗೇಟ್ ಮೂಲಕ ಹೊರಗೆ ಕಳುಹಿಸಿದ್ದಾರೆ.

ಆದರೆ ಅವರ ಮಾತಿಗೆ ಕಿವಿಗೊಡದೆ ರಸ್ತೆ ಸಂಖ್ಯೆ 5ರಿಂದ ಅನ್ನಪೂರ್ಣ ಸ್ಟುಡಿಯೋ ಪ್ರದೇಶಕ್ಕೆ ಪಲ್ಲವಿ ಪ್ರಶಾಂತ್‌ ಬಂದಿದ್ದಾರೆ. ಆಗ ಪೊಲೀಸರು ಆ ಕಡೆ ಹೋಗಬೇಡಿ ಎಂದು ಹೇಳಿದರು. ಅಹಿತರಕರ ಘಟನೆ ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು. ಆದರೆ ಅವರು ಕಿವಿಗೊಡದೆ ಪೊಲೀಸರೊಂದಿಗೆ ವಾಗ್ವಾದಕ್ಕೆ ಇಳಿದಿದ್ದಾರೆ. ಆಗ ಜೊತೆಗಿದ್ದವರು ಅಲ್ಲಿದ್ದ ಎರಡು ಪೊಲೀಸ್ ವಾಹನಗಳಿಗೆ ಹಾನಿ ಉಂಟುಮಾಡಿದ್ದಾರೆ. ಎಂದು ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ. 

ಇದನ್ನೂ ಓದಿ:

ಅಪರಾಧ ಸಂಖ್ಯೆ 780/22(3) ಅಡಿಯಲ್ಲಿ ಕಲಂ 147, 148 290, 353, 427 ಜೊತೆಗೆ 149 ಐಪಿಸಿ, ಕಲಂ 3 ಪಿಡಿಪಿ ಕಾಯ್ದೆ ಸೆಕ್ಷನ್‌ಗಳ ಅಡಿಯಲ್ಲಿ ಜುಬಿಲಿ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ಸುಮೋಟೋದಲ್ಲಿ ಪ್ರಕರಣ ದಾಖಲಿಸಿದ್ದೇವೆ. 19 ನೇ ದಿನ, ನಾವು ಅಪರಾಧಿಗಳಾದ ಸಾಯಿ ಕಿರಣ್ ಮತ್ತು ಅಂಕೆರಾವ್ಪಲ್ಲಿ ರಾಜು ಅವರನ್ನು ಬಂಧಿಸಿದ್ದೇವೆ. ಅಲ್ಲದೆ, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ನಂತರ ಇನ್ನೂ ಕೆಲವರನ್ನು ಬಂಧಿಸುವ ಸಾಧ್ಯತೆ ಇದೆ. ಸದ್ಯ ಈ ಪ್ರಕರಣದಲ್ಲಿ ನಾಲ್ವರನ್ನು ಮಾತ್ರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸ್ ಕಾರುಗಳ ಮೇಲೂ ದಾಳಿ ನಡೆದಿದೆ, ಆರ್‌ಟಿಸಿ ಬಸ್‌ಗಳ ಕನ್ನಡಿಗಳನ್ನು ಧ್ವಂಸಗೊಳಿಸಿದ್ದು, ಪೊಲೀಸರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಪಲ್ಲವಿ ಪ್ರಶಾಂತ್ ಮಾತು ಕೇಳದೆ ವಾಪಸ್ ಬಂದಿದ್ದರಿಂದ ಜಗಳ ದೊಡ್ಡದಾಗಿದ್ದು, ಹಾಗಾಗಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More