Home> Entertainment
Advertisement

ಪತಿಯಿಂದ ವಿಚ್ಛೇದನ ಪಡೆದ ನಿರೂಪಕಿ ಚೈತ್ರಾ ವಾಸುದೇವನ್..ಕಾಮೆಂಟ್‌ ಸೆಕ್ಷನ್‌ ಆಫ್‌ ಮಾಡಿದ್ದೇಕೆ..?

Chaitra Vasudevan announces divorce : ಬಿಗ್‌ಬಾಸ್ ಖ್ಯಾತಿಯ ಚೈತ್ರಾ ವಾಸುದೇವನ್ ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದಾರೆ. ನಿರೂಪಕಿ ಪತಿ ಸತ್ಯ ನಾಯ್ಡುಗೆ ಡಿವೋರ್ಸ್‌ ನೀಡಿರುವ ವಿಚಾರವನ್ನು ಸೋಷಿಯಲ್‌ ಮಿಡಿಯಾದಲ್ಲಿ ಬಹಿರಂಗ ಪಡಿಸಿದ್ದಾರೆ.  

ಪತಿಯಿಂದ ವಿಚ್ಛೇದನ ಪಡೆದ ನಿರೂಪಕಿ ಚೈತ್ರಾ ವಾಸುದೇವನ್..ಕಾಮೆಂಟ್‌ ಸೆಕ್ಷನ್‌ ಆಫ್‌ ಮಾಡಿದ್ದೇಕೆ..?

Chaitra Vasudevan : ಬಹಳ ಹಿಂದೆಯೇ ಮದುವೆ ಆಗಿದ್ದ ಚೈತ್ರಾ, ಸತ್ಯ ನಾಯ್ಡು ಇವೆಂಟ್ ಮ್ಯಾನೇಜ್‌ಮೆಂಟ್ ಸಂಸ್ಥೆ ನಡೆಸುತ್ತಿದ್ದರು. ಜೊತೆಗೆ ಚೈತ್ರಾ ವಾಸುದೇವನ್ ನಿರೂಪಕಿಯಾಗಿಯೂ ಎಲ್ಲರ ಗಮನ ಸೆಳೆದಿದ್ದಾರೆ. ಇದೀಗ ಚೈತ್ರಾ ಪತಿ ಸತ್ಯ ನಾಯ್ಡುಗೆ ಡಿವೋರ್ಸ್ ನೀಡಿರುವ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಘೋಷಿಸಿದ್ದಾರೆ.

ಸತ್ಯ ಮತ್ತು ಚೈತ್ರಾ ಇಬ್ಬರು ಖಾಸಗಿ ಸಮಾರಂಭವೊಂದರಲ್ಲಿ ಭೇಟಿಯಾಗಿದ್ದರು. ಬಳಿಕ ಚೈತ್ರಾ ಪೋಷಕರನ್ನು ಒಪ್ಪಿಸಿ 2017ರ ನವೆಂಬರ್‌ನಲ್ಲಿ ಇಬ್ಬರ ಮದುವೆಯಾಗಿದ್ದರು. ಇನ್ನು ಚೈತ್ರಾ ಈವೆಂಟ್ ಮ್ಯಾನೇಜ್‌ಮೆಂಟ್ ಸಂಸ್ಥೆಯ ಜೊತೆ ಜೊತೆಗೆ ಜಾಹೀರಾತು, ಕ್ರೀಡಾ ನಿರೂಪಣೆ, ಫೋಟೊಶೂಟ್ ನಿರೂಪಣೆಯನ್ನು ಮಾಡುತ್ತಿದ್ದಾರೆ. ಇದಕ್ಕೆ ಅವರ ಕುಟುಂಬದಿಂದ ಸಹಕಾರವೂ ಇದೆ ಎಂದು ನಿರೂಪಕಿ ಹೇಳಿಕೊಂಡಿದ್ದರು. 

ಇದನ್ನೂ ಓದಿ-ತಮನ್ನಾ ಕೈಯಲ್ಲಿರೋದು ವಜ್ರವೇ ಅಲ್ಲ, ಇದೊಂದು 'ಬಾಟಲ್ ಓಪನರ್' ! ಸತ್ಯ ಬಿಚ್ಚಿಟ್ಟ ಮಿಲ್ಕಿ ಬ್ಯೂಟಿ

ಇನ್ನು ಇತ್ತೀಚೆಗೆ ಸೆಲೆಬ್ರಿಟಿಗಳು ಡಿವೋರ್ಸ್ ವಿಚಾರಗಳನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬಹಿರಂಗ ಪಡಿಸುತ್ತಿದ್ದಾರೆ. ಇದೀಗ ನಿರೂಪಕಿ ಚೈತ್ರಾ ವಾಸುದೇವನ್ ಸಹ ಅದನ್ನೇ ಮಾಡಿದ್ದಾರೆ. "ಎಲ್ಲರಿಗೂ ನಮಸ್ಕಾರ. ಹಲವಾರು ತಿಂಗಳುಗಳಿಂದ ಸಾಕಷ್ಟು ಯೋಚಿಸಿದ ನಂತರ ನಾನು ನನ್ನ ವಿಚ್ಛೇದನದ ಬಗ್ಗೆ ನಿಮಗೆ ಹೇಳಲು ಧೈರ್ಯವನ್ನು ತೆಗೆದುಕೊಂಡಿದ್ದೇನೆ. ಸತ್ಯ ಮತ್ತು ನಾನು ಬೇರೆಯಾಗಿದ್ದೇವೆ. ನಿಂದನೆ /ದ್ವೇಷ ಬೇಡ ಎಂದು ನಿಮ್ಮಲ್ಲಿ ವಿನಂತಿಸಿಕೊಳ್ಳುತೇನೆ. ನನ್ನ ಈ ಸ್ಥಿತಿಯಿಂದ ಹೊರಬರಲು ಕಷ್ಟ ಪಡುತ್ತಿದ್ದೇನೆ. ಕೆಲಸ ಮಾತ್ರ ಜೀವನದಲ್ಲಿ ಮುನ್ನಡೆಯಲು ಸಹಾಯ ಮಾಡುತ್ತದೆ. ನಾನು ಈವೆಂಟ್ ಮತ್ತು ಟಿವಿ ಉದ್ಯಮದಲ್ಲಿ 10 ವರ್ಷಗಳಿಂದ ಕೆಲಸ ಮಾಡಿದ್ದೇನೆ. ನನ್ನ ಸೇವೆಯನ್ನು ಇನ್ನುಮುಂದೆಯೂ ಮುಂದುವರಿಸಲು ಬಯಸುತ್ತೇನೆ ಮತ್ತು ನಿಮ್ಮಿಂದ ಹೆಚ್ಚಿನ ಪ್ರೀತಿ ಮತ್ತು ಬೆಂಬಲಕ್ಕಾಗಿ ಎದುರು ನೋಡುತ್ತಿದ್ದೇನೆ" ಎಂದು ಬರೆದುಕೊಂಡಿದ್ದಾರೆ.

ಸ್ವಾವಲಂಬಿಯಾಗಿ ಬುದುಕಬೇಕು ಎನ್ನುವ ಬಯಕೆಯನ್ನು ಹೊಂದಿದ್ದ ನಿರೂಪಕಿ ಚೈತ್ರಾ ಪಿಯುಸಿ ಬಳಿಕ ತಮ್ಮ ವಿದ್ಯಾಭ್ಯಾಸಕ್ಕಾಗಿ ಬಿಟ್ಟರೆ ಮತ್ಯಾವುದಕ್ಕೂ ತಂದೆ ಬಳಿ ಕೂಡ ಆಕೆ ಹಣ ಕೇಳಿರಲಿಲ್ಲವಂತೆ. ತಮ್ಮ ಈವೆಂಟ್ ಮ್ಯಾನೇಜ್‌ಮೆಂಟ್‌ನಲ್ಲಿ ಬರೀ ಶ್ರೀಮಂತರ ಮನೆ ಕಾರ್ಯಕ್ರಮಗಳನ್ನು ಮಾತ್ರ ವಲ್ಲದೇ, ಸಣ್ಣ ಬಜೆಟ್‌ ಕಾರ್ಯಕ್ರಮಗಳನ್ನು ಸಹ ಒಪ್ಪಿಕೊಳ್ಳುತ್ತಾರೆ. ಹೀಗೆ ಇನ್ನು ಮುಂದೆಯೂ ಕೂಡ ಸತ್ಯ ಅವರ ಜೊತೆ ಸೇರಿ ಈವೆಂಟ್ ಮ್ಯಾನೇಜ್‌ಮೆಂಟ್ ಮುಂದುವರೆಸುತ್ತಾರಾ ಅಥವಾ ಇಲ್ಲವಾ ಅನ್ನೋದು ಯಾರಿಗೂ ಗೊತ್ತಿಲ್ಲ.

ಇದನ್ನೂ ಓದಿ-ಕಿಡಿಗೇಡಿಗಳಿಂದ ಪ್ರಭಾಸ್ ಫೇಸ್‌ಬುಕ್ ಹ್ಯಾಕ್...ತಕ್ಷಣವೇ ಎಚ್ಚೆತ್ತುಕೊಂಡ ಡಾರ್ಲಿಂಗ್‌..! 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾ

Read More