Home> Entertainment
Advertisement

ಇದ್ಯಾವ ನ್ಯಾಯ ಗುರು...! : ಟ್ರೋಲ್‌ ಮಾಡಲು ರಶ್ಮಿಕಾ ಮಾಡಿದ ತಪ್ಪಾದ್ರು ಏನು..?

ನ್ಯಾಷುನಲ್‌ ಕ್ರಷ್‌, ಕನ್ನಡತಿ ರಶ್ಮಿಕಾ ಮಂದಣ್ಣ ಅವರಿಗೆ ಟೀಕಿಸುವ ದೊಡ್ಡ ವರ್ಗವೇ ಇದೆ. ಅವರ ಪ್ರತಿ ಹೆಜ್ಜೆಯಲ್ಲಿಯೂ ತಪ್ಪು ಕಂಡು ಹಿಡಿದು ಟ್ರೋಲ್‌ ಮಾಡುವ ಜನರೇ ಹೆಚ್ಚಾಗಿದ್ದಾರೆ. ಅವರ ಖಾಸಗಿ ವಿಚಾರದಿಂದ ಹಿಡಿದು ಪ್ರತಿಯೊಂದು ನೆಟ್ಟಿಗರ ಚರ್ಚೆಗೆ ಗುರಿಯಾಗುತ್ತಿದೆ. ಇದೀಗ ಇದರಿಂದ ಬೇಸತ್ತಿರುವ ರಶ್ಮಿಕಾ ಮೌನ ಮುರಿದು ಸುದೀರ್ಘ ಪತ್ರವೊಂದನ್ನು ಬರೆದಿದ್ದಾರೆ. ಅಷ್ಟಕ್ಕೂ ರಶ್ಮಿಕಾ ಟ್ರೋಲ್‌ಗೆ ಗುರಿಯಾಗಿದ್ದೂ ಯಾಕೆ  ಅವರ ಮೇಲೆ ಇಷ್ಟೋಂದು ದ್ವೇಷವೇಕೆ...?

ಇದ್ಯಾವ ನ್ಯಾಯ ಗುರು...! : ಟ್ರೋಲ್‌ ಮಾಡಲು ರಶ್ಮಿಕಾ ಮಾಡಿದ ತಪ್ಪಾದ್ರು ಏನು..?

ಬೆಂಗಳೂರು : ನ್ಯಾಷುನಲ್‌ ಕ್ರಷ್‌, ಕನ್ನಡತಿ ರಶ್ಮಿಕಾ ಮಂದಣ್ಣ ಅವರಿಗೆ ಟೀಕಿಸುವ ದೊಡ್ಡ ವರ್ಗವೇ ಇದೆ. ಅವರ ಪ್ರತಿ ಹೆಜ್ಜೆಯಲ್ಲಿಯೂ ತಪ್ಪು ಕಂಡು ಹಿಡಿದು ಟ್ರೋಲ್‌ ಮಾಡುವ ಜನರೇ ಹೆಚ್ಚಾಗಿದ್ದಾರೆ. ಅವರ ಖಾಸಗಿ ವಿಚಾರದಿಂದ ಹಿಡಿದು ಪ್ರತಿಯೊಂದು ನೆಟ್ಟಿಗರ ಚರ್ಚೆಗೆ ಗುರಿಯಾಗುತ್ತಿದೆ. ಇದೀಗ ಇದರಿಂದ ಬೇಸತ್ತಿರುವ ರಶ್ಮಿಕಾ ಮೌನ ಮುರಿದು ಸುದೀರ್ಘ ಪತ್ರವೊಂದನ್ನು ಬರೆದಿದ್ದಾರೆ. ಅಷ್ಟಕ್ಕೂ ರಶ್ಮಿಕಾ ಟ್ರೋಲ್‌ಗೆ ಗುರಿಯಾಗಿದ್ದೂ ಯಾಕೆ  ಅವರ ಮೇಲೆ ಇಷ್ಟೋಂದು ದ್ವೇಷವೇಕೆ...?

ಹೌದು, ಕನ್ನಡದ ಹಿಟ್‌ ಸಿನಿಮಾ ಕಿರಿಕ್‌ ಪಾರ್ಟಿಯಿಂದ ರಶ್ಮಿಕಾ ಸ್ಯಾಂಡಲ್‌ವುಡ್‌ನಲ್ಲಿ ಬಹುದೊಡ್ಡ ಪ್ರತಿಭೆಯಾಗಿ ಬೆಳೆದರು. ಮೊದಲ ಸಿನಿಮಾದಲ್ಲೇ ತಮ್ಮ ನಟನೆಯ ಮೂಲಕ ಕನ್ನಡಿಗರಿಗೆ ಸಾನ್ವಿ ಎಂದೇ ಪರಿಚಿತರಾದ. ಕಿರಿಕ್‌ ಪಾರ್ಟಿ ಯಶಸ್ಸಿನ ನಂತರ ರಶ್ಮಿಕಾಗೆ ಸ್ಯಾಂಡಲ್‌ವುಡ್‌ ಸೇರಿದಂತೆ ತೆಲುಗು ಚಿತ್ರರಂಗದಿಂದ ಸಾಕಷ್ಟು ಆಫರ್‌ಗಳು ಕೇಳಿಬಂದವು. ಈ ನಡುವೆ ನಟ ರಕ್ಷಿತ್‌ ಶೆಟ್ಟಿಯವರ ಜೊತೆ ನಿಶ್ಚರಾರ್ಥ ಕೂಡ ಮಾಡಿಕೊಂಡರು. ಹಾಗಿದ್ರೆ, ಟ್ರೋಲ್‌ಗಳಿಗೆ ಆಹಾರವಾಗಲು ರಶ್ಮಿಕಾ ಮಾಡಿದ್ದ ತಪ್ಪಾದ್ರೂ ಏನು..? 

ಇದನ್ನೂ ಓದಿ:ಮಿಲಿಯನ್ ಗಟ್ಟಲೇ ವ್ಯೂಸ್ ಪಡೆದು ಅಬ್ಬರಿಸುತ್ತಿದೆ 'ಅಬ್ಬರ' ಸಿನಿಮಾ ಟ್ರೇಲರ್..!

ಕನ್ನಡ ಭಾಷೆ ಕಷ್ಟ

ಪರಭಾಷಿಗರೂ ಕನ್ನಡ ನಾಡಿಗೆ ಬಂದು ಕನ್ನಡ ಭಾಷೆ ಕಲಿತು ಇಂದು ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ಇದರ ನಡುವೆ ರಶ್ಮಿಕಾ ಕೆಲವೊಂದು ಸಂದರ್ಶನದಲ್ಲಿ ಕನ್ನಡ ಮಾತನಾಡಲು ಕಷ್ಟ ಎಂಬ ಹೇಳಿಕೆ ನೀಡಿದ್ದರು. ಇದಕ್ಕೆ ಬಲವಾದ ಕಾರಣವೂ ಸಹ ಇತ್ತು. ಏಕೆಂದರೆ ರಶ್ಮಿಕಾ ಪಕ್ಕಾ ಕೊಡಗಿನ ಹುಡುಗಿ. ಕನ್ನಡ ಪರಿಪಕ್ವವಾಗಿ ಮಾತನಾಡಲು ಬರುವುದಿಲ್ಲ. ಅದಕ್ಕೆ ಅವರು ಕನ್ನಡ ಮಾತನಾಡಲು ಕಷ್ಟ ಎಂದಿರಬಹುದು ಅಷ್ಟೇ. ಆದ್ರೆ, ಅವರು ಕಿರಿಕ್‌ ಪಾರ್ಟಿಗಾಗಿ ಕನ್ನಡ ಕಲಿತು ಮಾತನಾಡಿದ್ದರು ಎಂಬುವುದನ್ನು ಮರೆಯುವಂತಿಲ್ಲ. 

ರಕ್ಷಿತ್‌-ರಶ್ಮಿಕಾ ಬ್ರೇಕ್‌ ಅಪ್‌

ರಿಕಿಕ್‌ ಪಾರ್ಟಿ ನಂತರ ಇಬ್ಬರಲ್ಲಿಯೂ ಪ್ರೇಮಾಂಕುರವಾಗಿತ್ತು. ಇಬ್ಬರು ಇಷ್ಟ ಪಟ್ಟು ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಅದ್ರೆ, ಕಾರಣಾಂತರದಿಂದ ರಶ್ಮಿಕಾ ಹಾಗೂ ರಕ್ಷಿತ್‌ ಶೆಟ್ಟಿ ನಡುವೆ ಬಿರುಕು ಬಿಟ್ಟು, ಇಬ್ಬರು ದೂರವಾಗಿದ್ದರು. ಇದು ಅವರ ವ್ಯಯಕ್ತಿಕ ವಿಚಾರ ಈ ವಿಚಾರದಲ್ಲಿ ಮೂರನೇ ವ್ಯಕ್ತಿ ಭಾಗಿಯಾಗುವಂತಿಲ್ಲ. ಆದ್ರೆ, ಕೆಲ ನೆಟ್ಟಿಗರು ರಕ್ಷಿತ್‌ ಶೆಟ್ಟಿಯವರಿಗೆ ರಶ್ಮಿಕಾ ಮೋಸ ಮಾಡಿದ್ರು ಅಂತ ತಮಗಿಷ್ಟ ಬಂದಂತೆ ಟ್ರೋಲ್‌ ಮಾಡುತ್ತಿದ್ದಾರೆ. ಆದ್ರೆ ಇಂದಿಗೂ ಅವರಿಬ್ಬರು ದೂರವಾಗಲು ಕಾರಣ ಏನು ಎಂಬ ನಿಜಾಂಶವನ್ನು ತಿಳಿಸಿಸಿಲ್ಲ. ಅದು ಅವರ ಮನಸ್ಸಿಗೆ ಬಿಟ್ಟ ವಿಚಾರ. ಹೀಗಿರುವಾಗ ಟ್ರೋಲ್‌ ಮಾಡುವುದು ಎಷ್ಟು ಸಮಂಜಸ..

ಇದನ್ನೂ ಓದಿ: Samantha : ನಾನಿನ್ನೂ ಸತ್ತಿಲ್ಲ, ನಾನು ಹೋರಾಟಗಾರ್ತಿ.. ಹೋರಾಡುತ್ತೇನೆ - ನಟಿ ಸಮಂತಾ

ವಿಜಯದೇವರಕೊಂಡ ಕಿಸ್‌ ಸೀನ್‌

ಈ ಘಟನೆಯಂತೂ ಇಂಟರ್‌ನೆಟ್‌ನಲ್ಲಿ ಅತೀ ಹೆಚ್ಚು ಟ್ರೋಲ್‌ಗೆ ಒಳಗಾಗಿತ್ತು. ಸಿನಿಮಾ ಅಂದ್ರೆ ಕಿಸ್‌ ಮತ್ತು ತಬ್ಬಿಕೊಳ್ಳುವ ದೃಶ್ಯಗಳು ಇದ್ದೆ ಇರುತ್ತವೆ ಇದಕ್ಕೆ ಯಾರೂ ಹೊರತಾಗಿಲ್ಲ. ಆದ್ರೆ ಈ ವಿಚಾರದಲ್ಲಿ ರಕ್ಷಿತ್‌ ಶೆಟ್ಟಿಯವರ ವಿಚಾರವನ್ನು ಎಳೆತಂದ ನೆಟ್ಟಿಗರು ಟ್ರೋಲ್‌ ಮಾಡಿದ್ದರು. ಅಲ್ಲದೆ, ವಿಜಯ್‌ ಮತ್ತು ರಶ್ಮಿಕಾ ನಡುವೆ ಇಲ್ಲ ಸಲ್ಲದ ವಿಚಾರವನ್ನು ಹುಟ್ಟಿಸಿದರು. ಆದ್ರೆ ನಿಜವಾಗಿ ಅವರಿಬ್ಬರ ನಡುವೆ ಇರುವ ಸಂಬಂಧ ಏನು ಎಂಬುದೇ ಯಾರಿಗೂ ತಿಳಿದಿಲ್ಲ. ರಶ್ಮಿಕಾ ಅದೇಷ್ಟೋ ಬಾರಿ ವಿಜಯ್‌ ಬೆಸ್ಟ್‌ ಫ್ರೇಂಡ್‌ ಅಂತ ಹೇಳಿಕೊಂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More