Home> Entertainment
Advertisement

ಸಿಂಪಲ್‌ ಸ್ಟಾರ್‌ಗೆ ಕಾಂತಾರದಲ್ಲಿ ಒಂದು ರೋಲ್‌ ಮಾಡಲು ಆಸೆ: ರಕ್ಷಿತ್‌ ಶೆಟ್ಟಿಯ ಮನದಾಳದ ಮಾತು..

Rakshith Shetty About Kantara: ನಟ ರಕ್ಷಿತ್‌ ಶೆಟ್ಟಿ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಪ್ರಚಾರದ ವೇಳೆ ಕಾಂತಾರಾ ಚಿತ್ರದಲ್ಲಿ ಒಂದು ಪಾರ್ತ ಮಾಡಲು ಬಯಸಿದ್ದೇ ಎಂದು ಹೇಳಿಕೊಂಡಿದ್ದಾರೆ. ಇದರ ಕಂಪ್ಲೀಟ್‌ ಸ್ಟೋರಿ ಇಲ್ಲಿದೆ.

ಸಿಂಪಲ್‌ ಸ್ಟಾರ್‌ಗೆ ಕಾಂತಾರದಲ್ಲಿ ಒಂದು ರೋಲ್‌ ಮಾಡಲು ಆಸೆ: ರಕ್ಷಿತ್‌ ಶೆಟ್ಟಿಯ ಮನದಾಳದ ಮಾತು..

Rakshith Shetty Wanted To Play A Role In Kantara: ಸ್ಯಾಂಡಲ್‌ವುಡ್‌ ಸಿಂಪಲ್‌ ಸ್ಟಾರ್‌ ನಟ ರಕ್ಷಿತ್ ಶೆಟ್ಟಿ ತಮ್ಮ ಪಾತ್ರಗಳನ್ನ ಜೀವಿಸುತ್ತಾ, ಆ ಪಾತ್ರವಾಗಿಯೇ ಬದಲಾಗುತ್ತಾರೆ. ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ಮನು ಪಾತ್ರ ಇವರನ್ನ ಸಿಕ್ಕಾಪಟ್ಟೆ ಕಾಡಿದ್ದು, ದಿನವಿಡಿ ಕಾಡುತ್ತಲೇ ಇದೆ. ಆ ಕಾಡುವಿಕೆಯ ಪರಿಣಾಮ ಸಪ್ತ ಸಾಗರದಾಚೆ ಎಲ್ಲೋ ಜನರ ಮನದಲ್ಲಿ ಹೊಸ ಕಥೆಯನ್ನ ಕಟ್ಟಿಕೊಟ್ಟಿದೆ.ಈ ಚಿತ್ರವನ್ನ ಎರಡು ಭಾಗದಲ್ಲಿ ತರೋ ವಿಚಾರ ಡೈರೆಕ್ಟರ್ ಹೇಮಂತ್ ರಾವ್ ಹಾಗೂ ರಕ್ಷಿತ್ ಶೆಟ್ಟಿ ಇಬ್ಬರಿಗೆ ಮಾತ್ರ ಗೊತ್ತಿತ್ತು. ಹಾಗೆ ಮನು ಮತ್ತು ಪ್ರಿಯಾ ಲವ್ ಸ್ಟೋರಿ ಮೊದಲ ಭಾಗದಲ್ಲಿ ಬಂದಿದ್ದು, ಕನ್ನಡಿಗರು ಇದನ್ನು ನೋಡಿ ಬಲು ಇಷ್ಟಪಟ್ಟರು.

ಸಪ್ತ ಸಾಗರದಾಚೆ ಎಲ್ಲೋ ಮೊದಲ ಭಾಗದಲ್ಲಿ ಮನು ಮತ್ತು ಪ್ರಿಯಾ ದೂರ ಆಗಿದ್ದು, ಎರಡನೇ ಭಾಗದಲ್ಲಿ ಸಿಗ್ತಾರಾ ಅನ್ನುವ ಕುತೂಹಲ ಹೆಚ್ಚಿದ್ದು, ಇದರ ಮಧ್ಯೆ ಚೈತ್ರಾ ಆಚಾರ್ ಪಾತ್ರವೂ ಜನರನ್ನ ಈಗಲೇ ಸೆಳೆಯುತ್ತಿದೆ. ಹೀಗೆ ಸಿನಿಮಾ ಪ್ರಚಾರದ ವೇಳೆ ರಕ್ಷಿತ್ ಶೆಟ್ಟಿ ಒಂದು ಮಾತು ಕೂಡ ಮಾತನಬಾಡಿದ್ದು, ನನ್ನ ಫೇವರಿಟ್ ರೋಲ್‌ಗಳಲ್ಲಿ ಸದ್ಯ ಮನು ಪಾತ್ರ ತುಂಬಾನೆ ಫೇವರಿಟ್ ಆಗಿದೆ. ಈ ಪಾತ್ರವಲ್ಲದೇ ಮುಂದಿನ ‘ರಿಚಿ’ ಚಿತ್ರದ ಪಾತ್ರವೂ ಫೇವರಿಟ್ ಆಗಿದೆ ಎಂದು ರಕ್ಷಿತ್ ಹೇಳಿಕೊಳ್ತಾರೆ.

ಇದನ್ನು ಓದಿ: ಇಂದು ಸಪ್ತಪದಿ ತುಳಿಯುತ್ತಿರುವ ಮ್ಯೂಸಕ್‌ ಡೈರೆಕ್ಟರ್‌ ವಾಸುಕಿ ವೈಭವ್:‌ ವಧು ಯಾರು ಗೊತ್ತೇ?

ಅದರ ಬೆನ್ನಲ್ಲಿಯೇ ನಟ ರಕ್ಷಿತ್‌ ಶೆಟ್ಟಿಗೆ ಒಂದು ಪ್ರಶ್ನೆ ಕೂಡ ಬರುತ್ತಿದ್ದು, ನಿಮಗೆ ಇಷ್ಟವಾದ ಪಾತ್ರಗಳೂ ಇದ್ದು, ಆದರೆ ಅದನ್ನ ನೀವು ಮಾಡಲು ಆಗಲಿಲ್ಲ ಅನ್ನುವ ಪಾತ್ರ ಯಾವುದು ಅನ್ನೋದೇ ಆ ಪ್ರಶ್ನೆ ಆಗಿದೆ. ಅದಕ್ಕೂ ಉತ್ತರ ಕೊಡುವ ರಕ್ಷಿತ್ ಶೆಟ್ಟಿ, ಕಾಂತಾರ ಚಿತ್ರದ ಪಾತ್ರ ಅಂತಲೇ ಹೇಳ್ತಾರೆ.ನನ್ನೂರಿನ ಕಥೆಯ ಚಿತ್ರ ಇದಾಗಿದ್ದು, ಆ ಒಂದು ಅದ್ಭುತ ಪಾತ್ರಕ್ಕೆ ತಾವು ಜೀವ ತುಂಬಲಿಲ್ಲ ಅನ್ನುವ ಸಣ್ಣ ಬೇಸರವೂ ಇದೆ. ಈ ಸಿನಿಮಾದಲ್ಲಿ ಆ ಒಂದು ಪಾತ್ರವನ್ನ ನಾನು ಮಾಡೇಕಿತ್ತು ಅನಿಸುತ್ತದೆ. 

ಅಷ್ಟು ಒಳ್ಳೆಯ ಪಾತ್ರ ಅದಾಗಿದೆ ಅಂತಲೇ ಒನ್ ಲೈನ್‌ನಲ್ಲಿ ರಕ್ಷಿತ್ ಹೇಳಿಕೊಂಡಿದ್ದಾರೆ. ಇದಲ್ಲದೇ ರಕ್ಷಿತ್ ಶೆಟ್ಟಿ ಅಭಿನಯದ ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ ನವೆಂಬರ್-17 ರಂದು ಎಲ್ಲೆಡೆ ರಿಲೀಸ್ ಆಗುತ್ತಿದ್ದು, ಪೇಡ್ ಪ್ರಿಮಿಯರ್ ಕೂಡ ಪ್ಲಾನ್ ಆಗಿದೆ. ಒಟ್ಟಾರೆ ರಕ್ಷಿತ್ ಶೆಟ್ರ ಈ ಸಿನಿಮಾ ಕನ್ನಡದ ಮತ್ತೊಂದು ಭರವಸೆಯ ಚಿತ್ರ ಆಗಿದೆ ಅಂತಲೇ ಹೇಳಬಹುದು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Read More