Home> Entertainment
Advertisement

ನಾಲ್ಕನೇ ದಿನಕ್ಕೆ ನಟ ದರ್ಶನ್ & ಗ್ಯಾಂಗ್ ಜೈಲುವಾಸ: ನಿನ್ನೆ ದರ್ಶನ್, ಇಂದು ಪವಿತ್ರಾ ಗೌಡ ಪೋಷಕರು ಭೇಟಿ, ಸಾಂತ್ವನ!

Renukaswamy Murder Case: ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ದರ್ಶನ್ಗೆ ನಿನ್ನೆ ಮಡದಿ ಮಗನ ಸಾಂತ್ವನ ಇಂದು ಪವಿತ್ರಾ ಗೌಡಗೆ ಇಂದು ಮಗಳು ಪೋಷಕರ ಸಾಂತ್ವನ ಸಿಕ್ಕಿದ್ದು, ಕೊಂಚ ರಿಲ್ಯಾಕ್ಸ್ ಆಗಿದ್ದಾರೆ. ಆದ್ರೆ ನಟ ದರ್ಶನ್  ಕಾಣಲು ಜೈಲಿನ ಬಳಿ ಬಂದ ಅಭಿಮಾನಿಗಳಿಗೆ ನಿರಾಸೆ ಆಗಿದೆ.ಅಷ್ಟಕ್ಕೂ ನಟ ದರ್ಶನ್ ಅಂಡ ಗ್ಯಾಂಗ್ನ ನಾಲ್ಕನೇ ದಿನದ ಜೈಲಿನ ಅಪ್ಡೇಟ್ ಇಲ್ಲಿದೆ ನೋಡಿ.......

 ನಾಲ್ಕನೇ ದಿನಕ್ಕೆ ನಟ ದರ್ಶನ್ & ಗ್ಯಾಂಗ್ ಜೈಲುವಾಸ: ನಿನ್ನೆ ದರ್ಶನ್, ಇಂದು ಪವಿತ್ರಾ ಗೌಡ ಪೋಷಕರು ಭೇಟಿ, ಸಾಂತ್ವನ!

Actor Darshan & Gang jailed: ಹೌದು ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಪರಪ್ಪನ ಅಗ್ರಹಾರ ಜೈಲಿನ ಕಂಬಿ ಕೌಂಟ್ ಮಾಡುತ್ತಿರುವ ನಟ ದರ್ಶನ್ ಮತ್ತು ಪವಿತ್ರಾ ಗೌಡ ಮನೆ ಮಂದಿ ಭೇಟಿಯಿಂದ ಕೊಂಚ ರಿಲ್ಯಾಕ್ಸ್ ಆಗಿದ್ದಾರೆ. ಜೈಲಿನಲ್ಲಿ ಸಾಮಾನ್ಯ ಖೈದಿಯಂತೆ ದಿನ ದೂಡಲು ದರ್ಶನ್ ದುಗುಡಪಡುತ್ತಿದ್ದರೆ, ಅತ್ತ ಪವಿತ್ರಾ ಕೂಡ ಪರದಾಟ ನಡೆಸಿದ್ದರು. ನಿನ್ನೆ ಪತ್ನಿ ವಿಜಯಲಕ್ಷ್ಮಿ ಮತ್ತು ಮಗ ಭೇಟಿ ದರ್ಶನ್ ಭೇಟಿಗೆ ಬೇಸರಗೊಂಡಿದ ಪವಿತ್ರಾ ನನ್ನ ಭೇಟಿಗೆ ಯಾಕೆ ಬರಲಿಲ್ಲ ಎಂದು ಪೋನ್ ನಲ್ಲಿ ಪೋಷಕರಿಗೆ ಅವಾಜ್ ಹಾಕಿದ್ದಳು. ಆದ್ರೆ ಇಂದು ತನ್ನ ಭೇಟಿಗೆ ಬಂದ ಮಗಳು ಕಂಡು ಕಣ್ಣೀರು ಹಾಕಿದ್ದಾರೆ. ಇದೇ ವೇಳೆ ಪವಿತ್ರಾ ಗೌಡಗೆ ಪೋಷಕರು ಬಟ್ಟೆ ಮೇಕಪ್ ಕಿಟ್ ತಂದು ಕೊಟ್ಟಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ-ವಿಚಿತ್ರ ಕಾಯಿಲೆಯಿಂದ ಬಳಲುತ್ತಿರುವ ಸ್ವೀಟಿ.. ಅನುಷ್ಕಾ ಶೆಟ್ಟಿಯನ್ನು ಕಾಡುತ್ತಿರುವ ಸಮಸ್ಯೆ ಇದು!

ಇನ್ನೂ ನಟ ದರ್ಶನ್ ನೋಡಲು ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಪರಪ್ಪನ ಅಗ್ರಹಾರ ಜೈಲಿನ ಬಳಿ ಆಗಮಿಸುತ್ತಿದ್ದು, ಭೇಟಿಗೆ ಅವಕಾಶ ಸಿಗದೇ ನಿರಾಸೆಗೊಂಡು ವಾಪಸ್ ಆಗಿದ್ದಾರೆ. ಅದ್ರಲ್ಲು ಗುಲ್ಬರ್ಗಾದಿಂದ ತ್ರಿ ವೀಲರ್ ಗಾಡಿಯಲ್ಲಿ ವಿಶೇಷ ಚೇತನ ಪರಪ್ಪನ ಅಗ್ರಹಾರ ಬಳಿ ಆಗಮಿಸಿ ದರ್ಶನ್ ಭೇಟಿಗೆ ಯತ್ನಿಸಿದ್ದಾರೆ. ಆದ್ರೆ ಕುಟುಂಬದವರು ಹೊರತುಪಡಿಸಿ ಯಾರ ಭೇಟಿಗೆ ನಟ ದರ್ಶನ್ ಒಪ್ಪದ ಹಿನ್ನೆಲೆ ಜೈಲಿನ ಸಿಬ್ಬಂದಿ ವಾಪಸ್ ಕಳುಹಿಸಿದ್ದಾರೆ. ಗುಲ್ಬರ್ಗಾದ ವಿಶೇಷ ಚೇತನ ಸೂರ್ಯಕಾಂತ್ ನಟ ದರ್ಶನ್ ಹುಟ್ಟು ಹಬ್ಬ ಸೇರಿದಂತೆ ಅನೇಕ ಸಲ ಭೇಟಿಯಾಗಿದ್ದು, ಆರ್ಥಿಕವಾಗಿ ನೆರವು ನೀಡಿದ್ದರು. ತಪ್ಪು ಮಾಡದ ಮನುಷ್ಯ ಯಾರೂ ಇಲ್ಲ. ರೇಣುಕಾಸ್ವಾಮಿ ಮಾಡಿದ್ದು, ತಪ್ಪು. ನಾವು ನಟ ದರ್ಶನ್ ಅಪ್ಪಟ ಅಭಿಮಾನಿಗಳು. ಸದಾ ಅವರ ಜೊತೆ ಇರುತ್ತೆವೆ. ಅವ್ರು ಆದಷ್ಟು ಬೇಗ ಜೈಲಿನಿಂದ ಹೊರಬರಲಿದ್ದಾರೆ ಎಂದು ಆಶಾ ಭಾವನೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ-Shatabhisha Movie : ಶತಭಿಷ ಚಿತ್ರದ ಟ್ರೈಲರ್ ಬಿಡುಗಡೆ

ಅಂದಹಾಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ಅಂಡ್ ಗ್ಯಾಂಗ್ ಭೇಟಿಗಾಗಿ ಕುಟುಂಬದವರು, ಆಪ್ತ ಸ್ನೇಹಿತರು ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಜೈಲಿನ ಬಳಿ ಬರುವ ಸಾಧ್ಯತೆ ಇರುವುದರಿಂದ ಡಿ ಗ್ಯಾಂಗ್ ಜೈಲಿನಿಂದ ಬಿಡುಗಡೆ ಆಗುವವರೆಗೆ ನಿತ್ಯ ಹೆಚ್ಚುವರಿಯಾಗಿ ಒಂದು ಸಿ ಆರ್ ತುಕಡಿ, ಓರ್ವ ಪಿಎಸ್ಐ ಇಬ್ಬರು ಸಿಬ್ಬಂದಿ ನಿಯೋಜನೆ ಮಾಡಿದ್ದು, ಅದ್ಯಾವಾಗ ಡಿ ಗ್ಯಾಂಗ್ ಗೆ ಬೇಲ್ ಸಿಗುತ್ತೆ ಅದ್ಯಾವಾಗ ಬಿಡುಗಡೆ ಆಗುತ್ತೆ ಎಂಬುದನ್ನು ಕಾದುನೋಡಬೇಕಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Read More