ನವದೆಹಲಿ: ಗಾಯತ್ರಿ ಮಂತ್ರವನ್ನು ಪ್ರಮುಖ ಮಂತ್ರವೆಂದು ಪರಿಗಣಿಸಲಾಗಿದೆ. ಈ ಮಂತ್ರವನ್ನು ಜಪಿಸುವುದರ ಮೂಲಕ ಮತ್ತು ಅದನ್ನು ಅರ್ಥಮಾಡಿಕೊಳ್ಳುವ ಮೂಲಕ ಈಶ್ವರನ ಕೃಪೆಗೆ ಪಾತ್ರರಾಗುತ್ತಾರೆ ಎಂದು ನಂಬಲಾಗಿದೆ. ಇದನ್ನು ಶ್ರೀ ಗಾಯತ್ರಿ ದೇವಿಯ ಸ್ತ್ರೀ ರೂಪದಲ್ಲಿಯೂ ಕೂಡ ಪೂಜಿಸಲಾಗುತ್ತದೆ. ಈ ಮಂತ್ರದಲ್ಲಿ ಸಾವಿತ್ರಿ ದೇವಿಯನ್ನು ಕೂಡ ಆದಾಧಿಸಲಾಗುತ್ತದೆ, ಆದ್ದರಿಂದ ಇದನ್ನು ಸಾವಿತ್ರಿ ಎಂದೂ ಕರೆಯುತ್ತಾರೆ.
ಈ ಮಂತ್ರ ಹಲವು ಚಮತ್ಕಾರಗಳಿಂದ ಕೂಡಿದೆ. ಈ ಮಂತ್ರ ಜಪಿಸುವುದರಿಂದ ಒಟ್ಟು 7 ರೀತಿಯ ಲಾಭಗಳು ಉಂಟಾಗುತ್ತವೆ.
ಗಾಯತ್ರಿ ಮಂತ್ರ ಹಾಗೂ ಅದರ ಅರ್ಥ
ॐ भूर् भुवः स्वः.
तत् सवितुर्वरेण्यं.
भर्गो देवस्य धीमहि
धियो यो नः प्रचोदयात् ॥
ಅರ್ಥ: ಪ್ರಾಣಸ್ವರೂಪ, ದುಃಖನಾಶಕ, ಸುಖಸ್ವರೂಪ, ಶ್ರೇಷ್ಠ, ತೇಜಸ್ವಿ, ಪಾಪನಾಶಕ, ದೇವಸ್ವರೂಪ ಆ ಪರಮಾತ್ಮನಿಗೆ ನಾವು ನಮ್ಮ ಅಂತರಾತ್ಮದಲ್ಲಿ ಧರಿಸುತ್ತೇವೆ. ಆ ಪರಮಾತ್ಮ ತಮ್ಮ ಬುದ್ದಿಯನ್ನು ಸನ್ಮಾರ್ಗದೆಡೆಗೆ ಹೋಗಲು ಪ್ರೇರೆಪಿಸಲಿ.
ಮಂತ್ರ ಜಪಿಸುವ ಸರಿಯಾದ ಸಮಯ
- ಗಾಯತ್ರಿ ಮಂತ್ರ ಜಪಿಸುವ ಮೊದಲ ಸೂಕ್ತ ಸಮಯ ಬೆಳಗಿನ ಜಾವ. ಸೂರ್ಯೋದಯಕ್ಕೂ ಸ್ವಲ್ಪ ಹೊತ್ತು ಮೊದಲು ಈ ಮಂತ್ರವನ್ನು ಜಪಿಸಲು ಆರಂಭಿಸಿ, ಸೂರ್ಯೋದಯದ ನಂತರದವರೆಗೆ ಜಪಿಸಬೇಕು.
- ಮಂತ್ರ ಜಪಿಸಲು ಎರಡನೇ ಅತ್ಯುತ್ತಮ ಸಮಯ ಎಂದರೆ ಮಧ್ಯಾಹ್ನದ ಸಮಯ. ಮಧ್ಯಾಹ್ನ ಕೂಡ ಈ ಮಂತ್ರವನ್ನು ಜಪಿಸಲಾಗುತ್ತದೆ.
- ಮೂರನೇ ಅತ್ಯುತ್ತಮ ಸಮಯ ಅಂದರೆ ಸಂಜೆಯ ಸಮಯ. ಸೂರ್ಯಾಸ್ತದ ಸ್ವಲ್ಪಹೊತ್ತು ಮೊದಲು ಈ ಮಂತ್ರದ ಉಚ್ಛಾರಣೆ ಆರಂಭಿಸಿ. ಸೂರ್ಯಾಸ್ತದ ನಂತರ ಸ್ವಲ್ಪ ಹೊತ್ತು ಮಂತ್ರವನ್ನು ಜಪಿಸಬೇಕು.
- ಈ ಮೂರು ಅವಧಿಗಳನ್ನು ಹೊರತುಪಡಿಸಿ ಒಂದು ವೇಳೆ ಮಂತ್ರವನ್ನು ಪಠಿಸಬೇಕಾದರೆ, ಮೌನವಾಗಿದ್ದು ಹಾಗೂ ಮಾನಸಿಕ ರೂಪದಲ್ಲಿ ಮಂತ್ರವನ್ನು ಪಠಿಸಬೇಕು. ಏರು ಧ್ವನಿಯಲ್ಲಿ ಮಂತ್ರವನ್ನು ಪಠಿಸಬಾರದು.