Home> Crime
Advertisement

ವೃದ್ಧೆ ಹತ್ಯೆಗೈದು ಚಿನ್ನಾಭರಣ ದೋಚಿದ ಖದೀಮರು..!

ರಾಜಧಾನಿಯ ಮಹಾಲಕ್ಷ್ಮಿ ಲೇಔಟ್ ಠಾಣೆಯ ನೂರು ಮೀಟರ್ ದೂರದಲ್ಲೇ ವಾಸಿಸ್ತಿದ್ದ 82 ವರ್ಷದ ವೃದ್ದೆ ಕಮಲಮ್ಮ ಎಂಬಾಕೆಯನ್ನ ಕೊಲೆ ಮಾಡಿ ರಾಬರಿ ಮಾಡಲಾಗಿದೆ. ಮನೆಗೆ ನುಗ್ಗಿದ್ದ ಆರೋಪಿಗಳು ಕಮಲಮ್ಮರ ಬಾಯಿಗೆ ಟೇಪ್ ಹಾಕಿ, ಕೈಕಾಲು ಕಟ್ಟಿ ಆಕೆ ಮೈಮೇಲಿದ್ದ ಚಿನ್ನಾಭರಣ ದೋಚಿದ್ದಾರೆ.

ವೃದ್ಧೆ ಹತ್ಯೆಗೈದು ಚಿನ್ನಾಭರಣ ದೋಚಿದ ಖದೀಮರು..!

ಬೆಂಗಳೂರು : ಆಕೆ 82 ವರ್ಷದ ವೃದ್ದೆ. ಸ್ವಂತ ಮನೆ ಆಸ್ತಿ ಪಾಸ್ತಿ ಚೆನ್ನಾಗಿತ್ತು.. ಮೂರು ಮಕ್ಕಳು.. ಅವ್ರೂ ಬೇರೆ ಬೇರೆ ಕಡೆ ಸೆಟಲ್ ಆಗಿದ್ರು.. ಹೀಗಿರೋವಾಗ ಮನೇಲಿ ಆ ವೃದ್ದೆ ಒಂಟಿಯಾಗೇ ಕಾಲ ಕಳೀತಿದ್ಳು. ಆ ಒಂಟಿ ವೃದ್ದೆಯನ್ನ ಟಾರ್ಗೆಟ್ ಮಾಡಿದ್ದ ಹಂತಕರು ಮನೆಯಲ್ಲೇ ಕೊಲೆ ಮಾಡಿ ಹೋಗಿದ್ದಾರೆ. ಆಕೆ ಮೈಮೇಲಿನ ಚಿನ್ನಾಭರಣ, ಮನೇಲಿದ್ದ ಹಣ, ವಸ್ತುಗಳ ಸಮೇತ ರಾಬರಿ ಮಾಡಿದ್ದಾರೆ.

ಹೌದು‌.. ನಿನ್ನೆ ಸಂಜೆ ಸರಿ ಸುಮಾರು ಆರರಿಂದ ಏಳು ಗಂಟೆ ಸಮಯ ಅನ್ಸುತ್ತೆ. ಮಹಾಲಕ್ಷ್ಮಿ ಲೇಔಟ್ ಠಾಣೆಯ ನೂರು ಮೀಟರ್ ದೂರದಲ್ಲೇ ವಾಸಿಸ್ತಿದ್ದ 82 ವರ್ಷದ ವೃದ್ದೆ ಕಮಲಮ್ಮ ಎಂಬಾಕೆಯನ್ನ ಕೊಲೆ ಮಾಡಿ ರಾಬರಿ ಮಾಡಲಾಗಿದೆ. ಮನೆಗೆ ನುಗ್ಗಿದ್ದ ಆರೋಪಿಗಳು ಕಮಲಮ್ಮರ ಬಾಯಿಗೆ ಟೇಪ್ ಹಾಕಿ, ಕೈಕಾಲು ಕಟ್ಟಿ ಆಕೆ ಮೈಮೇಲಿದ್ದ ಚಿನ್ನಾಭರಣ, ಮನೇಲಿದ್ದ ಒಂದಷ್ಟು ಹಣ ಮತ್ತು ವಸ್ತುಗಳ ಸಮೇತ ಎಸ್ಕೇಪ್ ಆಗಿದ್ದಾರೆ.

ಇದನ್ನೂ ಓದಿ: ‘ತಾಳ್ಮೆ ಕಳೆದುಕೊಳ್ಳಬೇಡಿ' ಸಚಿವ ಸ್ಥಾನ ತಪ್ಪಿದ ಶಾಸಕರಿಗೆ ಡಿಕೆಶಿ ಸಂದೇಶ  

ಅಂದ್ಹಾಗೆ ಹಲವು ವರ್ಷಗಳಿಂದಲೂ ಇಲ್ಲಿ ವಾಸವಿರೋ ಕಮಲಮ್ಮಗೆ ಮೂರು ಜನ ಮಕ್ಕಳಿದ್ರು. ಒಂದು ಗಂಡು ಇಬ್ಬರು ಹೆಣ್ಣುಮಕ್ಕಳು. ಮೂರು ಜನ ಸೆಟಲ್ ಆಗಿದ್ದು ಮಗ ವೈಫೀಲ್ಡ್ ಮತ್ತು ಹೆಣ್ಣುಮಕ್ಕಳು ಬೇರೆ ಬೇರೆ ಕಡೆ ವಾಸಿಸ್ತಿದ್ರು. ಕಮಲಮ್ಮ ಗಂಡ ಆರೇಳು ತಿಂಗಳಿಂದಷ್ಟೇ ತೀರಿಕೊಂಡಿದ್ದು ಮನೇಲಿ ಒಬ್ಬಾಕೆಯೇ ಇರ್ತಿದ್ಳು. ಹೀಗಿರೋವಾಗ ನಿನ್ನೆ ಸಂಜೆ ಸುಮಾರಿಗೆ ಪಕ್ಕದ ಮನೆಯವ್ರು ಮನೆ ಬಿಲ್ ಮಾಡಿದಾಗ ಕಮಲಮ್ಮ ರಿಯಾಕ್ಟ್ ಮಾಡಿರಲಿಲ್ಲ. ನಂತರ ಒಳಗಡೆ ನೋಡಿದಾಗ ಚೇರ್ ಮೇಲೆ ಕಮಲಮ್ಮ ಶವವಾಗಿ ಪತ್ತೆಯಾಗಿದ್ರು. ಬಾಯಿಗೆ ಟೇಪ್ ಹಾಕಿತ್ತು.. ಕೈಕಾಲು ಕಟ್ಟಿತ್ತು. ಮೈಮೇಲಿದ್ದ ಚಿನ್ನಾಭರಣ ಮಾಯವಾಗಿತ್ತು. ಅಜ್ಜಿಯ ಉಸಿರೇ ನಿಂತಿತ್ತು. ಕೊಲೆ ಮಾಡಿದ್ದ ಹಂತಕರು ರಾಬರಿ ಮಾಡಿ ಎಸ್ಕೇಪ್ ಆಗಿದ್ರು.. ಕೂಡಲೇ ಮಹಾಲಕ್ಷ್ಮಿ ಲೇಔಟ್ ಠಾಣೆಗೆ ಪಕ್ಕದ ಮನೆಯವ್ರು ಸುದ್ದಿ ಮುಟ್ಟಿಸಿದಾಗ ಪೊಲೀಸರು ಘಟನಾ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸದ್ಯ ವೃದ್ದೆಯ ಕೊಲೆ ಹಿಂದೆ ಹಲವು ಅನುಮಾನಗಳು ಮೂಡಿವೆ. ಮರ್ಡರ್ ಮಾಡಿರೋ ಸೀನ್ ನೋಡಿದ್ರೆ ಯಾರೋ ಪರಿಚಯಸ್ತರೇ ಮಾಡಿರ್ಬೋದು ಅನ್ನೋ ಸಸ್ಪೆಕ್ಟ್ ಶುರುವಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸ್ತಿರೋ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಸಂಬಂಧಿ, ಸ್ಥಳೀಯರು, ಪರಿಚಯಸ್ಥರನ್ನ ವಿಚಾರಣೆ ನಡೆಸ್ತಿದ್ದಾರೆ. ಸದ್ಯ ಒಂದಷ್ಟು ಕ್ಲೂಗಳು ಕೂಡ ಆರೋಪಿಗಳ ಪತ್ತೆ ಪೊಲೀಸರು ಬಲೆ ಬೀಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Read More