Home> Crime
Advertisement

ʼಲವ್ʼ ಮಾಡಿ ʼಮದುವೆ ಬೇಡʼ ಅಂದ ಪ್ರೇಯಸಿಯನ್ನ ʼಚುಚ್ಚಿ ಚುಚ್ಚಿ ಕೊಂದʼ ಪಾಗಲ್ ಪ್ರೇಮಿ..!

ಪ್ರೀತಿ ಮಾಯೆ ಹುಷಾರು ಎಂಬ ಮಾತಿದೆ‌. ಇಷ್ಟಾದ್ರೂ ಪ್ರೀತಿಸಿವರಿಗಾಗಿ ಅನೇಕರು ಪ್ರಾಣ ಕಳೆದುಕೊಳ್ಳುತ್ತಾರೆ. ಇನ್ನೂ ಕೆಲವರು ಪ್ರೀತಿಸಿದವರ ಪ್ರಾಣವನ್ನು ತೆಗೆದುಬಿಡ್ತಾರೆ.‌ ಹೀಗೆ ಪ್ರೀತ್ಸೆ ಪ್ರೀತ್ಸೆ ಅಂತಾ ಪ್ರೀತಿಸದವಳಿಗೆ ಎಳ್ಳು ನೀರು ಬಿಟ್ಟ ಪಾಗಲ್ ಪ್ರೇಮಿಯ ಭಯಾನಕ  ಕಹಾನಿ ಇಲ್ಲಿದೆ ನೋಡಿ.

ʼಲವ್ʼ ಮಾಡಿ ʼಮದುವೆ ಬೇಡʼ ಅಂದ ಪ್ರೇಯಸಿಯನ್ನ ʼಚುಚ್ಚಿ ಚುಚ್ಚಿ ಕೊಂದʼ ಪಾಗಲ್ ಪ್ರೇಮಿ..!

ಬೆಂಗಳೂರು : ಪ್ರೀತಿ ಮಾಯೆ ಹುಷಾರು ಎಂಬ ಮಾತಿದೆ‌. ಇಷ್ಟಾದ್ರೂ ಪ್ರೀತಿಸಿವರಿಗಾಗಿ ಅನೇಕರು ಪ್ರಾಣ ಕಳೆದುಕೊಳ್ಳುತ್ತಾರೆ. ಇನ್ನೂ ಕೆಲವರು ಪ್ರೀತಿಸಿದವರ ಪ್ರಾಣವನ್ನು ತೆಗೆದುಬಿಡ್ತಾರೆ.‌ ಹೀಗೆ ಪ್ರೀತ್ಸೆ ಪ್ರೀತ್ಸೆ ಅಂತಾ ಪ್ರೀತಿಸದವಳಿಗೆ ಎಳ್ಳು ನೀರು ಬಿಟ್ಟ ಪಾಗಲ್ ಪ್ರೇಮಿಯ ಭಯಾನಕ  ಕಹಾನಿ ಇಲ್ಲಿದೆ ನೋಡಿ.

ನೀನು ಬೇಡ ಅಂದವಳ ಹೆಣದ ಮುಂದೆ ಬಿಕ್ಕಿ ಬಿಕ್ಕಿ ಅಳುತ್ತಿರುವ ಹುಚ್ಚು ಪ್ರೇಮಿ. ಹೆಸರು ದಿನಕರ್ ಬನಾಲಾ. ಮೂಲತ: ಆಂಧ್ರಪ್ರದೇಶದ ಶ್ರೀಕಾಕುಲಂನ ನಿವಾಸಿಯಾಗಿರೋ ದಿನಕರ್ ಇದೇ ಲೀಲಾ ಪವಿತ್ರಾ ಎಂಬಾಕೆಯನ್ನ ಕಳೆದ ಐದು ವರ್ಷದಿಂದ ಪ್ರೀತಿಸ್ತಿದ್ದ. ನಿನ್ನೆ ಬೆಂಗಳೂರಿನ ಮುರುಗೇಶ್ ಪಾಳ್ಯದಲ್ಲಿ ಪ್ರೇಯಸಿ ಲೀಲಾಳನ್ನ 16 ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದ. ತನ್ನ ಜೀವದ ಜೀವ ಲೀಲಾಳನ್ನ ಕೊಂದ್ನಲ್ಲಾ ಅನ್ನೋ ಫೀಲಿಂಗ್ ನಲ್ಲೇ ಪ್ರೇಯಸಿಯ ಶವದ ಮುಂದೆಯೇ ಕುಳಿತು ಬಿಕ್ಕಿಬಿಕ್ಕಿ ಕಣ್ಣೀರು ಸುರಿಸಿದ್ದ.  ಸ್ಥಳಕ್ಕೆ ಬಂದ ಜೀವನ್ ಭೀಮಾನಗರ ಪೊಲೀಸ್ರು ಪ್ರೀತಿಯ ಕೊಲೆಗಾರನನ್ನು ಬಂಧಿಸಿ ವಿಚಾರಣೆ ಶುರುವಿಟ್ಟುಕೊಂಡಿದ್ರು.

ಇದನ್ನೂಓದಿ: ಕ್ಷುಲ್ಲಕ ಕಾರಣಕ್ಕೆ ಬೇಕರಿ ಗ್ಲಾಸ್ ಒಡೆದು ಪುಂಡನ ಅಟ್ಟಹಾಸ..!

ಆರೋಪಿ ದಿನಕರನನ್ನ ಠಾಣೆಗೆ ಕರ್ಕೊಂಡ್ ಬಂದು ಬೆಂಡೆತ್ತೋ ಹೊತ್ತಿಗೆ ಕೊಲೆಯ ಕಂಪ್ಲೀಟ್ ಸ್ಟೋರಿಯನ್ನು ಆತನೇ ಬಾಯ್ಬಿಟ್ಟಿದ್ದ. ಈ ದಿನಕರ್ ಹಾಗೂ ಲೀಲಾ ಆಂಧ್ರಪ್ರದೇಶ ಮೂಲದವರು.. ವೈಜಾಕ್ ನ ಬುಲ್ಲಯ್ಯ ಕಾಲೇಜಿನಲ್ಲಿ ಎಂಎಸ್ಸಿ ಮಾಡೋ ಟೈಮಲ್ಲೇ ಲವ್ ಆಗಿತ್ತು. ಅದಾದ ಬಳಿಕ ಲೀಲಾಳ ಮನೆಯವರ ಬಳಿ ಮದುವೆ ಮಾಡಿ ಕೊಡಿ ಅಂತಾ ದುಂಬಾಲು ಬಿದ್ದಿದ್ದನಂತೆ ಈ ದಿನಕರ್. ಆದ್ರೆ, ಇಬ್ಬರ ಜಾತಿಯೂ ಬೇರೆಬೇರೆಯಾಗಿದ್ದರಿಂದ ಮದುವೆಗೆ ಯುವತಿ ಕುಟುಂಬಸ್ಥರು ಒಪ್ಪಿರಲಿಲ್ಲ. ಇದರಿಂದ ದಿನಕರ್ ಮಾನಸಿಕವಾಗಿ ಕುಗ್ಗಿಹೋಗಿದ್ದ. 

ಕಳೆದ 10 ತಿಂಗಳ ಹಿಂದೆ ಪ್ರೇಯಸಿ ಲೀಲಾ ಮುರುಗೇಶ್ ಪಾಳ್ಯದ ಇದೇ ಒಮೆಗಾ ಹೆಲ್ತ್ ಕೇರ್ ನಲ್ಲಿ ಡಾಟಾ ಅನಲಿಸ್ಟ್ ಆಗಿ ಕೆಲಸ ಮಾಡಿಕೊಂಡು ದಿನಕರನನ್ನ ಕಂಪ್ಲೀಟ್ ಆಗಿ ಮರೆತೇ ಬಿಟ್ಟಿದ್ದಳು. ದಿನಕರ ಲೀಲಾಳ ನೆನಪಲ್ಲೇ ಕಳೆದ 10 ದಿನಗಳ ಹಿಂದೆ ಬೆಂಗಳೂರಿಗೆ ಬಂದು ಲಾಜಿಸ್ ಹೆಲ್ತ್ ಕೇರ್ ಎಂಬ ಕಂಪನಿಗೆ ಕೆಲಸಕ್ಕೆ ಸೇರಿದ್ದ. ಲೀಲಾಳ ನೆನಪಾಗಿ ಫೆಬ್ರವರಿ 27 ರಂದು ಫೋನ್ ಮಾಡಿ ಮಾತನಾಡಿದ್ದ ದಿನಕರನನ್ನ ಬೈದು ಬ್ಲಾಕ್ ಲೀಸ್ಟ್ ಗೆ ಹಾಕಿದ್ದಳು ಲೀಲಾ. ಇಷ್ಟಕ್ಕೇ ಎರಡು ಚಾಕು ಬ್ಯಾಗಲ್ಲಿ ಹಿಡಿದು ಬಂದ ದಿನಕರ ನಿನ್ನೆ ಲೀಲಾಳ ಕಚೇರಿಯ ಮುಂದೆಯೇ ಆಕೆಯನ್ನ ಚುಚ್ಚಿ ಚುಚ್ಚಿ ಕೊಲೆ ಮಾಡಿದ್ದಾನೆ. 

ಇದನ್ನೂಓದಿ:  ಬಿಜೆಪಿ ರಥಯಾತ್ರೆಗೆ ಜೆ.ಪಿ.ನಡ್ಡಾ ಚಾಲನೆ: ಅಸಮಾಧಾನದಿಂದ ಸಚಿವ ಸೋಮಣ್ಣ ಗೈರು!?

ಪ್ರೀತಿ ಅಂದ್ರೆ ಪರಿಶುದ್ಧವಾದ ರೀತಿ-ನೀತಿ ಅಂದ್ಕೊಂಡು ಅದೇ ರೀತಿ ನಡೆದುಕೊಳ್ಳೋರು ಇರ್ತಾರೆ. ಆದ್ರೆ ದಿನಕರ್ ವಿಚಾರದಲ್ಲಿ ಪ್ರೀತಿ ವಿಕೃತಿಯ ಪರಮಾವಧಿ ಮೀರಿದ್ದಾಗಿದೆ. ತನಗೆ ಸಿಗದ ಹುಡುಗಿ ಬೇರೆ ಯಾರಿಗೂ ಸಿಗಬಾರದು ಅಂತಾ ಈ ದಿನಕರ ಪ್ರೇಯಸಿಗೆ ಚಟ್ಟ ಕಟ್ಟಿದ್ದಾನೆ. ಇತ್ತ ಮಾಡಿದ ತಪ್ಪಿಗೆ ಜೀವನ ಹಾಳು ಮಾಡಿಕೊಂಡು ಜೈಲಲ್ಲಿ ಇನ್ಮುಂದೆ ಮುದ್ದೆ ಮುರಿಯುತ್ತಾನೆ. ಅದನೇ ಏನೇ ಇರ್ಲಿ ತಾನಿಷ್ಟಪಟ್ಟ ಹುಡುಗಿ ಸಿಗದಿದ್ದರು ಆಕೆ ಚೆನ್ನಾಗಿರ್ಲಿ ಅಂತಾ ಬಯಸೋ ಅದೆಷ್ಟೋ ಪ್ರೇಮಿಗಳ ನಡುವೆ ಈ ದಿನಕರ ಕಪ್ಪು ಚುಕ್ಕೆಯಾಗಿದ್ದಂತು ಸುಳ್ಳಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More