Home> Crime
Advertisement

Diesel Tanker-Bike Accident : ಬೈಕ್ ಡಿಕ್ಕಿಗೆ ಹೊತ್ತಿ ಉರಿದ ಡಿಸೇಲ್ ಟ್ಯಾಂಕರ್ : ಸುಟ್ಟು ಕರಕಲಾದ ಬೈಕ್ ಸವಾರ

ಘಟನೆ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಬೆಂಡಿಗೇರಿ- ಕಂಚಿಕೆರೆ ರಸ್ತೆಯಲ್ಲಿ ಸಂಭವಿಸಿದೆ. 

Diesel Tanker-Bike Accident : ಬೈಕ್ ಡಿಕ್ಕಿಗೆ ಹೊತ್ತಿ ಉರಿದ ಡಿಸೇಲ್ ಟ್ಯಾಂಕರ್ : ಸುಟ್ಟು ಕರಕಲಾದ ಬೈಕ್ ಸವಾರ

ದಾವಣಗೆರೆ : ಬೈಕ್ ಡಿಕ್ಕಿಯಾಗಿ ಡಿಸೇಲ್ ಟ್ಯಾಂಕರ್ ವೊಂದು ಹೊತ್ತಿ ಉರಿದಿರುವ ಘಟನೆ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಬೆಂಡಿಗೇರಿ- ಕಂಚಿಕೆರೆ ರಸ್ತೆಯಲ್ಲಿ ಸಂಭವಿಸಿದೆ. 

ಘಟನೆಯಲ್ಲಿ ಓರ್ವ ಬೈಕ್ ಸವಾರ ಸುಟ್ಟು ಕರಕಲಾಗಿದ್ದು, ಮತ್ತೊಬ್ಬ ಸುಟ್ಟು ಗಾಯಗೊಂಡಿದ್ದಾನೆ. ಗಾಯಾಳುವನ್ನ ಹರಪನಹಳ್ಳಿ ಸರ್ಕರಿ ತಾಲೂಕು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. 32 ವರ್ಷದ ಮೋರಗೆರೆಯ ನಾಗರಾಜ್ ಸುಟ್ಟು ಕರಕಲಾಗಿದ್ದು, ಚಂದ್ರು(38) ಮೋರಗೆರೆ ಚಿಕಿತ್ಸೆ ಪಡೆಯುತ್ತಿದ್ದಾನೆ.

ಇದನ್ನೂ ಓದಿ : ಆಂಧ್ರದಲ್ಲಿ ಕರ್ನಾಟಕ ಪೊಲೀಸರ ವಾಹನ ಅಪಘಾತ; ಶಿವಾಜಿನಗರ PSI, ಕಾನ್ಸ್ಟೇಬಲ್ ಸೇರಿ ಮೂವರ ದುರ್ಮರಣ!

ಡಿಸೇಲ್ ಟ್ಯಾಂಕರ್ ಮತ್ತು ಬೈಕ್ ಮಧ್ಯ ಡಿಕ್ಕಿ ಸಂಭವಿಸಿದ್ದು, ಬಳಿಕ ಟ್ಯಾಂಕರ್ ರಸ್ತೆ ಬದಿ ಉರುಳಿ ಬಿದ್ದಿದೆ, ನಂತರ ಬೆಂಕಿ ಹೊತ್ತಿಕೊಂಡು ಡಿಸೇಲ್ ಟ್ಯಾಂಕರ್ ಹೊತ್ತಿ ಉರಿದಿದೆ. ಈ ವೇಳೆ ಟ್ಯಾಂಕರ್ ಚಾಲಕ ಹೊರಗೆ ಜಿಗಿದಿದ್ದರಿಂದ ಅಪಾಯದಿಂದ ಪಾರಾಗಿದ್ದಾನೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದು, ಅಷ್ಟರಲ್ಲಾಗಲೇ ಟ್ಯಾಂಕರ್ ಸುಟ್ಟು ಹೋಗಿದೆ.  ಘಟನಾ ಸ್ಥಳಕ್ಕೆ ಹರಪನಹಳ್ಳಿ ಸಿ.ಪಿ.ಐ. ನಾಗರಾಜ ಕಮ್ಮಾರ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶಿಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More