Home> Business
Advertisement

Willful Defaluters: ಉದ್ದೇಶಪೂರ್ವಕವಾಗಿ ಸಾಲ ಮರುಪಾವತಿಸದೆ ಹೋದರೆ ಎಚ್ಚರ! ಇಲ್ಲಿದೆ ಕೇಂದ್ರ ವಿತ್ತ ಸಚಿವೆ ನೀಡಿರುವ ಎಚ್ಚರಿಕೆ

Union Finance Minister Nirmala Sitharaman: ಉದ್ದೇಶಪೂರ್ವಕವಾಗಿ  ಸಾಲ ಮರುಪಾವತಿ ಮಾಡದೆ ಇರುವ ಸುಸ್ತಿದಾರರ ಆಸ್ತಿಯನ್ನು ಜಪ್ತಿ ಮಾಡಿ, ಕಾನೂನಿಯ ಅಡಿಯಲ್ಲಿ ಮಾರಾಟ ಅಥವಾ ಹರಾಜು ಪ್ರಕ್ರಿಯೆಯನ್ನು ನಡೆಸಿ, ಬಂದ ಹಣವನ್ನು ಬ್ಯಾಂಕ್ ಗಳಿಗೆ ನೀಡಲಾಗಿದೆ ಎಂದು ಕೇಂದ್ರ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಹೇಳಿದ್ದಾರೆ.

Willful Defaluters: ಉದ್ದೇಶಪೂರ್ವಕವಾಗಿ ಸಾಲ ಮರುಪಾವತಿಸದೆ ಹೋದರೆ ಎಚ್ಚರ! ಇಲ್ಲಿದೆ ಕೇಂದ್ರ ವಿತ್ತ ಸಚಿವೆ ನೀಡಿರುವ ಎಚ್ಚರಿಕೆ

Union Finance Minister Nirmala Sitharaman: ಉದ್ದೇಶಪೂರ್ವಕ ಸಾಲ ಸುಸ್ತಿದಾರರಿಂದ (Willfull Loan Defaulters) ಬ್ಯಾಂಕ್‌ಗಳು ಪ್ರತಿ ದುಡ್ಡಿಗೆ ದುಡ್ಡು ವಸೂಲಿ ಮಾಡಲಿವೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Union Finance Minister Nirmala Sitharaman) ಮಂಗಳವಾರ ಹೇಳಿದ್ದಾರೆ. ಸಾಲ ಮರುಪಾವತಿಯಲ್ಲಿ ಸುಸ್ತಿದಾರರ ವಿರುದ್ಧ ಭಾರತ ಅಥವಾ ದೇಶದ ಹೊರಗಿರುವ (Economic Offenders) ಪ್ರಕರಣವನ್ನು ಸರ್ಕಾರ ಮುಂದಕ್ಕೆ ತೆಗೆದುಕೊಂಡು ಹೋಗಲಿದೆ ಎಂದು ಅವರು ಹೇಳಿದ್ದಾರೆ. ಪಿಟಿಐನ ಸುದ್ದಿ ಪ್ರಕಾರ, ಪ್ರಧಾನ ಮಂತ್ರಿಗಳ ಅಭಿವೃದ್ಧಿ ಪ್ಯಾಕೇಜ್ ಮಾತ್ರವಲ್ಲದೆ ಕೇಂದ್ರ ಪ್ರಾಯೋಜಿತ ಪ್ರತಿಯೊಂದು ಯೋಜನೆಯು ಕೇಂದ್ರಾಡಳಿತ ಪ್ರದೇಶದ ಫಲಾನುಭವಿಗಳಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರವು ಜಮ್ಮು ಮತ್ತು ಕಾಶ್ಮೀರ ಆಡಳಿತದೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಸೀತಾರಾಮನ್ ಹೇಳಿದ್ದಾರೆ. ಈ ಪ್ರದೇಶದ ಬೆಳವಣಿಗೆಯ ವೇಗವು ದೇಶದ ಇತರ ಭಾಗಗಳಿಗೆ ಸಮನಾಗಿರುತ್ತದೆ ಎಂದು ಖಚಿತಪಡಿಸಿಕೊಳ್ಳುವುದು ಇದರ ಉದ್ದೇಶವಾಗಿದೆ.

ಭಾರತದಲ್ಲಾಗಲಿ ಅಥವಾ ದೇಶದ ಹೊರಗಾಗಲಿ ಇನ್ಮುಂದೆ ತಪ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ

ಕೇಂದ್ರ ಹಣಕಾಸು ಸಚಿವೆ ಉದ್ದೇಶಪೂರ್ವಕವಾಗಿ ಸಾಲ (Bad Loan) ಸುಸ್ತಿದಾರರ ಪ್ರಕರಣಗಳ ವಿರುದ್ಧ ಸರ್ಕಾರವು ತನ್ನ ಕಠಿಣ ಮುಂದುವರೆಸಲಿದೆ ಎಂದು ಹೇಳಿದ್ದಾರೆ. ಆ ಸುಸ್ತಿದಾರರು ಭಾರತದಲ್ಲಿರಲಿ ಅಥವಾ ದೇಶದ ಹೊರಗಿರಲಿ (Economic Offenders), ಅವರ ವಿರುದ್ಧ ಪ್ರಕರಣವನ್ನು ಮುಂದುವರಿಸಲಾಗುತ್ತದೆ. ಹಿಂತಿರುಗಿಸದ ಬ್ಯಾಂಕ್‌ಗಳ ಪ್ರತಿ ಪೈಸೆಯನ್ನು ವಸೂಲಿ ಮಾಡುವುದನ್ನು ಸರ್ಕಾರ ಖಚಿತಪಡಿಸಲಿದೆ ಎಂದು ಸೀತಾರಾಮನ್ ಹೇಳಿದ್ದಾರೆ. ಇದಕ್ಕಾಗಿ, ಅಂತಹ ಸುಸ್ತಿದಾರರ ಆಸ್ತಿಯನ್ನು ಜಪ್ತಿ ಮಾಡಲಾಗುವುದುಮತ್ತು ಅದನ್ನು ಕಾನೂನು ಪ್ರಕ್ರಿಯೆಯ ಅಡಿಯಲ್ಲಿ ಮಾರಾಟ ಮಾಡಿ ಅಥವಾ ಹರಾಜು ಮಾಡಿ ಅದರಿಂದ ಬಂದ ಹಣವನ್ನು ಬ್ಯಾಂಕ್‌ಗಳಿಗೆ ನೀಡಲಾಗುವುದು ಎಂದಿದ್ದಾರೆ. 

ಇದನ್ನೂ ಓದಿ-Vegetable : ಗಗನಕ್ಕೇರುತ್ತಿರುವ ತರಕಾರಿ ಬೆಲೆ! 100 ರೂ.ಗಿಂತ ಹೆಚ್ಚಾದ ಟೊಮೇಟೊ ಬೆಲೆ

ಕಠಿಣವಾಗಿ ವ್ಯವಹರಿಸಲಾಗುವುದು
ಸುದ್ದಿಯ ಪ್ರಕಾರ, ಜಮ್ಮು ಮತ್ತು ಕಾಶ್ಮೀರದಲ್ಲಿ ಪಾರದರ್ಶಕ ರೀತಿಯಲ್ಲಿ ವಿವಿಧ ಕಾಮಗಾರಿಗಳನ್ನು ವೇಗಗೊಳಿಸಲು ಸರ್ಕಾರವು ತನ್ನ ಎಲ್ಲಾ ಸಂಪನ್ಮೂಲಗಳನ್ನು ಉದಾರವಾಗಿ ಹೂಡಿಕೆ ಮಾಡುತ್ತಿದೆ ಎಂದು ಸೀತಾರಾಮನ್ ಹೇಳಿದ್ದಾರೆ. ಬ್ಯಾಂಕ್‌ಗಳಲ್ಲಿ ಅವ್ಯವಹಾರ ನಡೆದಿದ್ದು, ತೆಗೆದುಕೊಂಡ ಸಾಲವನ್ನು ಇಲ್ಲಿಯವರೆಗೆ ಪಾವತಿಸಿಲ್ಲ ಎಂದ ಅವರು, ನಮ್ಮ ವ್ಯವಸ್ಥೆಯು (Banking System) ಸುಸ್ತಿದಾರರ ಜೊತೆಗೆ ಮೊತ್ತವನ್ನು ಹಿಂಪಡೆಯಲಿದೆ ಎಂಬ ಖಾತರಿ ತಮಗಿದೆ ಎಂದು ಹೇಳಿದ್ದಾರೆ. ಇದು ದೇಶದೆಲ್ಲೆಡೆ ನಡೆಯುತ್ತಿದ್ದು, ಉದ್ದೇಶಪೂರ್ವಕವಾಗಿ ಸಾಲ ಮರುಪಾವತಿ ಮಾಡದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹಣಕಾಸು ಸಚಿವರು ಹೇಳಿದ್ದಾರೆ. 

ಇದನ್ನೂ ಓದಿ-E-Commerce: ಈ ನಿಯಮ ಪಾಲಿಸದ ಅಮೆಜಾನ್, ಫ್ಲಿಪ್‌ಕಾರ್ಟ್ ಸೇರಿ 5 ಇ-ಕಾಮರ್ಸ್ ಕಂಪನಿಗಳಿಗೆ ದೊಡ್ಡ ಹೊಡೆತ..!

NPAಗಳಲ್ಲಿ ಸುಧಾರಣೆ ಕಂಡುಬಂದಿದೆ
2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಅಧಿಕಾರಕ್ಕೆ ಬಂದಾಗ ಬ್ಯಾಂಕ್‌ಗಳ ಅನುತ್ಪಾದಕ ಆಸ್ತಿ (Non-Profiting Assets) ಆತಂಕಕಾರಿ ವಿಷಯವಾಗಿತ್ತು ಎಂದು ಸೀತಾರಾಮನ್ ಹೇಳಿದ್ದಾರೆ. NPA ಗಳನ್ನು ಕಡಿಮೆ ಮಾಡಲು ನಾಲ್ಕು 'R ಸೂತ್ರ ರೂಪಿಸಲಾಗಿದೆ. ಇದರ ಅಡಿಯಲ್ಲಿ, ಅಂತಹ ಕೆಟ್ಟ ಸಾಲಗಳನ್ನು ಗುರುತಿಸಲು, ಅವುಗಳನ್ನು ಪರಿಹರಿಸಲು, ಬ್ಯಾಂಕುಗಳಲ್ಲಿ ಬಂಡವಾಳವನ್ನು ತುಂಬಲು ಮತ್ತು ಸುಧಾರಣೆಗಳನ್ನು ಅನುಸರಿಸಲು ಉಪಕ್ರಮಗಳನ್ನು ಕೈಗೊಳ್ಳಲಾಯಿತು. ಅದರ ಧನಾತ್ಮಕ ಫಲಿತಾಂಶವೂ ಬಂದಿದೆ ಎಂದು ಅವರು ಹೇಳಿದ್ದಾರೆ. ಸೀತಾರಾಮನ್ ಎರಡು ದಿನಗಳ ಭೇಟಿಗಾಗಿ ಜಮ್ಮು ಮತ್ತು ಕಾಶ್ಮೀರಕ್ಕೆ ಬಂದಿದ್ದಾರೆ. ಅವರು ಕಾಶ್ಮೀರಕ್ಕೆ ಭೇಟಿ ನೀಡಿ ಸರ್ಕಾರದ ಯೋಜನೆಗಳ ವಿವಿಧ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದ್ದಾರೆ. 

ಇದನ್ನೂ ಓದಿ-LPG Subsidy:ಅಡುಗೆ ಅನಿಲ ಸಿಲಿಂಡರ್ ಮೇಲೆ ಮತ್ತೆ ಸಬ್ಸಿಡಿ ಆರಂಭ, ನಿಮ್ಮ ಖಾತೆಗೆ ಹಣ ಬಂತಾ? ಈ ರೀತಿ ಚೆಕ್ ಮಾಡಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More