Home> Business
Advertisement

Ration Card Update: ಶೀಘ್ರದಲ್ಲಿಯೇ ಈ ಜನರ ಪಡಿತರ ಚೀಟಿ ರದ್ದಾಗಲಿದೆ, ಹೊಸ ಮಾರ್ಗಸೂಚಿಗಳನ್ನು ಜಾರಿಗೊಳಿಸಿದ ಸರ್ಕಾರ

Ration Card News Guidelines: ಸರ್ಕಾರದ ಈ ಮಾರ್ಗಸೂಚಿಗಳ ಪ್ರಕಾರ ನೀವು ಪಡಿತರ ಚೀಟಿಯನ್ನು ಬಳಸದಿದ್ದರೆ, ಶೀಘ್ರದಲ್ಲೇ ಅದನ್ನು ರದ್ದುಗೊಳಿಸಲಾಗುತ್ತದೆ. ಮಾಹಿತಿ ಸರ್ಕಾರಕ್ಕೆ ತಲುಪಿದೆ.
 

Ration Card Update: ಶೀಘ್ರದಲ್ಲಿಯೇ ಈ ಜನರ ಪಡಿತರ ಚೀಟಿ ರದ್ದಾಗಲಿದೆ, ಹೊಸ ಮಾರ್ಗಸೂಚಿಗಳನ್ನು ಜಾರಿಗೊಳಿಸಿದ ಸರ್ಕಾರ

New Ration Card Guidelines: ನೀವು ಪಡಿತರ ಚೀಟಿದಾರರಾಗಿದ್ದರೆ ಮತ್ತು ಕಳೆದ 1 ವರ್ಷದಿಂದ ಅದನ್ನು ಬಳಸುತ್ತಿಲ್ಲ ಎಂದಾದಲ್ಲಿ, ನಿಮ್ಮ ಪಡಿತರ ಚೀಟಿ ರದ್ದಾಗಲಿದೆ. ಸರ್ಕಾರ ಇಂತಹ ನಿರ್ಧಾರ ಕೈಗೊಂಡಿದ್ದು, ಇದನ್ನು ಪಾಲಿಸಲು ಆಹಾರ ಇಲಾಖೆ ಮನೆ ಮನೆಗೆ ತೆರಳಿ ಪಡಿತರ ಚೀಟಿಗಳನ್ನು  ಪರಿಶೀಲಿಸುವ ಜವಾಬ್ದಾರಿಯನ್ನು ಜಿಲ್ಲಾ ವೃತ್ತ ಅಧಿಕಾರಿಗಳಿಗೆ ನೀಡಿದೆ. ಈ ಪರಿಶೀಲನೆಯ ವರದಿಯನ್ನು ಸರಕಾರಕ್ಕೆ ಕಳುಹಿಸಲಾಗುವುದು. ಇದಾದ ನಂತರ ಬಹಳ ದಿನಗಳಿಂದ ಬಳಕೆಯಾಗದ ಪಡಿತರ ಚೀಟಿಗಳು ರದ್ದಾಗಲಿವೆ ಎನ್ನಲಾಗಿದೆ.

ದೆಹಲಿ ಸರ್ಕಾರ ಈ ಮಾರ್ಗಸೂಚಿ ಹೊರಡಿಸಿದೆ

ವಾಸ್ತವದಲ್ಲಿ, ದೆಹಲಿ ಸರ್ಕಾರದ ಪಡಿತರ ಚೀಟಿ ಪರಿಶೀಲನೆಯ ಉದ್ದೇಶವು ಅರ್ಹ ಮತ್ತು ಅಗತ್ಯವಿರುವ ಜನರಿಗೆ ಪಡಿತರ ಚೀಟಿಯ ಪ್ರಯೋಜನವನ್ನು ನೀಡುವುದಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಒಂದು ವರ್ಷದಿಂದ ಪಡಿತರ ತೆಗೆದುಕೊಳ್ಳದ ಪಡಿತರ ಚೀಟಿದಾರರು. ಈ ಯೋಜನೆಯಲ್ಲಿ ಅವರನ್ನು ಅನರ್ಹರೆಂದು ಪರಿಗಣಿಸಲಾಗುವುದು ಮತ್ತು  ಅವರ ಜಾಗದಲ್ಲಿ ಹೊಸದಾಗಿ ಅರ್ಹರನ್ನು ಸೇರಿಸಿ ಪಡಿತರ ವಿತರಿಸಲಾಗುವುದು ಎನ್ನಲಾಗಿದೆ.
2 ಲಕ್ಷಕ್ಕೂ ಅಧಿಕ ಜನರ ಪಡಿತರಚೀಟಿಗಳು ರದ್ದಾಗಲಿವೆ

ಇದನ್ನೂ ಓದಿ-Yamaha RX100 ಶೀಘ್ರದಲ್ಲಿಯೇ ಮಾರುಕಟ್ಟೆಗೆ ಬಿಡುಗಡೆ! ಎದೆಬಡಿತ ಹೆಚ್ಚಿಸುವ ಮಾಹಿತಿ ಬಹಿರಂಗ

ವರದಿಗಳ ಪ್ರಕಾರ, ಪಡಿತರ ಚೀಟಿ ಹೊಂದಿರುವ, ಆದರೆ ಪಡಿತರ ತೆಗೆದುಕೊಳ್ಳದ ಸುಮಾರು 2 ಲಕ್ಷ ಜನರ ಡೇಟಾವನ್ನು ಸರ್ಕಾರ ಕಲೆಹಾಕಿದೆ ಎನ್ನಲಾಗಿದೆ. ಇದಲ್ಲದೇ ಕೆಲವು ಪಡಿತರ ಚೀಟಿದಾರರು ವರ್ಷದಲ್ಲಿ ಒಂದು ಅಥವಾ ಎರಡು ಬಾರಿ ಮಾತ್ರ ಪಡಿತರ ತೆಗೆದುಕೊಳ್ಳುತ್ತಿದ್ದಾರೆ. ಅಧಿಕಾರಿಗಳು ಈ ಎಲ್ಲ ಪಡಿತರ ಚೀಟಿದಾರರಿಂದ ಮನೆ ಮನೆಗೆ ತೆರಳಿ ಪಡಿತರ ತೆಗೆದುಕೊಳ್ಳದಿರಲು ಕಾರಣ ಪತ್ತೆ ಹಚ್ಚುವ ಕೆಲಸ ಮಾಡಲಿದ್ದಾರೆ ಮತ್ತು ಅವರಿಂದ ಸರಿಯಾದ ಉತ್ತರ ಸಿಗದಿದ್ದರೆ ಅಂತಹ ಎಲ್ಲಾ ಪಡಿತರ ಚೀಟಿಗಳನ್ನು ರದ್ದುಪಡಿಸಲಾಗುವುದು ಎನ್ನಲಾಗಿದೆ.

ಇದನ್ನೂ ಓದಿ-Nitin Gadkari: ಭಾರತದ ಆರ್ಥಿಕತೆ ಕುರಿತು ನಿತೀನ್ ಗಡ್ಕರಿ ಮಹತ್ವದ ಹೇಳಿಕೆ, ಕೇಳಿ ನೀವೂ ಖುಷಿಪಡಿ

ದೆಹಲಿಯಲ್ಲಿ 17.83 ಲಕ್ಷ ಜನರು ಪಡಿತರ ಲಾಭ ಪಡೆಯುತ್ತಿದ್ದಾರೆ
ದೆಹಲಿ ಸರ್ಕಾರದ ಅಂಕಿಅಂಶಗಳ ಪ್ರಕಾರ, ಪ್ರಸ್ತುತ ಸುಮಾರು 17.83 ಲಕ್ಷ ಪಡಿತರ ಚೀಟಿದಾರರಿದ್ದು, ಅವರು ಪಡಿತರ ಪ್ರಯೋಜನವನ್ನು ಪಡೆಯುತ್ತಿದ್ದಾರೆ. ಇದೇ ವೇಳೆ, 2021 ರಿಂದ 2022 ರ ನಡುವೆ, ಹೆಚ್ಚಿನ ಪಡಿತರ ಚೀಟಿದಾರರು ತಮ್ಮ ಪಡಿತರವನ್ನು ತೆಗೆದುಕೊಂಡಿಲ್ಲ. ಈಗ ಅಂತಹವರನ್ನು ಪರಿಶೀಲಿಸಿದ ನಂತರ ಅವರ ಪಡಿತರ ಚೀಟಿಯನ್ನು ಸರ್ಕಾರ ರದ್ದುಪಡಿಸುತ್ತದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More