Home> Business
Advertisement

Good News: ರೈತರಿಗೊಂದು ಗುಡ್ ನ್ಯೂಸ್, ಈ ನಂಬರ್ ಗೆ ಮಿಸ್ ಕಾಲ್ ಕೊಡಿ, ಖಾತೆಗೆ ಹಣ ಬರುತ್ತೆ!

PM Kisan Scheme: ದೇಶದ ಕೋಟ್ಯಂತರ ರೈತ ಬಾಂಧವರಿಗೊಂದು ಸಂತಸದ ಸುದ್ದಿ ಪ್ರಕಟವಾಗಿದೆ. ನೀವೂ ಕೂಡ ಒಂದು ವೇಳೆ ರೈತರಾಗಿದ್ದರೆ ದೇಶದ ಸರ್ಕಾರಿ ಬ್ಯಾಂಕ್ ಪಿಎನ್‌ಬಿ ನಿಮಗಾಗಿ ದೊಡ್ಡ ಉಡುಗೊರೆಯನ್ನು ನೀಡಿದೆ. ಹೌದು, ಈಗ ನಿಮಗೆ ಹಣ ಬೇಕಾದರೆ ನೀವು ಕೇವಲ ಒಂದು ಮಿಸ್ಡ್ ಕಾಲ್ ಕೊಟ್ಟರೆ ಸಾಕು.
 

Good News: ರೈತರಿಗೊಂದು ಗುಡ್ ನ್ಯೂಸ್, ಈ ನಂಬರ್ ಗೆ ಮಿಸ್ ಕಾಲ್ ಕೊಡಿ, ಖಾತೆಗೆ ಹಣ ಬರುತ್ತೆ!

PNB Latest News: ದೇಶದ ಕೋಟ್ಯಂತರ ರೈತ ಬಾಂಧವರಿಗೊಂದು ಸಂತಸದ ಸುದ್ದಿ ಪ್ರಕಟವಾಗಿದೆ. ನೀವೂ ಕೂಡ ಒಂದು ವೇಳೆ ರೈತರಾಗಿದ್ದರೆ ದೇಶದ ಸರ್ಕಾರಿ ಬ್ಯಾಂಕ್ ಪಿಎನ್‌ಬಿ ನಿಮಗಾಗಿ ದೊಡ್ಡ ಉಡುಗೊರೆಯನ್ನು ನೀಡಿದೆ. ಹೌದು, ಈಗ ನಿಮಗೆ ಹಣ ಬೇಕಾದರೆ ನೀವು ಕೇವಲ ಒಂದು ಮಿಸ್ಡ್ ಕಾಲ್ ಕೊಟ್ಟರೆ ಸಾಕು. ರೈತರ ಆದಾಯವನ್ನು ಹೆಚ್ಚಿಸಲು ಸರ್ಕಾರವು ಅನೇಕ ಯೋಜನೆಗಳನ್ನು ನಡೆಸುತ್ತಿದೆ ಮತ್ತು ಹಲವು ಯೋಜನೆಗಳನ್ನು ಜಾರಿಗೆ ತರುತ್ತಿದೆ, ಅದರ ಅಡಿಯಲ್ಲಿ ಹಣವನ್ನು ನೇರವಾಗಿ ರೈತರ ಖಾತೆಗಳಿಗೆ ವರ್ಗಾಯಿಸಲಾಗುತ್ತಿದೆ. ಇದಕ್ಕಾಗಿ ನೀವು ಯಾವ ಸಂಖ್ಯೆಗಳಿಗೆ ಮಿಸ್ಡ್ ಕಾಲ್ ಮಾಡಬೇಕೆಂದುದನ್ನು ತಿಳಿದುಕೊಳ್ಳೋಣ ಬನ್ನಿ,

ಟ್ವೀಟ್ ಮಾಡಿ ಮಾಹಿತಿ ನೀಡಿದ PNB
ಪಂಜಾಬ್ ನ್ಯಾಷನಲ್ ಬ್ಯಾಂಕ್ ತನ್ನ ಅಧಿಕೃತ ಟ್ವೀಟ್‌ನಲ್ಲಿ ರೈತರಿಗೆ ಹಣದ ಅಗತ್ಯವಿದ್ದರೆ, ಇದೀಗ ರೈತರು ಅದರ ಬಗ್ಗೆ ಚಿಂತಿಸಬೇಕಾಗಿಲ್ಲ. ರೈತರು ಮಿಸ್ಡ್ ಕಾಲ್ ಮಾಡಿದರೆ ಸಾಕು, ನಂತರ ಅವರ ಖಾತೆಗೆ ಹಣ ಬರುತ್ತದೆ ಎಂದು ಹೇಳಿದೆ.

ಹೇಗೆ ಅರ್ಜಿ ಸಲ್ಲಿಸಬೇಕು?
ಪಿಎನ್‌ಬಿಯಿಂದ ರೈತರಿಗೆ ಕೃಷಿ ಸಾಲ ಸೌಲಭ್ಯವನ್ನು ನೀಡಲಾಗುತ್ತಿದ್ದು, ಇದರ ಅಡಿಯಲ್ಲಿ ರೈತರ ಆದಾಯವನ್ನು ಹೆಚ್ಚಿಸುವುದರ ಜೊತೆಗೆ ಅವರ ಜೀವನವೂ ಉತ್ತಮವಾಗಿಸುವ ಗುರಿ ಹೊಂದಲಾಗಿದೆ. ನೀವು ಎಸ್‌ಎಂಎಸ್ ಮೂಲಕ, ಮಿಸ್ಡ್ ಕಾಲ್ ನೀಡುವ ಮೂಲಕ ಮತ್ತು ಆನ್‌ಲೈನ್‌ನಲ್ಲಿಯೂ ಈ ಸಾಲಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.

ಇದನ್ನೂ ಓದಿ-PMKFPO Yojana: ಕೋಟ್ಯಾಂತರ ರೈತ ಬಾಂಧವರಿಗೆ ಬಹುದೊಡ್ಡ ಉಡುಗೊರೆ ನೀಡಿದ PM ಮೋದಿ! ಖಾತೆ ಸೇರಲಿವೆ 15 ಲಕ್ಷ ರೂ.

ಈ ಎಲ್ಲಾ ಸಂಖ್ಯೆಗಳನ್ನು ನಿಮ್ಮ ಫೋನ್‌ನಲ್ಲಿ ಸೇವ್ ಮಾಡಿಕೊಳ್ಳಿ 
>> ಕೃಷಿ ಸಾಲಕ್ಕಾಗಿ, ನೀವು 56070 ಗೆ SMS ಮಾಡಿ ಮತ್ತು ಅದರಲ್ಲಿ LOAN ಎಂದು ಬರೆಯಬೇಕು.
>> ಇದನ್ನು ಹೊರತುಪಡಿಸಿ ನೀವು 18001805555 ಗೆ ಮಿಸ್ಡ್ ಕಾಲ್ ನೀಡಬಹುದು.
>> ನೀವು ಕಾಲ್ ಸೆಂಟರ್ ಅನ್ನು 18001802222 ಗೆ ಸಂಪರ್ಕಿಸಬಹುದು.
>> ಇದನ್ನು ಹೊರತುಪಡಿಸಿ, ನೀವು PNB One ಅಪ್ಲಿಕೇಶನ್ ಮೂಲಕವೂ ಅರ್ಜಿ ಸಲ್ಲಿಸಬಹುದು.
>> ನೀವು ನೆಟ್ ಬ್ಯಾಂಕಿಂಗ್ ವೆಬ್‌ಸೈಟ್ netpnb.com ಮೂಲಕವೂ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ-Online Banking: ನೀವೂ ಕೂಡ ಸ್ಟೇಟ್ ಬ್ಯಾಂಕಿನ ಈ ಸೇವೆ ಬಳಸುತ್ತೀರಾ? ತಕ್ಷಣ ಎಚ್ಚೆತ್ತುಕೊಳ್ಳಿ!

ಯಾವುದೇ ಷರತ್ತುಗಳಿಲ್ಲದೆ ಸಾಲ ನೀಡಲಾಗುವುದು
ಪಿಎನ್‌ಬಿ ವತಿಯಿಂದ ದೇಶದ ರೈತರಿಗೆ ಹಲವು ರೀತಿಯ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಇದರಲ್ಲಿ, ನೀವು ಯಾವುದೇ ಷರತ್ತುಗಳಿಲ್ಲದೆ ಬಹಳ ಸುಲಭವಾಗಿ ಸಾಲವನ್ನು ಪಡೆಯಬಹುದು. ಇದಕ್ಕಾಗಿ ನೀವು ಸುಲಭವಾಗಿ ಅರ್ಜಿ ಸಲ್ಲಿಸಬಹುದು. ಇದಲ್ಲದೇ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಡಿ ರೈತರಿಗೆ ಕೇಂದ್ರ ಸರ್ಕಾರದಿಂದ ಮೂರು ಕಂತುಗಳಲ್ಲಿ 2000 ರೂ.ಕೂಡ ಲಭಿಸುತ್ತಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More