Home> Business
Advertisement

Indias Biggest Fraud: ಇದುವರೆಗಿನ ಅತಿ ದೊಡ್ಡ ಬ್ಯಾಂಕ್ ಫ್ರಾಡ್! 28 ಬ್ಯಾಂಕುಗಳಿಗೆ 22,842 ಕೋಟಿ ರೂ.ಗಳ ಪಂಗನಾಮ ಹಾಕಿದೆ ಈ ಕಂಪನಿ

Indias Biggest Bank Fraud - ದೇಶದ ಇದುವರೆಗಿನ ಅತಿದೊಡ್ಡ ಬ್ಯಾಂಕಿಂಗ್ ವಂಚನೆ ಪ್ರಕರಣದಲ್ಲಿ ಕೇಂದ್ರೀಯ ತನಿಖಾ ದಳ (CBI) FIR ದಾಖಲಿಸಿದೆ. ವರದಿಗಳ ಪ್ರಕಾರ ABG Shipyard ಕಂಪನಿಯ ವಿರುದ್ಧ ಈ ಪ್ರಕರಣ ದಾಖಲಿಸಲಾಗಿದೆ.

Indias Biggest Fraud: ಇದುವರೆಗಿನ ಅತಿ ದೊಡ್ಡ ಬ್ಯಾಂಕ್ ಫ್ರಾಡ್! 28 ಬ್ಯಾಂಕುಗಳಿಗೆ 22,842 ಕೋಟಿ ರೂ.ಗಳ ಪಂಗನಾಮ ಹಾಕಿದೆ ಈ ಕಂಪನಿ

ನವದೆಹಲಿ: Indias Biggest Bank Fraud - ದೇಶದ ಇದುವರ ಅತಿದೊಡ್ಡ ಬ್ಯಾಂಕಿಂಗ್ ವಂಚನೆ ಪ್ರಕರಣದಲ್ಲಿ ಕೇಂದ್ರೀಯ ತನಿಖಾ ದಳ (CBI) FIR ದಾಖಲಿಸಿದೆ. ಮಾಹಿತಿ ಪ್ರಕಾರ ABG Shipyard ವಿರುದ್ಧ ಈ ಪ್ರಕರಣ ದಾಖಲಾಗಿದೆ. ಸುಮಾರು 22 ಸಾವಿರ ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ ಎನ್ನಲಾಗಿದೆ. ABG Shipyard ಮತ್ತು ಅದರ ನಿರ್ದೇಶಕರ ವಿರುದ್ಧ 28 ಬ್ಯಾಂಕ್‌ಗಳಿಗೆ 22,842 ಕೋಟಿ ರೂಪಾಯಿ ವಂಚನೆ ಎಸಗಿದ  FIR ದಾಖಲಿಸಲಾಗಿದೆ ಎಂದು ಸಿಬಿಐ ಅಧಿಕಾರಿ ತಿಳಿಸಿದ್ದಾರೆ. ಕಂಪನಿಯು ಹಡಗು ನಿರ್ಮಾಣ ಮತ್ತು ಹಡಗು ದುರಸ್ತಿ ವ್ಯವಹಾರದಲ್ಲಿ ತೊಡಗಿಸಿಕೊಂಡಿದೆ. ಇದರ Shipyard ಗುಜರಾತ್‌ನ ದಹೇಜ್ ಮತ್ತು ಸೂರತ್‌ನಲ್ಲಿವೆ.

ಇಡೀ ವಿಷಯ ಏನು?

ABG Shipyard  ಮತ್ತು ಅದರ ನಿರ್ದೇಶಕರು 28 ಬ್ಯಾಂಕ್‌ಗಳಿಗೆ 22,842 ಕೋಟಿ ರೂ.ಗೆ ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ. ABG Shipyard ಮತ್ತು ಅದರ ನಿರ್ದೇಶಕರಾದ ರಿಷಿ ಅಗರ್ವಾಲ್, ಸಂತಾನಂ ಮುತ್ತುಸ್ವಾಮಿ ಮತ್ತು ಅಶ್ವಿನಿ ಅಗರ್ವಾಲ್ ಅವರು ಬ್ಯಾಂಕ್‌ಗಳಿಗೆ 22,000 ಕೋಟಿ ರೂ.ಗೂ ಹೆಚ್ಚು ವಂಚನೆ ಎಸಗಿದ್ದಾರೆ ಎಂದು ಕೇಂದ್ರ ತನಿಖಾ ದಳ ಹೇಳಿದೆ.

ಇದನ್ನೂ ಓದಿ-Multibagger Stock: ಹೂಡಿಕೆದಾರರಿಗೆ ಬಂಪರ್ ರಿಟರ್ನ್ಸ್ ನೀಡಿ ಶ್ರೀಮಂತರನ್ನಾಗಿಸಿದ ಷೇರು..!

ಹಲವು ಬ್ಯಾಂಕ್‌ಗಳಿಂದ ಸಾವಿರಾರು ಕೋಟಿ ವಂಚನೆ
SBI
ದೂರಿನ ಪ್ರಕಾರ, ಕಂಪನಿಯು 2925 ಕೋಟಿ ರೂಪಾಯಿ ಸಾಲವನ್ನು ಪಡೆದುಕೊಂಡಿದೆ. ICICI ಯಿಂದ 7089 ಕೋಟಿಗಳು, IDBI ನಿಂದ 3634 ಕೋಟಿಗಳು, ಬ್ಯಾಂಕ್ ಆಫ್ ಬರೋಡಾ (BOB) ದಿಂದ 1614 ಕೋಟಿಗಳು,  PNB ಯಿಂದ 1244 ಕೋಟಿಗಳು ಮತ್ತು IOB ನಿಂದ 1228 ಕೋಟಿಗಳು ಬಾಕಿ ಉಳಿಸಿಕೊಂಡಿದೆ ಎನ್ನಲಾಗಿದೆ.

ಇದನ್ನೂ ಓದಿ-Sensex: ಷೇರುಪೇಟೆಯಲ್ಲಿ ಭಾರಿ ಕುಸಿತ, 773 ಅಂಕ ಕುಸಿದ ಸೆನ್ಸೆಕ್ಸ್

ನೀರವ್ ಮೋದಿಗಿಂತ ದೊಡ್ಡ ವಂಚನೆ
ಈ ಪ್ರಕರಣದಲ್ಲಿ CBI ಇದೀಗ ಹೆಚ್ಚಿನ ತನಿಖೆ ಆರಂಭಿಸಿದೆ. ಎಲ್ಲಾ ಸಂಬಂಧಿತ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ. ಈ ಹಿಂದೆ, ವಜ್ರದ ವ್ಯಾಪಾರಿ ನೀರವ್ ಮೋದಿ (Nirav Modi) ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ (PNB Bank Fraud) 14 ಸಾವಿರ ಕೋಟಿ ರೂ. ಎಸಗಿದ ಸುದ್ದಿ ಭಾರಿ ಚರ್ಚೆಯಲ್ಲಿತ್ತು. ದೇಶ-ವಿದೇಶಗಳಲ್ಲಿ ನೀರವ್ ಮೋದಿಯ ಹಲವು ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಅವರನ್ನು ಲಂಡನ್‌ನಿಂದ ಭಾರತಕ್ಕೆ ಹಸ್ತಾಂತರಿಸುವ ಪ್ರಯತ್ನವೂ ನಡೆಯುತ್ತಿದೆ. ಇನ್ನೊಂದೆಡೆ  ವಿಜಯ್ ಮಲ್ಯ (Vijay Malya) ದೇಶದ ವಿವಿಧ ಬ್ಯಾಂಕುಗಳಿಗೆ ಸುಮಾರು 9 ಸಾವಿರ ಕೋಟಿ ರೂಪಾಯಿಗಳ ವಂಚನೆ ಎಸಗಿರುವ ಪ್ರಕರಣವೂ ಪ್ರಮುಖ  ಸುದ್ದಿಯಾಗಿತ್ತು. ಮದ್ಯದೊರೆಯನ್ನು ಕೂಡ ಭಾರತಕ್ಕೆ ಹಸ್ತಾಂತರಿಸುವ ಕಸರತ್ತು ಅಂತಿಮ ಹಂತದಲ್ಲಿದೆ. ಈ ಸಂಚಿಕೆಯಲ್ಲಿ, ಈ ಪ್ರಕರಣವನ್ನು ದೊಡ್ಡ ವಂಚನೆ ಎಂದು ಪರಿಗಣಿಸಲಾಗುತ್ತಿದೆ. 

ಇದನ್ನೂ ಓದಿ-Paytm offer : 4 ರೂಪಾಯಿ ಖರ್ಚು ಮಾಡಿದರೆ 100 ರೂಪಾಯಿ ಕ್ಯಾಶ್‌ಬ್ಯಾಕ್..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More